ETV Bharat / state

ಆಶಾ ಕಾರ್ಯಕರ್ತೆ, ಸೋಂಕಿತರ ಮನೆಯವರಿಗೆ ಪುಂಡರ ಕಿರಿಕಿರಿ; ವಿಡಿಯೋ!

author img

By

Published : Jun 9, 2021, 12:19 PM IST

Updated : Jun 9, 2021, 12:49 PM IST

few are disturbing people of kodagu
ಆಶಾ ಕಾರ್ಯಕರ್ತೆ, ಸೋಂಕಿತರಿರುವ ಮನೆಯವರಿಗೆ ಪುಂಡರ ಕಿರಿಕಿರಿ

ಹಾನಗಲ್ಲು ಬಾಣೆಯಲ್ಲಿ ಕೆಲವು ಕುಟುಂಬದವರಿಗೆ ಸೋಂಕು ತಗುಲಿದ್ದು, ಕೆಲವು ಮನೆಗಳನ್ನು ಸೀಲ್​ಡೌನ್ ಮಾಡಲಾಗಿತ್ತು. ಅವರನ್ನು ವಿಚಾರಿಸಲು ಬಂದ ಗ್ರಾಮ ಪಂಚಾಯತ್​ ಅಧ್ಯಕ್ಷೆ ಮತ್ತು ಆಶಾ ಕಾರ್ಯಕರ್ತೆ ಜತೆಗೆ ಸೋಂಕಿತರಿರುವ ಕುಟುಂಬದವರಿಗೆ ಮದ್ಯ ವ್ಯಸನಿಗಳು ಆವಾಜ್ ಹಾಕಿ ಕಿರಿಕಿರಿಯನ್ನುಂಟುಮಾಡಿದ್ದಾರೆ.

ಕೊಡಗು: ಆಶಾ ಕಾರ್ಯಕರ್ತೆ ಮತ್ತು ಸೀಲ್​ಡೌನ್ ಆದ ಮನೆಯವರಿಗೆ ಮದ್ಯ ವ್ಯಸನಿಗಳು ಆವಾಜ್ ಹಾಕಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹಾನಗಲ್ಲು ಬಾಣೆ ಗ್ರಾಮದಲ್ಲಿ ನಡೆದಿದೆ.

ಪುಂಡರ ಕಿರಿಕಿರಿ; ವಿಡಿಯೋ

ಹಾನಗಲ್ಲು ಬಾಣೆಯಲ್ಲಿ ಕೆಲವು ಕುಟುಂಬದವರಿಗೆ ಸೋಂಕು ತಗುಲಿದ್ದು, ಕೆಲವು ಮನೆಗಳನ್ನು ಸೀಲ್​ಡೌನ್ ಮಾಡಲಾಗಿತ್ತು. ಈ ಹಿನ್ನೆಲೆ, ಗ್ರಾಮ ಪಂಚಾಯತ್​ ಅಧ್ಯಕ್ಷೆ ಮತ್ತು ಆಶಾ ಕಾರ್ಯಕರ್ತೆ ಸೇರಿ ಸೋಂಕಿತರ ಆರೋಗ್ಯ ವಿಚಾರಿಸಿಕೊಂಡು ಅಗತ್ಯ ವಸ್ತುಗಳನ್ನು ಕೊಟ್ಟು ಬರುವಾಗ ಈ ಘಟನೆ ನಡೆದಿದೆ. ಕೆಲವು ಪುಂಡರು ಅಲ್ಲಿಗೆ ಏಕೆ ಹೋಗಿದ್ದಿರಿ? ಅಲ್ಲಿಗೆ ಹೋಗಬಾರದಿತ್ತು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾನವೀಯತೆ ಮರೆತು ಮೃಗಗಳ ರೀತಿಯಲ್ಲಿ ಪುಂಡರು ವರ್ತಿಸಿದ್ದಾರೆಂದು ಆಶಾ ಕಾರ್ಯಕರ್ತೆ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಸೋಂಕಿತೆ ಮೇಲೆ ಆ್ಯಂಬುಲೆನ್ಸ್​​ ಡ್ರೈವರ್​ನಿಂದ ಅತ್ಯಾಚಾರಕ್ಕೆ ಯತ್ನ, ಆರೋಪ!

ಸೋಂಕಿತರ ಮನೆ ಬಳಿ ಸೀಲ್​ಡೌನ್ ಮಾಡಿ ಕಟ್ಟಿದ್ದ ಟೇಪ್​ಗಳನ್ನು ಕೆಲವು ಪುಂಡರು ಕಿತ್ತು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಎಲ್ಲ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯತ್​​ ಸದಸ್ಯರು ಮತ್ತು ಆಶಾ ಕಾರ್ಯಕರ್ತೆಯರು ದೂರು ನೀಡಿದ್ರೂ ಕೂಡ ಪೊಲೀಸರು ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ. ಸೀಲ್ ಡೌನ್ ಟೇಪ್ ಕಿತ್ತೆಸೆದು ಗಲಾಟೆ ಮಾಡಿದ ಪುಂಡರ ವಿರುದ್ಧ ಕ್ರಮ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Last Updated :Jun 9, 2021, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.