ETV Bharat / state

ಬಾಗಲಕೋಟೆ.. ಮೂರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

author img

By

Published : Jan 11, 2023, 8:00 PM IST

Updated : Jan 12, 2023, 12:02 PM IST

ಮೂರು ಹೆಣ್ಣು ಮಕ್ಕಳೊಂದಿಗೆ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಘಟನೆ ನಡೆದಿದೆ‌.

Mother commits suicide with three daughters
Mother commits suicide with three daughters

ಬಾಗಲಕೋಟೆ: ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಮುದ್ದಾದ ಮೂರು ಮಕ್ಕಳ ಪಾಲಿಗೆ ತಾಯಿಯೇ ಯಮನಾಗಿದ್ದಾಳೆ. ಮೂರು ಹೆಣ್ಣು ಮಕ್ಕಳನ್ನು ಸಾಯಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ‌. ಮೃತಪಟ್ಟವರನ್ನು ತಾಯಿ ರೇಖಾ ಬಗಲಿ (28), ಹೆಣ್ಣು ಮಕ್ಕಳಾದ ಸನ್ನಿಧಿ (7), ಸಮೃದ್ದಿ (4) ಮತ್ತು ಶ್ರೀನಿಧಿ (2) ಎಂದು ಗುರುತಿಸಲಾಗಿದೆ.

ಓದಿ: ಚಿಕ್ಕಬಳ್ಳಾಪುರದಲ್ಲಿ ಮೂವರ ಸಾವು ಪ್ರಕರಣ.. ನಮ್ಮ ಅಪ್ಪ, ಅಮ್ಮ, ಅಕ್ಕ ಎಂದು ಗುರುತಿಸಿದ ಸಹೋದರಿ

ಏನಿದು ಘಟನೆ: ತಿಮ್ಮಾಪುರ ಗ್ರಾಮದ ನಿವಾಸಿ ರೈತ ಅರ್ಜುನ್ ಮತ್ತು ರೇಖಾಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ರೇಖಾ ಅವರು ಮಾಜಿ ಸಚಿವ ಹೆಚ್​ವೈ ಮೇಟಿ ಅವರ ಸಹೋದರಿ ಕಡೆಯ ಸಂಬಂಧಿಕರು ಎನ್ನಲಾಗಿದೆ. ಅರ್ಜುನ್​ ಮತ್ತು ರೇಖಾ ದಂಪತಿಗೆ ಮೂರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಮದುವೆಯಾಗಿ ಹಲವಾರು ವರ್ಷಗಳು ಕಳೆದರೂ ಸಹ ಸಣ್ಣಪುಟ್ಟ ಕಲಹ ಹೊಂದಿದ್ದರು ಎನ್ನಲಾಗಿದೆ. ಆದರೆ,ಇಷ್ಟೆಲ್ಲದರ ಮಧ್ಯೆ ಸಂಸಾರ ಸುಖವಾಗಿಯೇ ಸಾಗುತ್ತಿತ್ತು. ಎಂದಿನಂತೆ ಇಂದು ಅರ್ಜುನ್​ ಕಬ್ಬು ಕಟಾವ್​ ಮಾಡುವುದಕ್ಕೆ ಹೊಲಕ್ಕೆ ತೆರಳಿದ್ದಾರೆ. ಆದರೆ ರೇಖಾ ಇತ್ತೀಚೆಗೆ ಕೆಲ ವಿಚಾರಗಳಿಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ರೇಖಾ ಮಕ್ಕಳ ಬಗ್ಗೆ ಬಹಳ ಚಿಂತಿಳಾಗಿದ್ದರು, ನೆರೆ ಹೊರೆಯವರು ಮಾತನಾಡಿಕೊಳ್ಳುತ್ತಿದ್ದರು ಎಂಬ ವಿಷಯ ಹೊರ ಬಿದ್ದಿದೆ.

ಓದಿ: ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಪೊಲೀಸರ ಮನವೊಲಿಕೆ ಬಳಿಕ ಮೃತದೇಹ ಸ್ವೀಕರಿಸಿದ ಕುಟುಂಬಸ್ಥರು

ರೇಖಾ ಪ್ರತಿ ದಿನ ಮಕ್ಕಳ‌ ಓದು, ಬೆಳೆಸೋದು, ಮದುವೆ ಹೇಗೆ ಎಂಬುದರ ಕುರಿತು ಹೆಚ್ಚಾಗಿ ಚಿಂತಿಸುತ್ತಿದ್ದರಂತೆ. ಇದರಿಂದ ರೇಖಾ‌ ಮಾನಸಿಕವಾಗಿ ಕುಗ್ಗಿದ್ದರು ಎಂದು ಸಂಬಂಧಿಕರ ಮಾತಾಗಿದೆ. ಹೀಗಾಗಿ ಮಕ್ಕಳನ್ನು ರೇಖಾ ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದಾಕ್ಷಣ ರೇಖಾಳ ಗಂಡ ಅರ್ಜುನ್ ರೋದನೆ ಮುಗಿಲು ಮುಟ್ಟಿದೆ. ಅಷ್ಟೇ ಅಲ್ಲ ನಾಲ್ವರು ಮೃತಪಟ್ಟಿರುವ ಹಿನ್ನೆಲೆ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಎಲ್ಲರನ್ನೂ ಮರುಗುವಂತೆ ಮಾಡಿತ್ತು. ಸುದ್ದಿ ತಿಳಿದ ಗ್ರಾಮಸ್ಥರು ಮತ್ತು ಸಂಬಂಧಿಕರು ಅರ್ಜುನ್​ ಮನೆಗೆ ದೌಡಾಯಿಸಿದ್ದರು.

ಓದಿ: ಮೂವರು ಒಡಹುಟ್ಟಿದವರ ಅನುಮಾನಾಸ್ಪದ ಸಾವು.. ಸಾಲದ ಸಮಸ್ಯೆಯಿಂದ ಆತ್ಮಹತ್ಯೆ ಶಂಕೆ

ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಆತ್ಮಹತ್ಯೆ ಕುರಿತು ಸ್ಥಳೀಯರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ತನಿಖೆ ನಂತರವೇ ಇನ್ನಷ್ಟು ಮಾಹಿತಿ ತಿಳಿಯಲಿದೆ. ಈ ಘಟನೆ ಕುರಿತು ಬಾಗಲಕೋಟೆಯ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಆತ್ಮಹತ್ಯೆ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಾಗಿದೆ.

ಇದನ್ನೂಓದಿ:ಮೂವರು ಒಡಹುಟ್ಟಿದವರ ಅನುಮಾನಾಸ್ಪದ ಸಾವು.. ಸಾಲದ ಸಮಸ್ಯೆಯಿಂದ ಆತ್ಮಹತ್ಯೆ ಶಂಕೆ

Last Updated :Jan 12, 2023, 12:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.