ETV Bharat / state

ಕಮಲ ತೊರೆದು 'ಕೈ' ಹಿಡಿದ​ ಸೋಲಿಲ್ಲದ ಸರದಾರ: ಜಗದೀಶ್ ಶೆಟ್ಟರ್ ರಾಜಕೀಯ ಹಾದಿ..

author img

By

Published : Apr 16, 2023, 11:03 AM IST

Updated : Apr 17, 2023, 11:58 AM IST

Jagadeesh Shettar Quits BJP  ಸೋಲಿಲ್ಲದ ಸರದಾರ  ಜಗದೀಶ್ ಶೆಟ್ಟರ್  ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ  ಜಗದೀಶ್ ಶೆಟ್ಟರ್ ರಾಜೀನಾಮೆ  ಕರ್ನಾಟಕ ವಿಧಾನಸಭೆ ಚುನಾವಣೆ 2023  ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ  Karnataka Assembly election  shettar may join congress  Laxman savadi  ಪ್ರಬಲ ಲಿಂಗಾಯತ ನಾಯಕ  karnataka politics  ಕರ್ನಾಟಕ ರಾಜಕೀಯ
ಜಗದೀಶ್ ಶೆಟ್ಟರ್

ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. 6 ಬಾರಿ ಗೆದ್ದಿರುವ ಪ್ರಬಲ ಲಿಂಗಾಯತ ನಾಯಕ ಈಗ ಕಾಂಗ್ರೆಸ್​ ಸೇರಿದ್ದಾರೆ.

ಬೆಂಗಳೂರು: ಪ್ರಸ್ತುತ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ನಂತರ ರಾಜಕೀಯವಾಗಿ ಅಷ್ಟೇ ಸ್ಥಾನಮಾನ ಪಡೆದ ನಾಯಕ ಎಂದರೆ ಅದು ಜಗದೀಶ್ ಶೆಟ್ಟರ್. ಸತತವಾಗಿ ಆರು ಬಾರಿ ಗೆದ್ದು ಮೂರು ದಶಕದ ಕಾಲ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದ ಪಕ್ಷದ ಹಿರಿಯ ರಾಜಕಾರಣಿ ಇದೀಗ ಪಕ್ಷ ತೊರೆದಿದ್ದಾರೆ. ಪಕ್ಷ ನಿಷ್ಠೆಗೆ ಹೆಸರಾಗಿದ್ದ ಶೆಟ್ಟರ್, ಹೈಕಮಾಂಡ್ ರಾಜಕೀಯ ದಾಳದ ವಿರುದ್ಧ ಬಂಡೆದ್ದು ಪಕ್ಷದಿಂದ ಹೊರನಡೆದು ಕಾಂಗ್ರೆಸ್​ ಸೇರಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಶೆಟ್ಟರ್ ನಡೆದು ಬಂದ ಹಾದಿ ಕುರಿತ ವಿಶೇಷ ವರದಿ ಇಲ್ಲಿದೆ..

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅಲಂಕರಿಸಿದ ಬಹುತೇಕ ಎಲ್ಲ ಸ್ಥಾನಮಾನವನ್ನೂ ಪಡೆದ ಮತ್ತೊಬ್ಬ ರಾಜಕಾರಣಿ ಜಗದೀಶ್ ಶೆಟ್ಟರ್. ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ನಾಯಕರಾಗಿರುವ ಶೆಟ್ಟರ್ ಅವರು ಶಾಸಕ, ಪ್ರತಿಪಕ್ಷ ನಾಯಕ, ಸಚಿವ, ಸ್ಪೀಕರ್, ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಹೀಗೆ ಪಕ್ಷ ಮತ್ತು ಸರ್ಕಾರದ ಎಲ್ಲ ಭಾಗದಲ್ಲಿಯೂ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ. ಯಡಿಯೂರಪ್ಪ ಸೋತಾಗಲೂ ಶೆಟ್ಟರ್ ಗೆದ್ದಿದ್ದರು, ಅಷ್ಟೇ ಅಲ್ಲದೆ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿನ ಡಿಸಿಎಂ ಈಶ್ವರಪ್ಪ ಸೇರಿದಂತೆ ಸಂಪುಟದ ಸಾಕಷ್ಟು ಸಚಿವರು ಸೋತರೂ ಶೆಟ್ಟರ್ ಮಾತ್ರ ಗೆದ್ದು ಬೀಗಿದ್ದರು. ಸತತವಾಗಿ ಮೂರು ದಶಕಗಳ ಕಾಲ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಏಳನೇ ಬಾರಿ ಸ್ಪರ್ಧೆಗೂ ಸಿದ್ಧರಾಗಿದ್ದರು. ಆದರೆ ಬಿಜೆಪಿ ಟಿಕೆಟ್ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

