ETV Bharat / state

ಸಚಿವ ಗಡ್ಕರಿಯಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ವೈಮಾನಿಕ ಸಮೀಕ್ಷೆ

author img

By

Published : Jan 5, 2023, 12:37 PM IST

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಕಾಮಗಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರಿಂದು ವೈಮಾನಿಕ ಸಮೀಕ್ಷೆಯ ಮೂಲಕ ಪರಿಶೀಲನೆ ನಡೆಸಿದರು.

Union Minister Nitin Gadkari inspected  Gadkari inspected of Bangalore Mysore Expressway  Bangalore Mysore Expressway  ಬೆಂ ಮೈ ಎಕ್ಸ್‌ಪ್ರೆಸ್‌ ವೇ ವೈಮಾನಿಕ ಸಮೀಕ್ಷೆ  ಎಕ್ಸ್‌ಪ್ರೆಸ್‌ ವೇ ವೈಮಾನಿಕ ಸಮೀಕ್ಷೆ ನಡೆಸಿದ ಗಡ್ಕರಿ  ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಪರಿಶೀಲನೆ  ಕೇಂದ್ರ ಸಚಿವ ನಿತಿನ್​ ಗಡ್ಕರಿಯಿಂದ ವೈಮಾನಿಕ ಪರಿಶೀಲನೆ  ಹೆಲಿಕ್ಯಾಪ್ಟರ್ ಮೂಲಕ ಗಡ್ಕರಿ ಸಮೀಕ್ಷೆ  ಮಾರ್ಚ್​ ಅಂತ್ಯದೊಳಗೆ ಹೆದ್ದಾರಿ ಉದ್ಘಾಟನೆ  ಕೇಂದ್ರ ಸಚಿವ ನಿತಿನ್​ ಗಡ್ಕರಿ ಟೆಸ್ಟ್​ ಡ್ರೈವ್​ ಪ್ರಾಣಿಗಳು ರಸ್ತೆಗೆ ಬಾರದಂತೆ ತಂತಿ ಬೇಲಿ
ಕಾರು ಚಲಾಯಿಸಿ ಏನ್​ ಹೇಳಲಿದ್ದಾರೆ ಕೇಂದ್ರ ಸಚಿವ

ರಾಮನಗರ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಕಾಮಗಾರಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಶೀಲನೆ ನಡೆಸಿದರು. ರಾಮನಗರ ಜಿಲ್ಲೆಯ ಜಿಗೇನಹಳ್ಳಿ ಬಳಿ ಎರಡು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಈ ಹೆಲಿಪ್ಯಾಡ್​ನಿಂದ ಬಸವನಪುರವರೆಗೂ ಗಡ್ಕರಿ ಅವರೇ ಕಾರ್ ಡ್ರೈವ್ ಮಾಡಿಕೊಂಡು ರಸ್ತೆಯ ಸ್ಥಿತಿಗತಿ ಪರೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಮೀಕ್ಷೆಯ ಬಳಿಕ ಸಚಿವರು ಮಾಧ್ಯಮಗಳೊಂದಿಗೆ ಸಂವಾದ ನಡೆಸುವರು.

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇ ವೀಕ್ಷಣೆಗೆ ನಿತಿನ್ ಗಡ್ಕರಿ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ರಸ್ತೆ ಸಂಪರ್ಕ ಬಂದ್ ಮಾಡಲಾಗಿತ್ತು. ಕಳೆದ ಬಾರಿ ಮಳೆ ಬಂದು ಹೆದ್ದಾರಿ ಸಂಪೂರ್ಣ ಜಲಾವೃತವಾಗಿತ್ತು. ಅವೈಜ್ಞಾನಿಕ ಕಾಮಗಾರಿ ಎಂದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದೀಗ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ.

  • #WATCH | Union Minister for Road Transport & Highways Nitin Gadkari inspected the progress of the Bengaluru – Chennai Expressway which is a 262 Km 8-lane layout worth Rs 16,730 Crores.

