ETV Bharat / state

ಕಟ್ಕೊಂಡ್‌ ಹೆಂಡ್ತಿ ಜತೆಗೇ ತಮ್ಮನ ಕಳ್ ಸಂಬಂಧ?.. ಪಾಂಡವಪುರದಲ್ಲಿ ಹಾರೆಯಿಂದ ಇರಿದು ಕೊಲೆಗೈದ ಅಣ್ಣ..

author img

By

Published : Sep 27, 2019, 9:43 AM IST

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹಿನ್ನಲೆ ಅಣ್ಣನಿಂದ ತಮ್ಮನ ಕಗ್ಗೊಲೆ

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆ ಅಣ್ಣನೇ ತಮ್ಮನನ್ನು ಹಾರೆಯಿಂದ ಇರಿದು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.

ಮಂಡ್ಯ: ತನ್ನ ಪತ್ನಿಯೊಂದಿಗೆ ಸಹೋದರ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಅಣ್ಣನೇ ತಮ್ಮನನ್ನು ಹಾರೆಯಿಂದ ಇರಿದು ಕೊಲೆ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.

ಮಹೇಂದ್ರ(41) ಅಣ್ಣನಿಂದ ಕೊಲೆಯಾದ ವ್ಯಕ್ತಿ. ಹಾಗೂ ಮಂಜುನಾಥ್ ಕೊಲೆ ಮಾಡಿದವ. ನಿನ್ನೆ ರಾತ್ರಿ ಇದೇ ವಿಚಾರವಾಗಿ ಇಬ್ಬರ ನಡುವೆ ಕಲಹ ನಡೆದಿದ್ದು, ತಮ್ಮ ಮಲಗಿದ್ದಾಗ ಅಣ್ಣ ಅವನನ್ನು ಹಾರೆಯಿಂದ ಇರಿದು ಕೊಂದಿದ್ದಾನೆ. ಇನ್ನು, ಘಟನಾ ಸ್ಥಳಕ್ಕಾಗಮಿಸಿದ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

Intro:ಮಂಡ್ಯ: ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧವನ್ನು ಸಹೋದರ ಹೊಂದಿದ್ದಾನೆ ಎಂದು ಅಣ್ಣನೇ ತಮ್ಮನನ್ನು ಹಾರೆಯಿಂದ ಇರಿದು ಕೊಲೆ ಮಾಡಿದ ಘಟನೆ ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಮಹೇಂದ್ರ(41) ಅಣ್ಣನಿಂದ ಕೊಲೆಯಾದ ದುರ್ದೈವಿಯಾಗಿದ್ದು, ಅಣ್ಣ ಮಂಜುನಾಥ್ ಕೊಲೆ ಮಾಡಿದ ಪಾತಕಿಯಾಗಿದ್ದಾನೆ.
ರಾತ್ರಿ ಇದೇ ವಿಚಾರವಾಗಿ ಇಬ್ಬರ ನಡುವೆ ಕಲಹ ನಡೆದಿತ್ತು. ಮಲಗಿದ್ದಾಗ ತಮ್ಮನನ್ನು ಹಾರೆಯಿಂದ ಇರಿದು ಕೊಲೆ ಮಾಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದಾರೆ.
ಕೊಲೆಗೈದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿರುವ ಪಾಂಡವಪುರ ಪೊಲೀಸ್ ಠಾಣೆ ಅಧಿಕಾರಿಗಳು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.