Jagadeesh Shettar Quits BJP  ಸೋಲಿಲ್ಲದ ಸರದಾರ  ಜಗದೀಶ್ ಶೆಟ್ಟರ್  ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ  ಜಗದೀಶ್ ಶೆಟ್ಟರ್ ರಾಜೀನಾಮೆ  ಕರ್ನಾಟಕ ವಿಧಾನಸಭೆ ಚುನಾವಣೆ 2023  ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ  Karnataka Assembly election  shettar may join congress  Laxman savadi  ಪ್ರಬಲ ಲಿಂಗಾಯತ ನಾಯಕ  karnataka politics  ಕರ್ನಾಟಕ ರಾಜಕೀಯ
ಮಾಜಿ ಸಿಎಂ ಜಗದೀಶ್ ಶೆಟ್ಟರ್

ಪಕ್ಷದಲ್ಲಿ ಸ್ಥಾನಮಾನ: ಎಬಿವಿಪಿಯಲ್ಲಿ ಗುರುತಿಸಿಕೊಳ್ಳುವ ಮೂಲಕ ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಗುಣ ಬೆಳೆಸಿಕೊಂಡ ಜಗದೀಶ್ ಶೆಟ್ಟರ್ ನಂತರ ಆರ್.ಎಸ್.ಎಸ್ ಸೇರಿದರು. ಸಂಘ ಪರಿವಾರದ ಮೂಲಕ ಬಿಜೆಪಿಗೆ ಪ್ರವೇಶ ಮಾಡಿದರು. 1990 ರಲ್ಲಿ ಹುಬ್ಬಳ್ಳಿ ಗ್ರಾಮೀಣ ಭಾಗದ ಅಧ್ಯಕ್ಷರಾಗಿ ರಾಜ್ಯ ಘಟಕದ ಜೊತೆ ನಂಟು ಬೆಳೆಸಿಕೊಂಡು, 1996 ರಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಶೆಟ್ಟರ್ 2005 ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ, ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿಯೂ ಶೆಟ್ಟರ್ ಜವಾಬ್ದಾರಿ ನಿರ್ವಹಿಸಿದ್ದಾರೆ.

ಎಲ್.ಎಲ್. ಬಿ ಪದವಿಯನ್ನು ಹುಬ್ಬಳ್ಳಿಯ ಜೆಎಸ್ಎಸ್ ಕಾನೂನು ಕಾಲೇಜಿನಿಂದ ಪಡೆದ ಜಗದೀಶ್ ಶೆಟ್ಟರ್ 1984 ರಲ್ಲಿ ಶಿಲ್ಪಾ ಅವರೊಂದಿಗೆ ವಿವಾಹ ಆದರು. ನಂತರ ರಾಜಕೀಯ ಕ್ಷೇತ್ರ ಪ್ರವೇಶಿಸಿ 1990ರಲ್ಲಿ ಹುಬ್ಬಳ್ಳಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. 1994 ರಲ್ಲಿ ಮೊದಲ ಬಾರಿ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಇಳಿದು, ಮೊದಲ ಪ್ರಯತ್ನದಲ್ಲೇ ಗೆದ್ದು ಬೀಗಿದರು. ಅಲ್ಲಿಂದ ಶೆಟ್ಟರ್ ಚುನಾವಣಾ ರಾಜಕೀಯದಲ್ಲಿ ಹಿನ್ನಡೆ ಕಾಣದೆ ಸೋಲಿಲ್ಲದ ಸರದಾರನಾಗಿ 1999, 2004, 2008, 2013 ಮತ್ತು 2018 ರಲ್ಲಿ ಗೆಲ್ಲುತ್ತಲೇ ಬಂದಿದ್ದಾರೆ. 1994 ರಿಂದ 2004 ರವರೆಗೂ ಮೂರು ಚುನಾವಣೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಶೆಟ್ಟರ್, ಕ್ಷೇತ್ರ ಮರು ವಿಂಗಡಣೆ ನಂತರ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ 2008, 2013, 2018 ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

Jagadeesh Shettar Quits BJP  ಸೋಲಿಲ್ಲದ ಸರದಾರ  ಜಗದೀಶ್ ಶೆಟ್ಟರ್  ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ  ಜಗದೀಶ್ ಶೆಟ್ಟರ್ ರಾಜೀನಾಮೆ  ಕರ್ನಾಟಕ ವಿಧಾನಸಭೆ ಚುನಾವಣೆ 2023  ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ  Karnataka Assembly election  shettar may join congress  Laxman savadi  ಪ್ರಬಲ ಲಿಂಗಾಯತ ನಾಯಕ  karnataka politics  ಕರ್ನಾಟಕ ರಾಜಕೀಯ
ಮಾಜಿ ಸಿಎಂ ಜಗದೀಶ್ ಶೆಟ್ಟರ್

