ಹೊಸಪೇಟೆ(ವಿಜಯನಗರ): ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯನಗರ ಜಿಲ್ಲಾ ಉದ್ಘಾಟನೆಯ ಸಮಾರೋಪ ಕಾರ್ಯಕ್ರಮದಲ್ಲಿ ಗಾಯಕಿ ಲಕ್ಷ್ಮಿ ದುಬೆ ಅವರ ಹಾಡುಗಳಿಗೆ ಜಿಲ್ಲಾಡಳಿತ ಅರ್ಧಕ್ಕೆ ನಿಲ್ಲಿಸಿದ ಘಟನೆ ಭಾನುವಾರ ನಡೆಯಿತು.
ಲಕ್ಷ್ಮಿ ದುಬೆ ಅವರು ಹಿಂದೂ ಪರ ಹಾಡುಗಳನ್ನು ಹಾಡುತ್ತಿದ್ದರು. ಇದರಿಂದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಕೈ ಸನ್ನೆ ಮಾಡುವ ಮೂಲಕ ಹಾಡುಗಳನ್ನು ನಿಲ್ಲಿಸಿ ಎಂದು ಸೂಚಿಸಿದರು.
ಡಿಸಿ ಅವರ ಸೂಚನೆಯಿಂದ ಅತೃಪ್ತಳಾದ ಗಾಯಕಿ, ಹಾಡಲು ಮತ್ತೊಂದು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸದ ಹಿನ್ನೆಲೆ ಲಕ್ಷ್ಮಿ ತಮ್ಮ ಗಾಯನ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ವೇದಿಕೆಯಿಂದ ಹೊರ ನಡೆದರು.