ETV Bharat / state

ಚಿಕ್ಕಬಳ್ಳಾಪುರ ಎಸಿಬಿ ದಾಳಿ ಪ್ರಕರಣಕ್ಕೆ ಹೊಸ ಟ್ವಿಸ್ಟ್​: ಲಂಚದ ಹಣದಲ್ಲಿ ಶಾಸಕನಿಗೂ ಪಾಲು?

author img

By

Published : Oct 18, 2019, 11:39 PM IST

ಅನರ್ಹ ಶಾಸಕ ಸುಧಾಕರ್

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಈ ದೂರು ದಾಖಲಾಗಿರುವುದು ಅನರ್ಹ ಶಾಸಕ ಸುಧಾಕರ್ ಪಾಲಿಗೆ ಮುಳ್ಳಾದಂತಿದೆ. ಲಂಚದ ಹಣದಲ್ಲಿಯೂ ಶಾಸಕರಿಗೆ 5 ಲಕ್ಷದ ಹಣ ಕೊಡಬೇಕು ಎನ್ನುವ ಅಂಶ ಎಸಿಬಿ ಅಧಿಕಾರಿಗಳು ದಾಖಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ ಎನ್ನಲಾಗ್ತಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.

ಚಿಕ್ಕಬಳ್ಳಾಪುರ: ಗುರುವಾರವಷ್ಟೇ ನಗರ ಪ್ರಾಧಿಕಾರದ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದರು. ಸದ್ಯ ಈ ಪ್ರಕರಣಕ್ಕೆ ಎಸಿಬಿ ಅಧಿಕಾರಿಗಳ ದೂರಿನ ಪ್ರತಿ ಮತ್ತೊಂದು ಟ್ವಿಸ್ಟ್ ಗೆ ಅನುವು ಮಾಡಿಕೊಟ್ಟಿದೆ.

ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಈ ದೂರು ದಾಖಲಾಗಿರುವುದು ಅನರ್ಹ ಶಾಸಕ ಸುಧಾಕರ್ ಪಾಲಿಗೆ ಮುಳ್ಳಾದಂತಿದೆ. ಲಂಚದ ಹಣದಲ್ಲಿಯೂ ಶಾಸಕರಿಗೆ 5 ಲಕ್ಷ ರೂಪಾಯಿ ಹಣ ಕೊಡಬೇಕು ಎನ್ನುವ ಅಂಶ ಎಸಿಬಿ ಅಧಿಕಾರಿಗಳು ದಾಖಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ ಎನ್ನಲಾಗ್ತಿದ್ದು, ಇದು ಚರ್ಚೆಗೆ ಗ್ರಾಸವಾಗುತ್ತಿದೆ.

chikkaballapura acb ride
ಎಸಿಬಿ ಅಧಿಕಾರಿಗಳಿಗೆ ಉದ್ಯಮಿ ನೀಡಿದ್ದ ದೂರಿನ ಪ್ರತಿ

40% ಭೂ ಪರಿವರ್ತನೆಗೊಂಡ ನಿವೇಶನಗಳ ಮಾರಾಟಕ್ಕೆ ಉದ್ಯಮಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ 9 ಲಕ್ಷ ರೂಪಾಯಿ ಹಣಕ್ಕೆ ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಅಲ್ಲದೆ, ಲಂಚದ ಹಣದಲ್ಲಿ 5 ಲಕ್ಷ ಹಣವನ್ನು ಶಾಸಕರಿಗೂ ಕೊಡಬೇಕೆಂದು, ಬೇಕಾದರೆ ಶಾಸಕರಿಗೆ ಕಾಲ್ ಮಾಡಿ 4 ಲಕ್ಷ ಕೊಡಿ ಎಂದು ಹೇಳಿದ್ದರಂತೆ. ಸದ್ಯ ಇದನ್ನೆಲ್ಲ ಉದ್ಯಮಿ ಕಾಲ್ ರೆಕಾರ್ಡ್ ಮಾಡಿದ್ದು, ಎಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರು.