ಸರ್ಕಾರದ ಭಾಗವಾಗಿ ಕೆಲಸ: 1999 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಘಟಾನುಘಟಿ ನಾಯಕರೇ ಸೋತರು, ಪ್ರತಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಕೂಡ ಶಿಕಾರಿಪುರ ಕ್ಷೇತ್ರದಲ್ಲಿ ಮೊದಲ ಸೋಲಿನ ರುಚಿ ನೋಡಿದರು. ಮತ್ತೊಬ್ಬ ನಾಯಕ ಈಶ್ವರಪ್ಪ ಕೂಡ ಸೋತಿದ್ದರು. ಆದರೆ ಜಗದೀಶ್ ಶೆಟ್ಟರ್ ಗೆದ್ದು ಛಾಪು ಮೂಡಿಸಿದರು. ಚುನಾವಣೆಯಲ್ಲಿ ಎರಡನೇ ಅತೀ ಹೆಚ್ಚು ಸ್ಥಾನ ಪಡೆದ ಬಿಜೆಪಿಗೆ ಮತ್ತೊಮ್ಮೆ ಪ್ರತಿಪಕ್ಷ ಸ್ಥಾನ ಲಭಿಸಿತ್ತು. ಆಗ ಜಗದೀಶ್ ಶೆಟ್ಟರ್ ಮೊದಲ ಬಾರಿ 1999 ರಿಂದ 2004 ರವರೆಗೆ ಪ್ರತಿಪಕ್ಷ ನಾಯಕರಾದರು. 2006 ರಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರ ರಚನೆಯಾದ ವೇಳೆ ಮೊದಲ ಬಾರಿಗೆ ಸಂಪುಟ ಪ್ರವೇಶಿಸಿ ಕಂದಾಯ ಇಲಾಖೆಯ ಜವಾಬ್ದಾರಿ ನಿರ್ವಹಿಸಿದರು.

2008 ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ವಿಧಾನಸಭೆ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು. 2008-09 ರವರೆಗೆ ಸ್ಪೀಕರ್ ಸ್ಥಾನ ಅಲಂಕರಿಸಿದ ನಂತರ 2009 ರಲ್ಲಿ ಯಡಿಯೂರಪ್ಪ ಸಂಪುಟ ಸೇರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕೆಲಸ ಮಾಡಿದರು. 2011ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಎಂ ಆದ ಡಿವಿ ಸದಾನಂದಗೌಡರ ಸಂಪುಟದಲ್ಲೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. 2012 ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸದಾನಂದಗೌಡರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಜಗದೀಶ್ ಶೆಟ್ಟರ್ ರಾಜ್ಯದ 15 ನೇ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದರು.

ಎರಡನೇ ಬಾರಿ ವಿರೋಧ ಪಕ್ಷದ ನಾಯಕನ ಸ್ಥಾನ: 2013 ರಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಘೋಷಿಸಲಾಗಿತ್ತು. ಆಗ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಿತು. ಆದರೆ ಅಂದು ಯಡಿಯೂರಪ್ಪ ಹೊಸ ಪಕ್ಷ ಕಟ್ಟಿದ್ದರ ಪರಿಣಾಮವಾಗಿ ಆಡಳಿತಾರೂಢ ಪಕ್ಷವಾಗಿದ್ದರೂ ಕನಿಷ್ಠ ಪ್ರತಿಪಕ್ಷದ ಸ್ಥಾನಮಾನವೂ ಸಿಗದಂತಾಯಿತು. ಆದರೆ 2014 ರಲ್ಲಿ ಯಡಿಯೂರಪ್ಪ ಮರಳಿ ಬಿಜೆಪಿಗೆ ಬಂದು ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದರಿಂದ ಬಿಜೆಪಿಗೆ ಅಧಿಕೃತ ವಿರೋಧ ಪಕ್ಷದ ಸ್ಥಾನ ಸಿಕ್ಕಿತು, ಜಗದೀಶ್ ಶೆಟ್ಟರ್ ಮತ್ತೊಮ್ಮೆ ವಿರೋಧ ಪಕ್ಷದ ನಾಯಕರಾದರು.

