ETV Bharat / state

ಭೂಗತ ಪಾತಕಿ ಬನ್ನಂಜೆ ರಾಜ ಆಪ್ತ ಮನೀಶ್ ಶೆಟ್ಟಿ​ ಗುಂಡೇಟಿಗೆ ಬಲಿ...!

author img

By

Published : Oct 16, 2020, 1:41 AM IST

Updated : Oct 16, 2020, 7:53 AM IST

ಆರ್​ಎಚ್​ಪಿ ರಸ್ತೆಯೊಂದರಲ್ಲಿ ಡುಯಟ್ ಲೇಡಿಸ್ ಬಾರ್ ನಡೆಸುತ್ತಿದ್ದ ಮಾಲೀಕ‌ ಮನೀಶ್ ಶೆಟ್ಟಿ ಗುಂಡೇಟಿಗೆ ಬಲಿಯಾಗಿದ್ದಾರೆ.

bar-owner-manish-died-in-shootout-at-bangalore
ಮನೀಶ್ ಶೆಟ್ಟಿ​

ಬೆಂಗಳೂರು: ಭೂಗತ ಜಗತ್ತಿನ‌ ನಂಟು ಹೊಂದಿದ್ದ ಬನ್ನಂಜೆ‌ ರಾಜ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದ ಮನೀಶ್ ಶೆಟ್ಟಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾನೆ.

ಬಿಗ್ರೇಡ್ ರಸ್ತೆಯ ಲೇಡಿಸ್ ಬಾರ್ ಮಾಲೀಕನಾಗಿದ್ದ ಮನೀಶ್ ಶೆಟ್ಟಿ ಮೇಲೆ ಬೈಕ್​ನಲ್ಲಿ ಬಂದ ಇಬ್ಬರು ಅಪರಿಚಿತರು ಗುಂಡು ಹಾರಿಸಿ, ಚಾಕುವಿಂದ ಹಲ್ಲೆ‌ ಮಾಡಿ ಪರಾರಿಯಾಗಿದ್ದಾರೆ. ಕೂಡಲೇ ಕೆಲವರು ಮನೀಶ್​ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದರು.

ಆಸ್ಪತ್ರೆಗೆ ದಾಖಲಿಸಿದ್ರೂ ಸಹ ಮನೀಶ್​ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 2007ರಲ್ಲಿ ಬಾಣಸವಾಡಿ ಠಾಣಾ ವ್ಯಾಪ್ತಿಯ ಚೆಮ್ಮನೂರು ಜ್ಯೂವೆಲ್ಲರಿ ಶಾಪ್ ರಾಬರಿ‌ ಪ್ರಕರಣದಲ್ಲಿ ಮನೀಶ್​ ಭಾಗಿಯಾಗಿದ್ದ. ಮಂಗಳೂರು ಮತ್ತು ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿವೆ.

ಈ ಘಟನೆ ಕುರಿತು​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

Last Updated :Oct 16, 2020, 7:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.