ETV Bharat / state

ಕೆಜಿಗಟ್ಟಲೇ ಬೆಳ್ಳಿ, ಮುತ್ತಿನಹಾರ.. ನಗರಸಭೆ, ಗ್ರಾ.ಪಂ​ ಸದಸ್ಯರಿಗೆ ಸಚಿವ ಆನಂದ ಸಿಂಗ್​ ಭರ್ಜರಿ ಗಿಫ್ಟ್​?

author img

By

Published : Oct 23, 2022, 4:43 PM IST

minister-anand-singh-distributed-gifts-to-member
ಸಚಿವ ಆನಂದ್​ ಸಿಂಗ್​ ಅವರಿಂದ ನಗರಸಭೆ, ಪಂಚಾಯತ್​ ಸದಸ್ಯರಿಗೆ ಭರ್ಜರಿ ಉಡುಗೊರೆ

ಪ್ರವಾಸೋದ್ಯಮ ಸಚಿವ ಆನಂದ್​ ಸಿಂಗ್​ ಅವರು ಹೊಸಪೇಟೆ ನಗರಸಭಾ ಸದಸ್ಯರಿಗೆ ಮತ್ತು ವಿಜಯಪುರ ವಿಧಾನಸಭಾ ವ್ಯಾಪ್ತಿ ಎಲ್ಲಾ ಗ್ರಾಮಪಂಚಾಯತ್​ ಸದಸ್ಯರಿಗೆ ದೀಪಾವಳಿಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರಂತೆ.

ವಿಜಯನಗರ : ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಹೊಸಪೇಟೆ ನಗರಸಭೆ ಸದಸ್ಯರಿಗೆ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ದೀಪಾವಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿ ವೈರಲ್​ ಆಗುತ್ತಿದೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಸ್ವಕ್ಷೇತ್ರದ ಜನಪ್ರತಿನಿಧಿಗಳ ಮನವೊಲಿಸಲು ಸಚಿವ ಆನಂದ್ ಸಿಂಗ್ ಭರ್ಜರಿ ಪ್ಲಾನ್ ಮಾಡಿದ್ದಾರೆ. ಹೊಸಪೇಟೆ ನಗರಸಭೆ ಸದಸ್ಯರಿಗೆ ₹1 ಲಕ್ಷ ನಗದು, 1 ಕೆ.ಜಿ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನ ಹಾರ ಹಾಗೂ ಡ್ರೈ ಫ್ರೂಟ್ಸ್ ಬಾಕ್ಸ್​ ಒಳಗೊಂಡ ಕಿಟ್‌ ಕೊಟ್ಟಿದ್ದಾರೆ ಎನ್ನಲಾಗ್ತಿದೆ.

ಅಲ್ಲದೆ ಪಂಚಾಯಿತಿಯ ಎಲ್ಲಾ ಸದಸ್ಯರಿಗೆ ತಲಾ ₹27 ಸಾವಿರ ನಗದು, 500 ಗ್ರಾಂ ಬೆಳ್ಳಿ, ಅದರೊಂದಿಗೆ ದೀಪಾವಳಿ ಹಬ್ಬದ ಶ್ರೀ ಲಕ್ಷ್ಮಿ ಪೂಜಾ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ. ಸಚಿವರ ಬೆಂಬಲಿಗರು ಎಲ್ಲ ಸದಸ್ಯರಿಗೆ ಕೊಡುಗೆ ತಲುಪಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಸಚಿವರ ಈ ಗಿಫ್ಟ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗಿಫ್ಟ್​ ಪಡೆದವರು ಒಪ್ಪಿಕೊಂಡರು.. ಈ ಬಗ್ಗೆ ಗ್ರಾಮ ಪಂಚಾಯಿತಿ​ ಮತ್ತು ನಗರಸಭೆ ಸದಸ್ಯರು ಸಚಿವರಿಂದ ಉಡುಗೊರೆ ಪಡೆದಿರುವ ಬಗ್ಗೆ ದೃಢಪಡಿಸಿದ್ದಾರೆ. ಆದರೆ ಸಚಿವ ಆನಂದ್ ಸಿಂಗ್​ ಅವರನ್ನು ಈ ಬಗ್ಗೆ ಸ್ಪಷ್ಟನೆ ಕೇಳಲು ಈಟಿವಿ ಭಾರತ ಪ್ರತಿನಿಧಿ ದೂರವಾಣಿ ಕರೆ ಮಾಡಿದಾಗ ಸಚಿವರು ಸಂಪರ್ಕಕ್ಕೆ ಸಿಕ್ಕಿಲ್ಲ.

ಹೊಸಪೇಟೆ ನಗರಸಭೆಯಲ್ಲಿ 35 ಸದಸ್ಯರು, 5 ಜನ ನಾಮನಿರ್ದೇಶಿತ ಸದಸ್ಯರಿದ್ದಾರೆ. ಕಮಲಾಪುರ ಪಟ್ಟಣ ಪಂಚಾಯಿತಿ ಮತ್ತು ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ 10 ಗ್ರಾಮ ಪಂಚಾಯಿತಿಯ 182 ಸದಸ್ಯರಿದ್ದಾರೆ. ಇವರೆಲ್ಲರಿಗೂ ಈ ಬಾರಿಯ ದೀಪಾವಳಿ ಧಮಾಕ ಸಿಕ್ಕಂತಾಗಿದೆ.

ಇದನ್ನೂ ಓದಿ : ಚಿನ್ನ ಬೆಳ್ಳಿ ದರ: ರಾಜ್ಯದ ಯಾವ ನಗರದಲ್ಲಿ ಎಷ್ಟು ಬೆಲೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.