ETV Bharat / state

ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ

author img

By

Published : Aug 10, 2020, 5:52 PM IST

Body of a drowned man found in a river
ಯುವಕನ ಶವ ಪತ್ತೆ

ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಹಾನಗಲ್ ತಾಲೂಕಿನ ಸೋಮಾಪುರ ಗ್ರಾಮದ ಬಳಿ ಪತ್ತೆಯಾಗಿದೆ. ಸುಮಾರು ಹತ್ತರಿಂದ ಹದಿನೈದು ಕಿ.ಮೀ ದೂರದವರೆಗೆ ಮೃತದೇಹ ತೇಲಿಕೊಂಡು ಬಂದಿದೆ.

ಹಾನಗಲ್(ಹಾವೇರಿ): ವರದಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಹಾನಗಲ್ ತಾಲೂಕಿನ ಸೋಮಾಪುರ ಗ್ರಾಮದ ಬಳಿ ಪತ್ತೆಯಾಗಿದೆ.

ತಾಲೂಕಿನ ಇನಾಂಲಕಮಾಪುರ ಗ್ರಾಮದ ಚಂದ್ರಶೇಖರ ದಳವಾಯಿ(25), ಕಳೆದ ಆಗಸ್ಟ್ 8, 2020ರ ಸಂಜೆ ವರದಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ. ನದಿಯ ಮಧ್ಯದಲ್ಲಿರೋ ಪ್ರದೇಶದಲ್ಲಿದ್ದ ಎಮ್ಮೆಗಳ ರಕ್ಷಣೆಗೆ ಯುವಕ ನದಿಗೆ ಜಿಗಿದಿದ್ದ. ನಿನ್ನೆ ಬೆಳಗ್ಗೆಯಿಂದ ಕಾರ್ಯಾಚರಣೆ ಮಾಡಿದ್ದರೂ, ಯುವಕನ ಸುಳಿವು ಸಿಕ್ಕಿರಲಿಲ್ಲ. ಇಂದು ಸೋಮಾಪುರ ಗ್ರಾಮದ ಬಳಿ ವರದಾ ನದಿ ದಡದಲ್ಲಿ ಮೃತದೇಹ ಪತ್ತೆಯಾಗಿದೆ. ಸುಮಾರು ಹತ್ತರಿಂದ ಹದಿನೈದು ಕಿ.ಮೀ ದೂರ ನೀರಿನಲ್ಲಿ ಮೃತದೇಹ ತೇಲಿಕೊಂಡು ಬಂದಿದೆ.

ಯುವಕನ ಶವ ಪತ್ತೆ

ಯುವಕನಿಗೆ ಕಳೆದ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.