ETV Bharat / state

ಗುಂಡುಗುರ್ತಿ ಬಳಿ ಸೇತುವೆಗೆ ಹಾನಿ: ತೆಲಂಗಾಣ -ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕಡಿತ

author img

By

Published : Oct 15, 2020, 4:01 PM IST

Bridge damage
ಸೇತುವೆ ಹಾನಿ

ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಹಲವೆಡೆ ರಸ್ತೆ, ಸೇತುವೆಗಳಿಗೆ ಹಾನಿ ಉಂಟಾಗಿದ್ದು, ತೆಲಂಗಾಣ - ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕಡಿತವಾಗಿದೆ.

ಕಲಬುರಗಿ: ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ ಹಲವೆಡೆ ರಸ್ತೆ, ಸೇತುವೆಗಳಿಗೆ ಹಾನಿ ಉಂಟಾಗಿದ್ದು, ಗುಂಡುಗುರ್ತಿ ಬಳಿ ಸೇತುವೆ ಭಾಗಶಃ ಹಾನಿ ಸಂಭವಿಸಿದ್ದು, ತೆಲಂಗಾಣ - ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕಡಿತವಾಗಿದೆ.

ಮಳೆಗೆ ಗುಂಡುಗುರ್ತಿ ಬಳಿ ಸೇತುವೆ ಹಾನಿ

ಜಿಲ್ಲೆಯಲ್ಲಿ ಮಹಾಮಳೆಗೆ ಹಲವೆಡೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಗಳಿಗೂ ಹಾನಿ ಸಂಭವಿಸಿದ್ದು, ಆ ರಸ್ತೆಗಳು ಬಂದ್​ ಆಗಿದೆ. ಇದರಿಂದಾಗಿ ಸೇಡಂ - ಹೈದರಾಬಾದ್, ಚಿತ್ತಾಪುರ ರಸ್ತೆ ಸಂಚಾರವೂ ಕೂಡ ಸ್ಥಗಿತವಾಗಿದೆ.

ಸದ್ಯ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ‌. ಮಳೆಯಿಂದಾಗಿ ಹಳ್ಳ ಉಕ್ಕಿ ಹರಿದು ಸಾವಿರಾರು ಎಕರೆ ಬೆಳೆ ಕೂಡ ನಾಶವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.