2018 ರ ಚುನಾವಣೆಯಲ್ಲಿ ಸತತವಾಗಿ ಆರನೇ ಬಾರಿ ವಿಧಾನಸಭೆಗೆ ಆಯ್ಕೆಯಾದ ಶೆಟ್ಟರ್ 2019 ರಲ್ಲಿ ರಚನೆಯಾದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾದರು. ಈ ಹಿಂದೆ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದರೂ ಹಿರಿಯ ನಾಯಕರಾದ ಯಡಿಯೂರಪ್ಪ ಅಡಿಯಲ್ಲಿ ಬೆಳೆದುಬಂದಿದ್ದೇನೆ. ಹಾಗಾಗಿ ಅವರ ಸಂಪುಟದಲ್ಲಿ ಕೆಲಸ ಮಾಡಲು ಮುಜುಗರವಿಲ್ಲ ಎಂದು ಹೇಳಿದ್ದರು. ಸಕ್ಕರೆ ಮತ್ತು ಸಾರ್ವಜನಿಕ ಉದ್ಯಮ ಇಲಾಖೆಯನ್ನು ಹೊರತುಪಡಿಸಿ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದರು. ಆದರೆ 2021 ರ ಜುಲೈ 26 ರಂದು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಬಸವರಾಜ ಬೊಮ್ಮಾಯಿ‌ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಬೊಮ್ಮಾಯಿ‌ ಸಂಪುಟಕ್ಕೆ ಸೇರಲ್ಲ ಎಂದು ಸಂಪುಟ ರಚನೆಗೂ ಮೊದಲೇ ಶೆಟ್ಟರ್ ಪ್ರಕಟಿಸಿದ್ದರು. ನಮ್ಮ ಸೀನಿಯರ್ ಲೀಡರ್ ಯಡಿಯೂರಪ್ಪ.. ಹಾಗಾಗಿ ಅವರ ಸಂಪುಟ ಸೇರಿದ್ದೆ. ಈಗ ಬೊಮ್ಮಾಯಿ‌ ಸಂಪುಟ ಸೇರಲ್ಲ ಎಂದು ಪ್ರಕಟಿಸಿ ಸಂಪುಟದಿಂದ ಹೊರಗುಳಿದಿದ್ದರು.

ಇದೀಗ ಮತ್ತೊಮ್ಮೆ ಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ ಈ ಬಾರಿ ಬೇರೆಯವರ ಸ್ಪರ್ಧೆಗೆ ಅವಕಾಶ ನೀಡಿ ಎನ್ನುವ ಸಂದೇಶ ಕಳಿಸಿದ್ದ ಹೈಕಮಾಂಡ್, ಮೊದಲ ಎರಡು ಪಟ್ಟಿಯನ್ನು ಶೆಟ್ಟರ್ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಿಸಿಲ್ಲ. ಇದರಿಂದ ಮುನಿಸಿಕೊಂಡ ಶೆಟ್ಟರ್ ಹೈಕಮಾಂಡ್​​ಗೆ ಗಡುವು ನೀಡಿ ಕಡೆಗೆ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಸತತ ಆರು ಬಾರಿ ಗೆದ್ದಿರುವ ಹಿರಿಯ ನಾಯಕ ಶೆಟ್ಟರ್ ಏಳನೇ ಬಾರಿ ಸ್ಪರ್ಧೆಗೆ ಮುಂದಾಗಿದ್ದಾರೆ. ಹೀಗಾಗಿ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ ಶೆಟ್ಟರ್​..

ಬಿಜೆಪಿಯಲ್ಲಿ 75 ವರ್ಷ ವಯಸ್ಸು ಎಂಬುದು ಅಲಿಖಿತ ನಿಯಮ ಜಾರಿಯಲ್ಲಿದೆ. ಆದರೆ ಶೆಟ್ಟರ್​ಗೆ ಇನ್ನು 67 ವರ್ಷ. ಹಾಗಾಗಿ ಈ ನಿಯಮ ಅನ್ವಯವಾಗಲ್ಲ. ಆದರೂ ಅವರಿಗೆ ಟಿಕೆಟ್ ನೀಡದಿರುವ ನಿರ್ಧಾರ ಯಾಕೆ ಮಾಡಲಾಯಿತು ಎಂದು ಶೆಟ್ಟರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಬಿಗ್ ಶಾಕ್ ನೀಡಿರುವ ಶೆಟ್ಟರ್ ಈಗ ಕಾಂಗ್ರೆಸ್​ ಪಕ್ಷದಿಂದ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಹೈಕಮಾಂಡ್​ನಿಂದ ಆಫರ್​ಗಳ ಸುರಿಮಳೆ : ಕೇಂದ್ರ ಸಚಿವ ಸ್ಥಾನ, ಗವರ್ನರ್ ಹುದ್ದೆ ಬೇಡವೆಂದ ಜಗದೀಶ್ ಶೆಟ್ಟರ್

Last Updated :Apr 17, 2023, 11:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.