ETV Bharat / state

ಶರಣರ ವಚನಗಳು ಯಾವುದೇ ವೇದಗಳಿಗೂ ಕಡಿಮೆ ಇಲ್ಲ.. ಶ್ರೀ ಶ್ರೀ ರವಿಶಂಕರ್​ ಗುರೂಜಿ..

author img

By

Published : Feb 3, 2020, 5:51 PM IST

50th commemoration of shri nagabhushan shivayogi
ಶ್ರೀನಾಗಭೂಷಣ ಶಿವಯೋಗಿಗಳ 50ನೇ ಪುಣ್ಯಸ್ಮರಣೆ

ಬಸವ ಕಲ್ಯಾಣದ ಮುಚಳಂಬ ಗ್ರಾಮದಲ್ಲಿ ಶ್ರೀನಾಗಭೂಷಣ ಶಿವಯೋಗಿಗಳ 50ನೇ ಪುಣ್ಯಸ್ಮರಣೆ ಸುವರ್ಣಮಹೋತ್ಸವ ಕಾರ್ಯಕ್ರಮ ನಡೆಯಿತು.

ಬಸವಕಲ್ಯಾಣ: ಶರಣರು ರಚಿಸಿದ ವಚನಗಳು ಯಾವುದೇ ವೇದ ಹಾಗೂ ಗ್ರಂಥಗಳಿಗೂ ಕಡಿಮೆ ಇಲ್ಲ. ಎಲ್ಲಾ ಗ್ರಂಥಗಳ ಸಾರ ವಚನ ಸಾಹಿತ್ಯದಲ್ಲಿ ಅಡಗಿದೆ ಎಂದು ಬೆಂಗಳೂರಿನ ದಿ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್​​ ಗುರೂಜಿ ಹೇಳಿದರು.

ತಾಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದ ಶ್ರೀನಾಗಭೂಷಣ ಶಿವಯೋಗಿಗಳ 50ನೇ ಪುಣ್ಯಸ್ಮರಣೆ ಸುವರ್ಣಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ನೀಡಿದ ಈ ನೆಲ ಅತ್ಯಂತ ಪವಿತ್ರ ಎಂದರು.

ಶ್ರೀ ಶ್ರೀ ರವಿಶಂಕರ್​ ಗುರೂಜಿ

ಬಸವಣ್ಣನ ನೇತೃತ್ವದಲ್ಲಿ ಅಂದು ಶರಣರು ರಚಿಸಿದ ವಚನ ಸಾಹಿತ್ಯ ಬೆಳೆಯಬೇಕು. ಶರಣರ ಅನುಭವದಿಂದ ರಚನೆಯಾದ ವಚನಗಳು ಮನಕ್ಕೆ ತಟ್ಟಬೇಕು. ಅವು ಜೀವನದ ಮೇಲೆ ಅಗಾಧ ಪರಿಣಾಮ ಬೀರುತ್ತವೆ ಎಂದರು.

ಜಗತ್ತಿನಲ್ಲಿಯೇ ಭಾರತೀಯ ಸಂಸ್ಕೃತಿಗೆ ಮಹತ್ವದ ಸ್ಥಾನವಿದೆ. ಸಂಸ್ಕೃತಿ ಎನ್ನುವುದು ಜನಗಳ ಮನದಲ್ಲಿ ಮನೆ ಮಾಡಿದೆ. ನಮ್ಮ ದೇಶದ ಸಂಸ್ಕೃತಿ ಉಳಿಸಿ, ಬೆಳೆಸಿ ಅದನ್ನ ಸಂರಕ್ಷಿಸುವ ಕೆಲಸ ಮಠಗಳು ಮಾಡುತ್ತಿವೆ ಎಂದರು.

ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ, ಮುಚಳಂಬನ ಪ್ರಣವಾನಂದ ಸ್ವಾಮೀಜಿ, ಶಾಸಕರಾದ ಈಶ್ವರ್​​ ಖಂಡ್ರೆ, ಬಿ.ನಾರಾಯಣರಾವ್​ ಕಾರ್ಯಕ್ರಮದಲ್ಲಿದ್ದರು.

