ETV Bharat / state

ಮಂಡ್ಯ: ಅಕ್ರಮ ರಸಗೊಬ್ಬರ ದಾಸ್ತಾನಿನ ಮೇಲೆ ಕೃಷಿ ಅಧಿಕಾರಿಗಳ ದಾಳಿ

author img

By

Published : Jan 19, 2023, 10:54 PM IST

agriculture-officials-attack-on-illegal-fertilizer-stock
ಮಂಡ್ಯ: ಅಕ್ರಮ ರಸಗೊಬ್ಬರ ದಾಸ್ತಾನಿನ ಮೇಲೆ ಕೃಷಿ ಅಧಿಕಾರಿಗಳ ದಾಳಿ

ಸಬ್ಸಿಡಿ ದರದಲ್ಲಿ ವಿತರಿಸುತ್ತಿದ್ದ ರಸಗೊಬ್ಬರ ಅಕ್ರಮ ಶೇಖರಣೆ - ನಕಲಿ ಗೊಬ್ಬರದ ಮೂಲಕ ರೈತರಿಗೆ ವಂಚನೆ - 1200ಕ್ಕೂ ಹೆಚ್ಚು ಯೂರಿಯಾದ ಚೀಲ ವಶಪಡಿಸಿಕೊಂಡ ಅಧಿಕಾರಿಗಳು.

ಮಂಡ್ಯ: ಸರ್ಕಾರದಿಂದ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸುತ್ತಿದ್ದ ರಸಗೊಬ್ಬರವನ್ನು ಅಕ್ರಮವಾಗಿ ಶೇಖರಣೆ ಮಾಡಿ, ಬೇರೆಯವರಿಗೆ ಮಾರಟ ಮಾಡುತ್ತಿದ್ದ ದಾಸ್ತಾನಿನ ಮೇಲೆ ಕೃಷಿ ಅಧಿಕಾರಿಗಳು ಇಂದು ದಾಳಿ ನಡೆಸಿ 1000ಕ್ಕೂ ಹೆಚ್ಚು ರಸಗೊಬ್ಬರ ಚೀಲಗಳನ್ನು ವಶಪಡಿಸಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ನಕಲಿ ರಸಗೊಬ್ಬರ ಜಾಲವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ನಕಲಿ ಗೊಬ್ಬರದ ಮೂಲಕ ರೈತರಿಗೆ ವಂಚನೆ ಮಾಡುತ್ತಿದ್ದ ದಂಧೆಗೆ ಕೃಷಿ ಅಧಿಕಾರಿಗಳು ಕಡಿವಾಣ ಕೂಡಾ ಹಾಕಿದ್ದರು. ಸರ್ಕಾರ ರೈತರಿಗೆ ಸಬ್ಸಿಡಿಯಲ್ಲಿ ರಸಗೊಬ್ಬರ ನೀಡುತ್ತಿದೆ. ರೈತರಿಗೆ ಸಮರ್ಪಕವಾಗಿ ಸಿಗಬೇಕಾದ ರಸಗೊಬ್ಬರ ಅಕ್ರಮವಾಗಿ ದಾಸ್ತಾನಿನಲ್ಲಿ ಸಂಗ್ರಹವಾಗಿ ಬೇರೆಡೆ ಮಾರಾಟ ಆಗುತ್ತಿದೆ. ಈ ಮೂಲಕ ಕೃತಕ ಅಭಾವ ಸೃಷ್ಟಿಸುವ ಯತ್ನಗಳೂ ನಡೆದಿವೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚಿಣ್ಯ ಗ್ರಾಮದ ಡೈರಿ ರಮೇಶ್ ಎಂಬುವವರ ತೋಟದ ಮನೆ ಮೇಲೆ 10ಕ್ಕೂ ಹೆಚ್ಚು ಕೃಷಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ರಸಗೊಬ್ಬರ ಶೇಖರಣೆ ಮಾಡಿಟ್ಟಿದ್ದ ಸುಮಾರು 1200ಕ್ಕೂ ಹೆಚ್ಚು ಯೂರಿಯಾ ರಸಗೊಬ್ಬರದ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಆರೋಪಿ ರಮೇಶ್ ಮೇಲೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: 'ನ್ಯಾಯ ಬೇಕು ಮೋದಿ' ಪೋಸ್ಟರ್ ಅಭಿಯಾನದಲ್ಲಿ ಪ್ರಧಾನಿಗೆ 12 ಪ್ರಶ್ನೆ ಕೇಳಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ..

ಇನ್ನೂ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಮಾತನಾಡಿದ ಕೃಷಿ ಅಧಿಕಾರಿ ಜಯರಾಮ್, ''ಸರ್ಕಾರದಿಂದ ರೈತರಿಗೆ ನೀಡುತ್ತಿದ್ದ ಯೂರಿಯಾವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಮತ್ತೆ ಅದನ್ನು ರೀ ಬ್ಯಾಗ್​ ಮಾಡಿ, ವಾಣಿಜ್ಯ ಉದ್ದೇಶಕ್ಕಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಮತ್ತು ಮೈಸೂರು ವಿಭಾಗದ ಉಪ ಕೃಷಿ ನಿರ್ದೇಶಕರು, ಸಹಾಯಕ ನಿರ್ದೇಶಕರು, ಸಹ ನಿರ್ದೇಶಕರು ಎಲ್ಲರೂ ಸೇರಿ ಬೆಳಗಿನ ಜಾವ ನಾಗಮಂಗಲ ತಾಲೂಕಿನ ಚಿಣ್ಯ ಗ್ರಾಮಕ್ಕೆ ರಮೇಶ್​ ಎಮಬುವವರ ತೋಟದ ಮನೆಗೆ ಆಗಮಿಸಿ ದಾಳಿ ನಡೆಸಿದ್ದೇವೆ‘‘ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ‘‘ಇಂಡಿಗೋ ವಿಮಾನದ ಎಮರ್ಜೆನ್ಸಿ ಡೋರ್​ ಓಪನ್​ ಮಾಡಿಲ್ಲ.. ಕ್ಷಮಾಪಣೆಯನ್ನೂ ಕೇಳಿಲ್ಲ‘‘: ಅಣ್ಣಾಮಲೈ ಸ್ಪಷ್ಟನೆ

ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಸರ್ಕಾರದಿಂದ ರೈತರಿಗೆ 260 ರೂ. ಗಳಿಗೆ ಯೂರಿಯಾ ಗೊಬ್ಬರನ್ನು ವಿತರಿಸಲಾಗುತ್ತದೆ, ಅದನ್ನು ಅಕ್ರಮವಾಗಿ ದಾಸ್ತಾನಿನಲ್ಲಿ ಶೇಖರಣೆ ಮಾಡಿ, ಸರ್ಕಾರ ನೀಡುವ ರಸಗೊಬ್ಬರವನ್ನು ಬೇರೆ ಚೀಲಕ್ಕೆ ಬದಲಾಯಿಸಿ, ಹೆಚ್ಚಿನ ಬೆಲೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ದಂಧೆಕೋರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಪ್ರಸಕ್ತ ವರ್ಷ ಶಬರಿಮಲೆಯಲ್ಲಿ ದಾಖಲೆಯ 300 ಕೋಟಿ ಆದಾಯ ಸಂಗ್ರಹ: 7 ಕೋಟಿ ಮೌಲ್ಯದ ನಾಣ್ಯಗಳ ಎಣಿಕೆ ಬಾಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.