ETV Bharat / state

ಕಾಂಗ್ರೆಸ್​ನಿಂದ ಅಕ್ಕಿ ವಿತರಣೆ: ಸಾಮಾಜಿಕ ಅಂತರ ಮರೆತ ಜನತೆ

author img

By

Published : Apr 21, 2020, 4:29 PM IST

Updated : Apr 21, 2020, 5:05 PM IST

ಇಂದು ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಪೋರೇಟರ್ ಅನ್ವರ್ ಪಾಷಾ, ಲಾಕ್​ಡೌನ್​ನಿಂದ ಬಳಲುತ್ತಿರುವ ಬಡ ಕಾರ್ಮಿಕರು, ಜನರಿಗೆ ಉಚಿತವಾಗಿ ಅಕ್ಕಿ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

Congress leaders distributed free rice to poor people at Padmanabhanagar
ಕಾಂಗ್ರೆಸ್​ನಿಂದ ಅಕ್ಕಿ ವಿತರಣೆ

ಬೆಂಗಳೂರು: ನಗರದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನಶಂಕರಿ ವಾರ್ಡ್​ನಲ್ಲಿ ಇಂದು ಕಾಂಗ್ರೆಸ್ ನಾಯಕರು ಬಡವರಿಗೆ ಉಚಿತ ಅಕ್ಕಿ ಹಂಚಿಕೆ ಮಾಡಿದ್ದು, ಈ ವೇಳೆ ಸಾಮಾಜಿಕ ಅಂತರ ಮರೆತು ಜನರು ಅಕ್ಕಿಗಾಗಿ ಮುಗಿಬಿದ್ದಿದ್ದ ದೃಶ್ಯ ಕಂಡು ಬಂತು.

ಕಾಂಗ್ರೆಸ್​ನಿಂದ ಅಕ್ಕಿ ವಿತರಣೆ

ಪದ್ಮನಾಭನಗರದ ಕದಿರೇನಹಳ್ಳಿ ಅಂಡರ್​ ಪಾಸ್​ ಸಮೀಪದ ಮೈದಾನದಲ್ಲಿ ವಾರ್ಡ್​ನ ಕಾರ್ಪೋರೇಟರ್ ಅನ್ವರ್ ಪಾಷಾ, ಲಾಕ್​ಡೌನ್​ನಿಂದ ಬಳಲುತ್ತಿರುವ ಬಡ ಕಾರ್ಮಿಕರು, ಜನರಿಗೆ ಉಚಿತವಾಗಿ ಅಕ್ಕಿ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದಕ್ಕಾಗಿ 200 ಮಂದಿಯನ್ನು ಮೈದಾನದಲ್ಲಿ ಕೂರಿಸಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಬಾಕ್ಸ್​ಗಳನ್ನು ಸಹ ಹಾಕಲಾಗಿತ್ತು. ಇದರಂತೆ ವ್ಯವಸ್ಥಿತವಾಗಿದ್ದಾಗ ಡಿ.ಕೆ.ಶಿವಕುಮಾರ್​ ಬರುತ್ತಿದ್ದಂತೆ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಜನ ಅಕ್ಕಿ ಪಡೆಯಲು ಮುಗಿಬಿದ್ದರು. ಇದರಿಂದ ಕಂಗಾಲಾದ ಆಯೋಜನರು ಜನರನ್ನು ನಿಯಂತ್ರಿಸಲಾಗದೆ ಸುಸ್ತಾದ ದೃಶ್ಯಗಳು ಕಂಡು ಬಂದವು.

Congress leaders distributed free rice to poor people at Padmanabhanagar
ಕಾಂಗ್ರೆಸ್​ನಿಂದ ಅಕ್ಕಿ ವಿತರಣೆ

ಅಕ್ಕಿ ಮಾತ್ರವಲ್ಲದೆ, ಡಿಕೆಶಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದರು. ಮೈದಾನದಲ್ಲಿ ಸುವ್ಯವಸ್ಥೆ ಕಾಪಾಡಲು ಕೇಲವ ಬೆರಳೆಣಿಕೆ ಪೊಲೀಸರನ್ನು ನಿಯೋಜನೆ ಮಾಡಿದ್ದರ ಪರಿಣಾಮ ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಪೊಲೀಸರು, ಅಕ್ಕಿಯನ್ನು ಮನೆ ಮನೆಗೆ ತಲುಪಿಸುವಂತೆ ಸೂಚಿಸಿದರು. ಬಳಿಕ ಆಯೋಜಕರು, ಲಾರಿಗಳನ್ನು ಅಕ್ಕಿ ಮೂಟೆಗಳ ಸಮೇತ ಹೊರಗೆ ಕಳಿಸಿದರು.

Congress leaders distributed free rice to poor people at Padmanabhanagar
ಕಾಂಗ್ರೆಸ್​ನಿಂದ ಅಕ್ಕಿ ವಿತರಣೆ

ವಿತರಣಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ರಾಮಲಿಂಗಾರೆಡ್ಡಿ, ಕಾರ್ಪೋರೇಟರ್ ಅನ್ಸರ್ ಪಾಷಾ ಪಾಲ್ಗೊಂಡಿದ್ದರು.

Last Updated :Apr 21, 2020, 5:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.