ETV Bharat / state

ದುರಸ್ತಿ ಕಾರ್ಯ; ಬೆಂಗಳೂರಿನ ವಿವಿಧೆಡೆ ಇಂದು ವಿದ್ಯುತ್​ ವ್ಯತ್ಯಯ

author img

By

Published : Jul 21, 2022, 8:26 AM IST

Updated : Jul 21, 2022, 8:42 AM IST

many-parts-of-bengaluru-to-face-power-cuts-today
ವಿದ್ಯುತ್ ದುರಸ್ತಿ; ಬೆಂಗಳೂರಿನ ವಿವಿಧೆಡೆ ಇಂದು ವಿದ್ಯುತ್​ ವ್ಯತ್ಯಯ

ವಿದ್ಯುತ್ ಕಾಮಗಾರಿ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಪವರ್​​​​ ಕಟ್ ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬೆಂಗಳೂರು: ನಗರದಲ್ಲಿ ವಿವಿಧ ವಿದ್ಯುತ್ ಕಾಮಗಾರಿಯ ಹಿನ್ನೆಲೆಯಲ್ಲಿ ಇಂದು(ಗುರುವಾರ) ಬಹುತೇಕ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎನ್.ಜಿ.ಇ.ಎಫ್ ಸ್ಟೇಷನ್​ನಲ್ಲಿ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ನಗರದ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ನಗರದ ಕೆನರಾ ಬ್ಯಾಂಕ್, ಅಜಂತಾ ಟ್ರಿನಿಟಿ ಸರ್ಕಲ್, ಇಂದಿರಾ ನಗರ 1ನೇ ಹಂತ, ಹೆಚ್​​ಎಎಲ್ 2ನೇ ಹಂತ, ಹಲಸೂರು, ಹಳೇ ಮದ್ರಾಸ್ ರಸ್ತೆಯ ಬೆನ್ನಿಗಾನ ಹಳ್ಳಿ ಎ.ನಾರಾಯಣಪುರ, ಬಿ.ನಾರಾಯಣಪುರ, ಕಗ್ಗದಾಸಪುರ, ಆಕಾಶನಗರ, ಪೈ ಲೇಔಟ್​​ನಲ್ಲಿಯೂ ವಿದ್ಯುತ್ ವ್ಯತ್ಯಯ ಆಗಲಿದೆ.

ಎಂ.ವಿ.ಬಿ ರೈಲ್ವೆ ನಿಲ್ದಾಣ, ಜೋಗುಪಾಳ್ಯ ಇಲ್ಟೆ ತೊಪ್ಪು, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಜೋಗುಪಾಳ್ಯ ಮುಖ್ಯ ರಸ್ತೆ, ರಂಕ ಕೋರ್ಟ್, ಅರ್ಟಿಲರಿ ರಸ್ತೆ, ಗೌತಮ ಪುರ, ಕೇಂಬ್ರಿಡ್ಜ್ ರಸ್ತೆ, ಆರ್.ಎಂ.ಝಡ್ ಮಿಲ್ಲೇನಿಯ, ಹಲಸೂರು, ಹಲಸೂರು ರಸ್ತೆ ಭಾಗ, ಗಂಗಪ್ಪ ಲೇಔಟ್, ಬಿಸಿ ಎಸ್ಟೇಟ್ ಸದಾನಂದನಗರ, ಕಸ್ತೂರಿನಗರ, ಕೃಷ್ಣಪಾಳ್ಯ, ಸುದ್ದಗುಂಟೆಪಾಳ್ಯ, ಆರ್​ಎಂಜಡ್ ಹಳೇ ಮದ್ರಾಸ್ ರಸ್ತೆ, ನಾಗಾವರಪಾಳ್ಯ ಕುವೆಂಪು ಸ್ಟ್ರೀಟ್, ವಿವೇಕಾನಂದ ಸ್ಟ್ರೀಟ್, ಕೊಂಡಪ್ಪ ರೆಡ್ಡಿ ಲೇಔಟ್, ಅಂಕಪ್ಪ ರೆಡ್ಡಿ ಲೇಔಟ್, ಶಿವ ದೇವಸ್ಥಾನ ರಸ್ತೆ, ಅಯ್ಯಪ್ಪ ದೇವಸ್ಥಾನದ ರಸ್ತೆ, ಏರ್​​ಪೋರ್ಟ್ ಕ್ವಾರ್ಟ್ರಸ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪವರ್​​​​ ಕಟ್ ಆಗಲಿದೆ.

ಹಾಗೆಯೇ, ಉದಯನಗರ, ಬೈರಸಂದ್ರ, ಸಿ.ವಿ.ರಾಮನ್ ನಗರ, ಎನ್​ಜಿಇಎಫ್​ನ ಪೂರ್ವಭಾಗ, ಸದಾನಂದನಗರ, ಕಸ್ತೂರಿನಗರ, ವರ್ತೂರು ರಸ್ತೆ, ಭುವನೇಶ್ವರಿನಗರ, ನಾಗವಾರ ಪಾಳ್ಯ, ನಾಗಪ್ಪರೆಡ್ಡಿ ಲೇಔಟ್, ಅಬ್ಬಯ್ಯರೆಡ್ಡಿ ಲೇಔಟ್, ಬಾಲಾಜಿ ಲೇಔಟ್, ಧರ್ಮೋಹಲ್ಲಾ, ವಿಜಿನಾಪುರ ಪೈ ಲೇಔಟ್​​ನಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ಇದನ್ನೂ ಓದಿ: ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ, ತನಿಖೆಗೆ ಆದೇಶ

Last Updated :Jul 21, 2022, 8:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.