chikkaballapura acb ride
ಎಸಿಬಿ ಅಧಿಕಾರಿಗಳಿಗೆ ಉದ್ಯಮಿ ನೀಡಿದ್ದ ದೂರಿನ ಪ್ರತಿ

ಕಳೆದ ದಿನವಷ್ಟೇ ಬೆಂಗಳೂರಿನ ಉದ್ಯಮಿ ರಾಮಾಜಿನಪ್ಪ ದೂರಿನನ್ವಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 3 ಲಕ್ಷ ಹಣವನ್ನು ಸ್ವೀಕರಿಸುವ ವೇಳೆ ಅಧಿಕಾರಿ ಕೃಷ್ಣಪ್ಪ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಉಪಚುನಾವಣೆಯ ಹೊಸ್ತಿಲಲ್ಲಿ ಅನರ್ಹ ಶಾಸಕನ ಹೆಸರು ಬಯಲಿಗೆ ಬಂದಿರುವ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಎಸಿಬಿ ದೂರಿನ ಪ್ರತಿಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ.

Intro:ನೆನ್ನೆಯಷ್ಟೇ ನಗರ ಪ್ರಾಧಿಕಾರದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದು ಸದ್ಯ ಈ ಪ್ರಕರಣಕ್ಕೆ ಎಸಿಬಿ ಅಧಿಕಾರಿಗಳ ದೂರಿನ ಪ್ರತಿ ಮತ್ತೊಂದು ಟ್ವಿಸ್ಟ್ ಗೆ ಅನುವು ಮಾಡಿಕೊಟ್ಟಿದೆ.


Body:ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆ ಹತ್ತಿರವಿರುವ ಸಂಧರ್ಭದಲ್ಲಿ ಈ ದೂರು ದಾಖಲಾಗಿರುವುದು ಅನರ್ಹ ಶಾಸಕ ಸುಧಾಕರ್ ಪಾಲಿಗೆ ಮುಳ್ಳಾದಂತಿದೆ.ಲಂಚದ ಹಣದಲ್ಲಿಯೂ ಶಾಸಕರಿಗೆ 5 ಲಕ್ಷದ ಹಣ ಕೊಡಬೇಕು ಎನ್ನುವ ಅಂಶ ಎಸಿಬಿ ಅಧಿಕಾರಿಗಳು ದಾಖಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದ್ದು ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗುತ್ತಿದೆ.

40% ಭೂ ಪರಿವರ್ತನೆಗೊಂಡ ನಿವೇಶನಗಳ ಮಾರಾಟಕ್ಕೆ ಉದ್ಯಮಿ ಅರ್ಜಿ ಸಲ್ಲಿಸಿದ್ದರು.ಈಗಾಗಿ 9 ಲಕ್ಷ ಹಣಕ್ಕೆ ನಗರಭಿವೃದ್ದಿ ಪ್ರಾಧಿಕಾರಿ ಅಧಿಕಾರಿಗಳು ಬೇಡಿಕೆ ಇಟ್ಟಿದ್ದು ಅದರಲ್ಲಿ 5 ಲಕ್ಷ ಹಣವನ್ನು ಶಾಸಕರಿಗೂ ಕೊಡಬೇಕೆಂದು,ಬೇಕಾದರೆ ಶಾಸಕರಿಗೆ ಕಾಲ್ ಮಾಡಿ 4 ಲಕ್ಷ ಕೊಡಿ ಎಂದು ಹೇಳಿದ್ದಾರೆ.ಸದ್ಯ ಇದನೆಲ್ಲಾ ಉದ್ಯಮಿ ಕಾಲ್ ರೆಕಾರ್ಡ್ ಮಾಡಿದ್ದು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಕಳೆದ ದಿನವಷ್ಟೇ ಬೆಂಗಳೂರಿನ ಉದ್ಯಮಿ ರಾಮಾಜಿನಪ್ಪ ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು 3 ಲಕ್ಷ ಹಣವನ್ನು ಸ್ವೀಕರಿಸುವ ವೇಳೆ ಅಧಿಕಾರಿ ಕೃಷ್ಣಪ್ಪ ಬಲೆಗೆ ಬಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆದರೆ ಉಪಚುನಾವಣೆಯ ಹೊಸ್ತಿಲಲ್ಲಿ ಶಾಸಕನ ಹೆಸರು ಭಯಲಿಗೆ ಬಂದಿರುವುದು ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಎಸಿಬಿ ದೂರಿನ ಪ್ರತಿಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.