ETV Bharat / state

ಟಿಕೆಟ್​ ಆಕಾಂಕ್ಷಿಗಳೊಂದಿಗೆ ನಾಳೆ ಕೈ ನಾಯಕರ ಮಹತ್ವದ ಸಭೆ; ಇಂದು ಕುಮಟಾದಲ್ಲಿ ಪ್ರತಿಭಟನೆ

author img

By

Published : Nov 24, 2022, 12:23 PM IST

ಟಿಕೆಟ್​ ಆಕಾಂಕ್ಷಿಗಳೊಂದಿಗೆ ನಾಳೆ ಕಾಂಗ್ರೆಸ್ ನಾಯಕರ ಮಹತ್ವದ ಸಭೆ; ಇಂದು ಕುಮಟಾದಲ್ಲಿ ಪ್ರತಿಭಟನೆ
Congress party meeting with Ticket aspirants tomorrow ; Protest in Kumta today

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗು ವಿಧಾನ ಪರಿಷತ್ ಬಿ ಕೆ ಹರಿಪ್ರಸಾದ್​​ ಭಾಗಿಯಾಗಲಿದ್ದಾರೆ.

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್​ ಬಯಸಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಜೊತೆ ನಾಳೆ ಕಾಂಗ್ರೆಸ್​ ನಾಯಕರು ಸಭೆ ನಡೆಸಲಿದ್ದಾರೆ. ನಗರದ ವರ್ತೂರಿನ ಹತ್ತಿರದ ಖಾಸಗಿ ಹೋಟೆಲ್​ನಲ್ಲಿ ಈ ಸಭೆ ನಡೆಯಲಿದ್ದು, ಅರ್ಜಿ ಸಲ್ಲಿಕೆದಾರರ ಹಾಜರಿ ಕಡ್ಡಾಯ ಎಂದು ಸೂಚನೆ ನೀಡಲಾಗಿದೆ.

ಸಭೆಯಲ್ಲಿ ಟಿಕೆಟ್​ ಆಕಾಂಕ್ಷಿಗಳು ತಮ್ಮ ಜವಾಬ್ದಾರಿಗಳು, ಕ್ಷೇತ್ರದಲ್ಲಿನ ತಮ್ಮ ಪಕ್ಷ ಸಂಘಟನೆ, ಗೆಲುವಿನ ಸಾಧ್ಯತೆಯ ಕುರಿತು ತಿಳಿಸಬೇಕು. ತಮ್ಮ ಕ್ಷೇತ್ರ ವ್ಯಾಪ್ತಿಯ ಬಿಎಲ್​ಒಗಳ ಪಟ್ಟಿಯನ್ನೂ ತರಬೇಕಿದೆ. ಇದೇ ವೇಳೆ ಸಭೆಯಲ್ಲಿ ಮತದಾರರ ಮಾಹಿತಿ ಕಳವು ಪ್ರಕರಣದ ಕುರಿತೂ ಚರ್ಚೆ ನಡೆಯಲಿದೆ.

ಕುಮಟಾದಲ್ಲಿಂದು ಪ್ರತಿಭಟನೆ: ಬಿಜೆಪಿ ವಿರುದ್ಧ ರಣಕಹಣೆ ಮೊಳಗಿಸಿರುವ ಕಾಂಗ್ರೆಸ್​ ಇಂದು ಕುಮಟಾದಲ್ಲಿ ಪರೇಶ್ ಮೇಸ್ತಾ ಸಾವಿನ 'ಜನಜಾಗೃತಿ ಸಮಾವೇಶ' ನಡೆಸಲಿದೆ. ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯು.ಟಿ ಖಾದರ್, ಆರ್.ವಿ ದೇಶಪಾಂಡೆ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.

ಈ ಸಂಬಂಧ ಡಿಕೆಶಿ ನಿನ್ನೆಯೇ ಗೋವಾ ತಲುಪಿದ್ದು, ಇಂದು ಕುಮಟಾಗೆ ಆಗಮಿಸುತ್ತಿದ್ದಾರೆ. ಸಿದ್ದರಾಮಯ್ಯ ವಿಶೇಷ ವಿಮಾನದ ಮೂಲಕ ಪ್ರಯಾಣಿಸಬೇಕಿತ್ತು. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ವಿಮಾನ ಹಾರಾಟಕ್ಕೆ ತೊಡಕಾಗುವ ಸಾಧ್ಯತೆ ಇದೆ. ಇದರಿಂದ ಅವರ ಪ್ರಯಾಣ ವಿಳಂಬವಾಗುವ ಸಾಧ್ಯತೆ ಗೋಚರಿಸಿದೆ.

ಇದನ್ನೂ ಓದಿ: ಗಡಿ ವಿವಾದ ಮಾತುಕತೆ ಮೂಲಕ ಬಗೆಹರಿಯಲಿ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.