ETV Bharat / state

ಹೊಸಪೇಟೆ: ಲಾರಿ ಚಕ್ರಕ್ಕೆ ಸಿಲುಕಿ ಬೈಕ್​ ಸವಾರ ಸಾವು

author img

By

Published : Nov 4, 2020, 3:16 PM IST

accedent
ಅಪಘಾತ

ಹೊಸಪೇಟೆ ತಾಲೂಕಿನ ಪಾಪಿನಾಯಕ‌ಹಳ್ಳಿಯ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಬೈಕ್ ಸವಾರ ಲಾರಿ ಗಾಲಿಗೆ ಸಿಲುಕಿ ಜೀವಕಳೆದುಕೊಂಡಿದ್ದಾನೆ.

ಹೊಸಪೇಟೆ: ತಾಲೂಕಿನ ಪಾಪಿನಾಯಕ‌ಹಳ್ಳಿಯ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಬೈಕ್ ಸವಾರ ಲಾರಿ ಚಕ್ರದೊಳಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.

ಹೊಸಪೇಟೆ ನಗರ ನಿವಾಸಿ ಹಾಗೂ ಜಿಂದಾಲ್ ನೌಕರ ಆಂಜನೇಯ(30) ಮೃತ ಬೈಕ್​ ಸವಾರ. ಈತ ಎಂದಿನಂತೆ ಜಿಂದಾಲ್ ಕಾರ್ಖಾನೆಗೆ ಕೆಲಸಕ್ಕೆ ತೆರಳುವ ವೇಳೆ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಗಾದಿಗನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.