    (Source: Nitin Gadkari's office) pic.twitter.com/3LfDrKP61n

    — ANI (@ANI) January 5, 2023 " class="align-text-top noRightClick twitterSection" data=" ">

ಮಾರ್ಚ್​ ಅಂತ್ಯದೊಳಗೆ ಹೆದ್ದಾರಿ ಉದ್ಘಾಟನೆ: ಮಾರ್ಚ್ ಅಂತ್ಯದ ವೇಳೆಗೆ ಹೆದ್ದಾರಿ ಉದ್ಘಾಟನೆ ಸಾಧ್ಯತೆ ಇದೆ. ಈ ಮುಖೇನ ಬೆಂಗಳೂರಿನಿಂದ ಮೈಸೂರಿಗೆ ಕೇವಲ ಒಂದೂವರೆ ಗಂಟೆ ಪ್ರಯಾಣ ಮಾಡಬಹುದು. ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಗಡ್ಕರಿ ನಡೆಸಲಿರುವ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.

ಗಡ್ಕರಿ ಟೆಸ್ಟ್​ ಡ್ರೈವ್​: ವೈಮಾನಿಕ ಸಮೀಕ್ಷೆಯ ಬಳಿಕ ನಿತಿನ್​ ಗಡ್ಕರಿ ಅವರೇ ಕಾರ್​ ಡ್ರೈವ್​ ಮಾಡಿ ರಸ್ತೆ ಕಾಮಗಾರಿ ಪರಿಶೀಲಿಸಲಿದ್ದಾರೆ ಎಂದು ಹೇಳಲಾಗಿದೆ. ಸಚಿವರ ಕಾರ್ಯಕ್ರಮ ಮುಗಿಯುವವರೆಗೂ ಎಕ್ಸ್‌ಪ್ರೆಸ್‌ ವೇನ ಬೈಪಾಸ್‌ ಬಂದ್‌ ಆಗಲಿದೆ. ಹೀಗಾಗಿ ಪ್ರಯಾಣಿಕರು ಬೈಪಾಸ್‌ ಬದಲು ಹಳೆಯ ರಸ್ತೆಗಳಲ್ಲಿ ಸಂಚರಿಸಬೇಕು. ಈ ಹಿಂದೆ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಗಂಟೆಗೆ 180 ಕಿ.ಮೀ ವೇಗದಲ್ಲಿ ಕಾರ್ ಚಲಾಯಿಸಿ ಗಡ್ಕರಿ ದಾಖಲೆ ಬರೆದಿದ್ದರು.

ಪ್ರಾಣಿಗಳು ರಸ್ತೆಗೆ ಬಾರದಂತೆ ತಂತಿ ಬೇಲಿ: ಎಕ್ಸ್‌ಪ್ರೆಸ್‌ ವೇನಲ್ಲಿ ಆಟೋ, ಟ್ರ್ಯಾಕ್ಟರ್, ಎತ್ತಿನಗಾಡಿ, 200 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳಿಗೆ ಪ್ರವೇಶ ನಿರ್ಬಂಧಿಸಲು ಹೆದ್ದಾರಿ ಪ್ರಾಧಿಕಾರ ಚಿಂತಿಸಿದೆ. ಇಂತಹ ವಾಹನಗಳು ಸರ್ವಿಸ್ ರಸ್ತೆಯಲ್ಲೇ ಚಲಿಸಬೇಕು. ಎಕ್ಸ್‌ಪ್ರೆಸ್‌ವೇ ಎಡ-ಬಲದಲ್ಲಿ ಆರಡಿ ಉದ್ದದ ತಂತಿಬೇಲಿ ಹಾಕಲಾಗಿದೆ. ಇದರಿಂದ ಜಾನುವಾರುಗಳು ರಸ್ತೆಗೆ ನುಗ್ಗುವುದು ತಪ್ಪಲಿದ್ದು, ಅಪಘಾತಗಳೂ ಕಡಿಮೆ ಆಗಲಿವೆ.

ಇದನ್ನೂ ಓದಿ: ದೇಹದ ತೂಕ ಇಳಿಸಿಕೊಂಡೇ ಕ್ಷೇತ್ರಕ್ಕೆ 2,300 ಕೋಟಿ ಅನುದಾನ ತಂದ ಸಂಸದ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.