ಶಿವಮೊಗ್ಗ : ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಮಂಡನೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ತಮ್ಮ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ಚರ್ಚೆಗೆ ತೆರಳಿ ಕಿಸ್ಮಸ್ ಹಬ್ಬದ ಶುಭಾಷಯ ಕೋರಿದ್ದಾರೆ.
ಸಚಿವರು ನಿನ್ನೆಯಿಂದ ತಮ್ಮ ತವರು ಕ್ಷೇತ್ರದಲ್ಲಿದ್ದಾರೆ. ಇದರಿಂದ ತೀರ್ಥಹಳ್ಳಿಯ ಪ್ರಧಾನ ಚರ್ಚ್ಗೆ ತೆರಳಿ, ಪಾಧರ್ಗೆ ಕಿಸ್ಮಸ್ ಹಬ್ಬದ ಶುಭಾಷಯ ಕೋರಿದರು. ನಂತರ ಕ್ರೈಸ್ತ ಮುಖಂಡರ ಜೊತೆ ಚರ್ಚಿಸಿದರು.
ಈ ವೇಳೆ ಮುಖಂಡರೊಂದಿಗೆ ಫೋಟೋಗೆ ಪೋಸ್ ನೀಡಿದರು. ಮತಾಂತರ ನಿಷೇಧ ಕಾಯ್ದೆಯ ನಡುವೆ ಗೃಹ ಸಚಿವರು ಚರ್ಚ್ಗೆ ಭೇಟಿ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.