ETV Bharat / state

ಮೈ ತುಂಬಾ ಸಾಲ: ಹಾಸನ ಯುವಕ ಚಿಕ್ಕಮಗಳೂರು ಲಾಡ್ಜ್​ನಲ್ಲಿ ಆತ್ಮಹತ್ಯೆ

author img

By

Published : Feb 26, 2021, 4:26 AM IST

Hassan young man committed suicide, Hassan young man committed suicide in Chikmagalur lodge, Chikmagalur news, Chikmagalur crime news, ಹಾಸನ ಯುವಕ ಆತ್ಮಹತ್ಯೆ, ಹಾಸನ ಯುವಕ ಚಿಕ್ಕಮಗಳೂರು ಲಾಡ್ಜ್​ನಲ್ಲಿ ಆತ್ಮಹತ್ಯೆ, ಚಿಕ್ಕಮಗಳೂರು ಸುದ್ದಿ, ಚಿಕ್ಕಮಗಳೂರು ಅಪರಾಧ ಸುದ್ದಿ,
ಹಾಸನ ಯುವಕ ಚಿಕ್ಕಮಗಳೂರು ಲಾಡ್ಜ್​ನಲ್ಲಿ ಆತ್ಮಹತ್ಯೆ

ಮೈ ತುಂಬಾ ಸಾಲಾ ಮಾಡಿಕೊಂಡು ಮರು ಪಾವತಿಸಲಾಗದೆ ಹಾಸನ ಯುವಕನೊಬ್ಬ ಚಿಕ್ಕಮಗಳೂರು ಲಾಡ್ಜ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಚಿಕ್ಕಮಗಳೂರು: ಲಾರ್ಡ್​ನಲ್ಲಿ ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಕಡೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ವಿಶ್ವಾಸ್(28) ಮೃತ ಯುವಕ ಎಂದು ಗುರುತಿಸಲಾಗಿದೆ. ವಿಶ್ವಾಸ್ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ನಿವಾಸಿಯಾಗಿದ್ದಾನೆ. ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.

ತುಂಬಾ ಸಾಲ ಮಾಡಿಕೊಂಡಿರುವುದಾಗಿ ಡೆತ್ ನೋಟ್​ನಲ್ಲಿ ಉಲ್ಲೇಖ ಮಾಡಿದ್ದು, ನನ್ನ ಸಾವಿಗೆ ಸಾಲವೇ ಕಾರಣ ಎಂದು ವಿಶ್ವಾಸ್ ತಿಳಿಸಿದ್ದಾರೆ.

ಘಟನಾಸ್ಥಳಕ್ಕೆ ಕಡೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.