ETV Bharat / city

ಸರ್ಕಾರಿ ಗೌರವ ಇಲ್ಲದೆ ಸ್ವಾತಂತ್ರ್ಯ ಹೋರಾಟಗಾರರ ಅಂತ್ಯಸಂಸ್ಕಾರ

author img

By

Published : Aug 19, 2020, 3:13 AM IST

ಈಸೂರು ದಂಗೆ ಹೋರಾಟದ ಕೊನೆ ಕೊಂಡಿಯಾಗಿದ್ದ ಹುಚ್ಚರಾಯಪ್ಪ (104) ಮೃತಪಟ್ಟಿದ್ದು, ಸರ್ಕಾರಿ ಗೌರವ ಇಲ್ಲದೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಹುಚ್ಚರಾಯಪ್ಪ
ಹುಚ್ಚರಾಯಪ್ಪ

ಸಿಎಂ ತವರು ಕ್ಷೇತ್ರದಲ್ಲೆ ಮೃತ ಸ್ವಾತಂತ್ರ್ಯ ಹೋರಾಟಗಾರರಿಗಿಲ್ಲ ಸರ್ಕಾರಿ ಗೌರವ.

ಶಿವಮೊಗ್ಗ: ಸಿಎಂ ತವರು ಕ್ಷೇತ್ರ ಶಿಕಾರಿಪುರದಲ್ಲಿ ಮೃತಪಟ್ಟ ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರಿ ಗೌರವಿಲ್ಲದೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮಂಗಳವಾರ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹುಚ್ಚರಾಯಪ್ಪ(104) ವಯೋ ಸಹಜ ಸಾವಿಗೆ ಈಡಾಗಿದ್ದರು. ಈಸೂರು ಪ್ರಥಮ ಸ್ವಾತಂತ್ರ್ಯ ಸಂಗ್ರಮದ ಕಿಚ್ಚು ಹಚ್ಚಿದ್ದ ಗ್ರಾಮ. ಈ ಗ್ರಾಮದ ಶತಾಯುಷಿ ಹುಚ್ಚರಾಯಪ್ಪ ಸಾವನ್ನಪ್ಪಿದ್ದಾರೆ.

ಕನಿಷ್ಟ ಸರ್ಕಾರಿ ಅಧಿಕಾರಿಗಳು ಕೂಡ ಗ್ರಾಮಕ್ಕೆ ಭೇಟಿ ನೀಡಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರಿ ಗೌರವ ಸಲ್ಲಿಸದೆ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಚ್ಚರಾಯಪ್ಪ ಈಸೂರು ದಂಗೆ ಹೋರಾಟದ ಕೊನೆ ಕೊಂಡಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.