Intro:ಒಂದು ವಿಡಿಯೊ ಕಳಿಸಲಾಗಿದೆ


ಬಸವಕಲ್ಯಾಣ: ಶರಣರು ರಚಿಸಿದ ವಚನಗಳು ಯಾವುದೇ ವೇದಕ್ಕೆ, ಯಾವುದೇ ಗ್ರಂಥಕ್ಕೆ ಕಡಿಮೆ ಇಲ್ಲ. ಎಲ್ಲಾ ಗ್ರಂಥಗಳ ಸಾರಗಳು ವಚನ ಸಾಹಿತ್ಯದಲ್ಲಿ ಅಡಗಿವೆ ಎಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗನ ಶ್ರೀ ಶ್ರೀ ರವಿಶಂಕರ ಗುರೂಜಿ ನುಡಿದರು.
ತಾಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದ ಶ್ರೀ ನಾಗಭೂಷಣ ಶಿವಯೋಗಿಗಳ ೫೦ನೇ ಪುಣ್ಯಸ್ಮರಣೆ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ನೀಡಿದ ಈ ನೆಲ ಅತ್ಯಂತ ಪವಿತ್ರ ನೆಲವಾಗಿದೆ ಎಂದರು.
ಬಸವಣ್ಣನ ನೇತೃತ್ವದಲ್ಲಿ ಅಂದು ಶರಣರು ರಚಿಸಿದ ವಚನ ಸಾಹಿತ್ಯ ಬೆಳೆಯಬೇಕು. ಶರಣರ ಅನುಭವದಿಂದ ರಚನೆಯಾದ ವಚನಗಳು ಮನಕ್ಕೆ ತಟ್ಟಬೇಕು. ಮನಕ್ಕೆ ತಟ್ಟಿದರೆ ಜೀವನ ಮೇಲೆ ಎದ್ದೆಳುತ್ತದೆ. ಇಲ್ಲವಾದಲ್ಲಿ ಜೀವನ ಬುದಿಯಂತೆ ಕುಸಿದು ಬಿಳುತ್ತದೆ ಎಂದು ಗುರೂಜಿ ವಿಶ್ಲೇಶಿಸಿದರು.
ಜಗತ್ತಿನಲ್ಲಿಯೇ ಭಾರತೀಯ ಸಂಸ್ಕೃತಿಗೆ ಮಹತ್ವದ ಸ್ಥಾನವಿದೆ. ಸಂಸ್ಕೃತಿ ಎನ್ನುವದು ಜನಗಳ ಮನದಲ್ಲಿ ಮನೆ ಮಾಡಿದೆ. ನಮ್ಮ ದೇಶದ ಸಂಸ್ಕೃತಿ ಉಳಿಸಿ, ಬೆಳೆಸಿ ಅದನ್ನ ಸಂರಕ್ಷಿಸುವ ಕೆಲಸ ಮಠಗಳು ಮಾಡುತ್ತಿವೆ ಎಂದರು.
ಬೀದರ್ ಚಿದಂಬರಾಶ್ರಮದ ಶ್ರೀ ಶಿವಕುಮಾರ ಸ್ವಾಮೀಜಿ, ಮುಚಳಂಬನ ಶ್ರೀ ಪ್ರಣವಾನಂದ ಸ್ವಾಮೀಜಿ, ಶಾಸಕರಾದ ಈಶ್ವರ ಖಂಡ್ರೆ, ಬಿ.ನಾರಾಯಣರಾವ ಸೇರಿದಂತೆ ಪೂಜ್ಯರು, ಪ್ರಮುಖರು ಪಾಲ್ಗೊಂಡಿದ್ದರು.


ಭಾಷಣ-೧
ಶ್ರೀ ಶ್ರೀ ರವಿಶಂಕ ಗುರೂಜಿ
ಆರ್ಟ್ಆಫ್ ಲಿವಿಂಗ್ನ ಮುಖ್ಯಸ್ಥರು ಬೆಂಗಳೂರು

( ವೇದಿಕೆ ಮೇಲೆ ಕುಳಿತು ಬಿಳಿ ಸಮವಸ್ತç ಧರಿಸಿ ಮಾತನಾಡುತಿದ್ದಾರೆ)


ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ
Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.