ಹಾಸನ: ಹಾಸನ ಲೋಕಸಭಾ ಕ್ಷೇತ್ರ ಸೇರಿದಂತೆ 3 ಕ್ಷೇತ್ರಗಳಲ್ಲೂ ಕೂಡ ಜೆಡಿಎಸ್ ಬಹು ಮತಗಳಿಂದ ಗೆಲ್ಲುತ್ತದೆ ಎಂದು ಭವಾನಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನದಿಂದ ಹೊಳೆನರಸೀಪುರಕ್ಕೆ ತೆರಳುವ ಮಾರ್ಗ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಉತ್ತಮ ಕೆಲಸ ಮಾಡಿದ್ದಾರೆ. ಸುಮಾರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ.
ಎಲ್ಲಾ ಕಡೆಯಿಂದಲೂ ಕೂಡ ಪ್ರಜ್ವಲ್ ರೇವಣ್ಣ ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ನಮಗೆ ಕುತೂಹಲ ಇರುವುದು ಗೆಲುವಿಗಲ್ಲ, ಲೀಡ್ನಲ್ಲಿ. ಅಷ್ಟೇ ಅಲ್ಲ ಹೆಚ್ಎಮ್ಟಿ (ತುಮಕೂರು, ಮಂಡ್ಯ, ಹಾಸನ) ಅನ್ನೋ ಪದ ಯಾರು ಬಳಸಿದರು ನನಗೆ ಗೊತ್ತಿಲ್ಲ. ಆದರೆ ಈ ಮೂರು ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದರು.