ETV Bharat / sports

ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷದಲ್ಲಿ ಭಾರತಕ್ಕೆ ಸಿಗುತ್ತಾ ಟಿ20 ವಿಶ್ವಕಪ್​ ಕಿರೀಟ?

author img

By

Published : Aug 14, 2022, 10:20 AM IST

ಭಾರತ ಕ್ರಿಕೆಟ್​ ತಂಡ ವಿಶ್ವಶ್ರೇಷ್ಠ ಸ್ಥಾನದಲ್ಲಿದೆ. ಆಸ್ಟ್ರೇಲಿಯಾದಲ್ಲಿ ಮುಂದಿನ ಅಕ್ಟೋಬರ್​ನಲ್ಲಿ ನಡೆಯುವ ಚುಟುಕು ಕ್ರಿಕೆಟ್​ ವಿಶ್ವಕಪ್​ನಲ್ಲಿ ಭಾರತ ಟ್ರೋಫಿ ಜಯಿಸಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮವನ್ನು ದುಪ್ಪಟ್ಟು ಮಾಡಿಲಿದೆಯಾ ಎಂಬುದನ್ನು ದೇಶವೇ ಕಾತುರದಿಂದ ಕಾಯುತ್ತಿದೆ.

team-india-at-t20-world-cup-over-the-years
ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಿಗುತ್ತಾ ವಿಶ್ವಕಪ್​ ಕಿರೀಟ

ದೇಶದಲ್ಲೀಗ 75 ನೇ ಸ್ವಾತಂತ್ರ್ಯ ಮಹೋತ್ಸವದ ಅಮೃತ ಗಳಿಗೆ. ಕ್ರಿಕೆಟ್​ ರಂಗ ಈ ಹಿಂದಿನ ಹಲವು ವರ್ಷಗಳಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಅದರಲ್ಲೂ ಟಿ20 ಕ್ರಿಕೆಟ್​ ಪರಿಚಯವಾದ ಬಳಿಕ ಅದನ್ನು ಇನ್ನಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದು ಭಾರತ ಕ್ರಿಕೆಟ್ ಎಂದೇ ಹೇಳಬೇಕು​. 2007 ರಲ್ಲಿ ಐಸಿಸಿಯ ಚೊಚ್ಚಲ ಟಿ20 ವಿಶ್ವಕಪ್​ ಮುಡಿಗೇರಿಸಿಕೊಂಡ ಬಳಿಕ ನಡೆದ 7 ಚರಣಗಳಲ್ಲಿ ಭಾರತ ಮತ್ತೆ ಪ್ರಶಸ್ತಿ ಜಯಿಸುವಲ್ಲಿ ಸಫಲವಾಗಿಲ್ಲ.

2014 ರಲ್ಲಿ ಶ್ರೀಲಂಕಾ ವಿರುದ್ಧ ಸೋತು ರನ್ನರ್​ ಅಪ್​ ಆಗಿದ್ದೇ ಬಳಿಕದ ಸಾಧನೆಯಾಗಿದೆ. ಚುಟುಕು ಕ್ರಿಕೆಟ್​ಗೆ ಹೊಸ ಆಯಾಮ ಹಾಕಿಕೊಟ್ಟ ಐಪಿಎಲ್​ ಎಂಬ ದೈತ್ಯ ಟೂರ್ನಿಯನ್ನು ಪರಿಚಯಿಸಿದ ಭಾರತಕ್ಕೆ ಅದೇ ಫಾರ್ಮೆಟ್​ನ ವಿಶ್ವಕಪ್​ ಕಿರೀಟ ಮತ್ತೆ ಗೆಲ್ಲುವ ಭಾಗ್ಯ ಬಂದಿಲ್ಲ.

ದೇಶವೀಗ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ. ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಚುಟುಕು ಕ್ರಿಕೆಟ್​ನ 8 ನೇ ವಿಶ್ವಕಪ್​ ನಡೆಯಲಿದೆ. ಆಟಗಾರರು ಪ್ರಶಸ್ತಿ ಜಯಿಸಿ ಸ್ವಾತಂತ್ರ್ಯ ಸಂಭ್ರಮವನ್ನು ದ್ವಿಗುಣಗೊಳಿಸಲಿದ್ದಾರಾ ಎಂಬುದು ಅಭಿಮಾನಿಗಳ ನಿರೀಕ್ಷೆ.

ವಿಶ್ವಕಪ್​ನಲ್ಲಿ ಭಾರತದ ಏಳುಬೀಳಿನ ಹಾದಿ..

ಮತ್ತದೇ ಸೂಪರ್​ 8 ನಿರಾಸೆ
ಮತ್ತದೇ ಸೂಪರ್​ 8 ನಿರಾಸೆ

2007- ಚಾಂಪಿಯನ್: ಮಾಜಿ ನಾಯಕ ಎಂ ಎಸ್​ ಧೋನಿ ನೇತೃತ್ವದಲ್ಲಿ ಚೊಚ್ಚಲ ಚುಟುಕು ವಿಶ್ವಕಪ್​ನಲ್ಲಿ ಭಾಗವಹಿಸಿದ ಭಾರತ ಪ್ರಶಸ್ತಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಕೂಟದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 2 ಬಾರಿ ಸೋಲಿಸಿದ್ದಲ್ಲದೇ, ಆಸ್ಟ್ರೇಲಿಯಾ, ಇಂಗ್ಲೆಂಡ್​, ದಕ್ಷಿಣ ಆಪ್ರಿಕಾದಂತಹ ತಂಡಗಳನ್ನು ಸದೆಬಡಿದಿತ್ತು. ನ್ಯೂಜಿಲ್ಯಾಂಡ್​ ವಿರುದ್ಧ ಭಾರತ ಮಣಿದಿತ್ತು.

ಮತ್ತದೇ ಸೂಪರ್​ 8 ನಿರಾಸೆ
ಮತ್ತದೇ ಸೂಪರ್​ 8 ನಿರಾಸೆ

2009- ಸೂಪರ್​-8 ಹಂತದಲ್ಲೇ ನಿರ್ಗಮನ: 2 ವರ್ಷದ ಬಳಿಕ ನಡೆದ 2ನೇ ಚರಣದಲ್ಲಿ ಭಾರತಕ್ಕೆ ಆಘಾತ ಕಾದಿತ್ತು. ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾದೇಶ, ಐರ್ಲೆಂಡ್​ ವಿರುದ್ಧ ಜಯಿಸಿ ಇಂಗ್ಲೆಂಡ್​, ವೆಸ್ಟ್​ ಇಂಡೀಸ್​​, ದಕ್ಷಿಣ ಆಫ್ರಿಕಾ ವಿರುದ್ಧ ಸೋಲುವ ಮೂಲಕ ಸೂಪರ್​ -8 ಹಂತದಲ್ಲೇ ಟೂರ್ನಿಯಲ್ಲಿ ಹೊರಬಿದ್ದಿತ್ತು. ಇದು ಚೊಚ್ಚಲ ವಿಶ್ವಕಪ್​ ಚಾಂಪಿಯನ್ನರಿಗೆ ಮೊದಲ ಹಿನ್ನಡೆಯಾಗಿತ್ತು.

ಸೂಪರ್​-8 ಹಂತದಲ್ಲೇ ನಿರ್ಗಮನ
ಸೂಪರ್​-8 ಹಂತದಲ್ಲೇ ನಿರ್ಗಮನ

2010- ಮತ್ತದೇ ಶಾಕ್​: ಮರು ವರ್ಷವೇ ನಡೆದ ಚುಟಕು ವಿಶ್ವಕಪ್​​ನಲ್ಲಿ ಭಾರತ ವಿರಾಟ್​ ಕೊಹ್ಲಿ, ಯುವರಾಜ್​ ಸಿಂಗ್​, ರೋಹಿತ್​,ರೈನಾ, ಜಡೇಜಾರಂತಹ ಸ್ಪೆಷಲಿಸ್ಟ್​ಗಳನ್ನು ಹೊಂದಿದ್ದರೂ ನಿರಾಸೆ ಮಾತ್ರ ಕಳಚಲಿಲ್ಲ. ಆಫ್ಘಾನಿಸ್ತಾನ, ದಕ್ಷಿಣಾ ಆಫ್ರಿಕಾ ವಿರುದ್ಧ ಮೊದಲೆರೆಡು ಪಂದ್ಯ ಗೆದ್ದು, ಶ್ರೀಲಂಕಾ, ವೆಸ್ಟ್ ಇಂಡೀಸ್​, ಆಸ್ಟ್ರೇಲಿಯಾ ವಿರುದ್ಧ ಸೋತು ಮತ್ತೆ ಸೂಪರ್​-8 ಹಂತದಲ್ಲಿ ನಿರ್ಗಮಿಸಿತು. ಕೆರೆಬಿಯನ್ನರ ನಾಡಿನಲ್ಲಿ ನಡೆದ ಟೂರ್ನಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಇಂಗ್ಲೆಂಡ್​ ಮೊದಲ ಬಾರಿಗೆ ಚಾಂಪಿಯನ್​ ಆಯಿತು.

ಕಳಚದ ಸೂಪರ್​ -8 ಸಂಕೋಲೆ
ಕಳಚದ ಸೂಪರ್​ -8 ಸಂಕೋಲೆ

2012- ಕಳಚದ ಸೂಪರ್​ -8 ಸಂಕೋಲೆ: ಶ್ರೀಲಂಕಾದಲ್ಲಿ ನಡೆದ ಈ ಚರಣದಲ್ಲಿ ಭಾರತ ಉತ್ತಮ ಆರಂಭವೇ ಪಡೆಯಿತು. ಅಫ್ಘಾನಿಸ್ತಾನ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು. ಆದರೆ, ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನೆಟ್​ರನ್​ರೇಟ್​ ಅಂತರದಲ್ಲಿ ಆಸ್ಟ್ರೇಲಿಯಾ ಮುಂದಿದ್ದರಿಂದ ಭಾರತ ಸೆಮಿಫೈನಲ್​ ರೇಸ್​ನಿಂದ ಹೊರಬಿತ್ತು.

2014- ರನ್ನರ್​ ಅಪ್​ಗೆ ತೃಪ್ತಿ: ಭಾರತದ ಆಟಗಾರರ ಪರಾಕ್ರಮ ಈ ವಿಶ್ವಕಪ್​ ಚರಣದಲ್ಲಿ ಕಂಡುಬಂತು. ಟೂರ್ನಿಯಲ್ಲಿ ಭಾರತ ತಾನಾಡಿದ ಎಲ್ಲ ಪಂದ್ಯಗಳಲ್ಲಿ ಅಜೇಯವಾಗಿ ಮುಂದುವರಿದು ಫೈನಲ್​ನಲ್ಲಿ ಶ್ರೀಲಂಕಾ ಎದುರು ಮುಗ್ಗರಿಸಿ ಮತ್ತೆ ಟ್ರೋಫಿ ಎತ್ತಿಹಿಡಿಯುವ ಕನಸು ಭಗ್ನಗೊಂಡಿತು. ಇದಕ್ಕೂ ಮೊದಲು ಪ್ರಬಲ ತಂಡಗಳಾದ ಪಾಕಿಸ್ತಾನ, ವೆಸ್ಟ್​ ಇಂಡೀಸ್​, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳಿಗೆ ಸೋಲಿನ ರುಚಿ ತೋರಿಸಿತ್ತು.

ಸೆಮಿಫೈನಲ್​ ಸೋಲು
ಸೆಮಿಫೈನಲ್​ ಸೋಲು

2016 - ಸೆಮಿಫೈನಲ್​ ಸೋಲು: ವಿಶ್ವಕಪ್​ ಗೆಲ್ಲುವ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ, ಈ ಬಾರಿ ಟ್ರೋಫಿ ಎತ್ತಲಿದೆ ಎಂದು ಕ್ರಿಕೆಟ್​ ಜಗತ್ತು ಭಾವಿಸಿತ್ತು. ಇದಕ್ಕೆ ಕಾರಣ ಕ್ರಿಕೆಟ್​ನ ಎಲ್ಲ ಮಾದರಿಯಲ್ಲಿ ಉತ್ತುಂಗದಲ್ಲಿದ್ದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಎಂ.ಎಸ್​.ದೋನಿ, ಬೌಲಿಂಗ್​ ಪಡೆಯ ಹೊಸ ಹುರಿಯಾಳುಗಳಾದ ಜಸ್ಪ್ರೀತ್​ ಬೂಮ್ರಾ, ಭುವನೇಶ್ವರ್​ ಕುಮಾರ್​ ಅವರಂತಹ ಆಟಗಾರರು ಅದ್ಭುತ ಲಯದಲ್ಲಿದ್ದರು. ಅಲ್ಲದೇ, ವಿಶ್ವಕಪ್​ ಭಾರತದಲ್ಲಿ ನಡೆದಿತ್ತು. ತವರಿನಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಸೆಮಿಫೈನಲ್​ನಲ್ಲಿ ಹಾಲಿ ಚಾಂಪಿಯನ್ನರಾಗಿದ್ದ ವೆಸ್ಟ್​ ಇಂಡೀಸ್​ ವಿರುದ್ಧ ಮುಗ್ಗರಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 192 ರನ್​ಗಳ ಬೃಹತ್​ ಮೊತ್ತ ಗಳಿಸಿದಾಗ್ಯೂ ವಿಂಡೀಸ್​ ದೈತ್ಯರ ಮುಂದೆ ಸೋಲು ಕಂಡರು.

ಪಾಕ್​ ಎದುರು ಸೋಲು
ಪಾಕ್​ ಎದುರು ಸೋಲು

2021- ಪಾಕ್​ ಎದುರು ಸೋಲು: ಕೊರೊನಾ ಕಾರಣಕ್ಕಾಗಿ ಮುಂದೂಡಲಾಗಿದ್ದ ವಿಶ್ವಕಪ್​ ಕೊನೆಗೂ 5 ವರ್ಷಗಳ ಬಳಿಕ ಯುಎಇಯಲ್ಲಿ ಆಯೋಜಿಸಲಾಗಿತ್ತು. ಸೂಪರ್​ 8 ರ ಬದಲಾಗಿ 12 ತಂಡಗಳೊಂದಿಗೆ ಸೆಣಸಾಡಿದ ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡ ತಾನಾಡಿದ ಮೊದಲ ಪಂದ್ಯದಲ್ಲೇ ಎದುರಾಳಿ ಪಾಕಿಸ್ತಾನದ ವಿರುದ್ಧ ಇತಿಹಾಸದಲ್ಲಿಯೇ ಮೊದಲ ಸೋಲು ಅನುಭವಿಸಿತು. ಇದು ಭಾರತಕ್ಕೆ ಇನ್ನಿಲ್ಲದ ಹೊರೆಯಾಗಿ ಪರಿಣಮಿಸಿತು.

ಬಳಿಕ ಗೆಲ್ಲಲೇಬೇಕಾದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೋಲುವ ಮೂಲಕ ಸೂಪರ್​ 12 ಹಂತದಲ್ಲಿ ಭಾರತ ವಿಶ್ವಕಪ್​ನಿಂದ ಹೊರಬಿತ್ತು. ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ಚಾಂಪಿಯನ್​ ಆಗಿ ಹೊರಹೊಮ್ಮಿತು.

ಇದನ್ನೂ ಓದಿ: IPL ತಂಡದ ಮಾಲೀಕರಿಂದ ಮೂರ್ನಾಲ್ಕು ಸಲ ಕಪಾಳಮೋಕ್ಷ.. ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಸ್ ಟೇಲರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.