ETV Bharat / city

ಆನಂದ ಸಿಂಗ್​ ಸ್ವಾಮಿ ನಿಷ್ಠೆ... ಬಿಎಸ್​ವೈ ಪಾದದ ಬಳಿ ಶೂ ತಂದಿಟ್ಟ ಅನರ್ಹ ಶಾಸಕ!

author img

By

Published : Nov 25, 2019, 4:00 PM IST

ಬಿಎಸ್​ವೈ ಪಾದದ ಬಳಿ ಶೂ ತಂದಿಟ್ಟ ಅನರ್ಹ ಶಾಸಕ

ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಆನಂದ್ ಸಿಂಗ್​ ಪರ ಸಿಎಂ ಯಡಿಯೂರಪ್ಪ ಉಪ ಚುನಾವಣಾ ಪ್ರಚಾರಕ್ಕಾಗಮಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲ ಬಳಿ ಬೂಟ್ ಅನ್ನು ತಂದಿಡುವ ಮೂಲಕ ಅನರ್ಹ ಶಾಸಕ ಆನಂದ್​ ಸಿಂಗ್ ಸ್ವಾಮಿ ನಿಷ್ಠೆ ತೋರಿದ್ದಾರೆ.

ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲ ಬಳಿ ಬೂಟ್ ಅನ್ನು ತಂದಿಡುವ ಮೂಲಕ ಅನರ್ಹ ಶಾಸಕ ಆನಂದ್​ ಸಿಂಗ್ ಸ್ವಾಮಿ ನಿಷ್ಠೆ ತೋರಿದ್ದಾರೆ.

ಮಾಜಿ ಶಾಸಕ ಜಿ.ಶಂಕರಗೌಡರ ಮನೆಗೆ ಭೇಟಿ ನೀಡಿದ ಸಿಎಂ

ಹೌದು, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಆನಂದ್ ಸಿಂಗ್​ ಪರ ಸಿಎಂ ಯಡಿಯೂರಪ್ಪ ಉಪ ಚುನಾವಣಾ ಪ್ರಚಾರಕ್ಕಾಗಮಿಸಿದ್ದರು. ಹೊಸಪೇಟೆ ನಗರಕ್ಕಾಗಮಿಸಿ ಸಿಎಂ ನೇರವಾಗಿ ಕೊಟ್ಟೂರು ಸ್ವಾಮಿ‌‌ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮೂಲ‌ ಗದ್ದುಗೆ ದರ್ಶನ ಪಡೆದ ಬಳಿಕ, ಕೊಟ್ಟೂರು ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿಯವರ ಕುಶಲೋಪರಿ ವಿಚಾರಿಸಿದರು.

ನಂತರ ಮಾಜಿ ಶಾಸಕ ಜಿ.ಶಂಕರಗೌಡರ ಮನೆಗೆ ಭೇಟಿ ನೀಡಿ ಅವರ ಪುತ್ರ ಭರಮನಗೌಡರ ಕುಟುಂಬ ‌ಸದಸ್ಯರೊಂದಿಗೆ‌ ಮಾತನಾಡಿದರು. ಬಳಿಕ ಹೊರ ಹೋಗುತ್ತಿದ್ದಂತೆಯೇ ಮೊಬೈಲ್‌ ನಲ್ಲಿ ಮಾತನಾಡುತ್ತ ಮುನ್ನಡೆದ ಆನಂದಸಿಂಗ್ ಅವರು, ಪ್ರವೇಶದ್ವಾರದ ಬಳಿಯಿದ್ದ ಬೂಟ್ಅನ್ನು ಕೈಯಿಂದ ಹಿಡಿದು ಸಿಎಂ ಕಾಲಿನತ್ತ ತಂದಿಟ್ಟರು. ಆಗ ಸಿಎಂ ತಮ್ಮ ಎರಡು ಕಾಲುಗಳನ್ನು ಬೂಟಿನೊಳಗೆ ತೂರಿಸಿದರು.

ಮಾಜಿ ಶಾಸಕ ಜಿ.ಶಂಕರಗೌಡರ ಮನೆಗೆ ಭೇಟಿ ನೀಡಿದ ಸಿಎಂ
ಮಾಜಿ ಶಾಸಕ ಜಿ.ಶಂಕರಗೌಡರ ಮನೆಗೆ ಭೇಟಿ ನೀಡಿದ ಸಿಎಂ

ಈ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

Intro:ಸಿಎಂ ಬಿಎಸ್ ವೈ ಕಾಲ ಬಳಿ ಬೂಟ್ ಎತ್ತಿಹಾಕಿದ ಆನಂದಸಿಂಗ್..!
ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವ್ರ ಕಾಲಬಳಿ ಬೂಟ್ ಅನ್ನು ಎತ್ತಿಹಾಕಿ ಆನಂದಸಿಂಗ್ ಅವರು ನೋಡುಗರ ವಿಶೇಷ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ವಿಜಯನಗರ ಕ್ಷೇತ್ರದಲ್ಲಿಂದು ಉಪ ಚುನಾವಣೆ ನಿಮಿತ್ತ ಹೊಸಪೇಟೆ ನಗರಕ್ಕಾಗಮಿಸಿ ಸಿಎಂ ಬಿಎಸ್ ವೈಯವ್ರು ನೇರವಾಗಿ ಕೊಟ್ಟೂರು ಸ್ವಾಮಿ‌‌ ಮಠಕ್ಕೆ ಭೇಟಿ ನೀಡಿ, ಮೂಲ‌ ಗದ್ದುಗೆ ದರುಶನ ಪಡೆದ ಬಳಿಕ, ಕೊಟ್ಟೂರು ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿಯವ್ರ ಕುಶಲೋಪರಿಯನ್ನು ವಿಚಾರಿಸಿದ ನಂತ್ರ
ಮಾಜಿ ಶಾಸಕ ಜಿ.ಶಂಕರಗೌಡರ ಮನೆಗೆ
ಭೇಟಿ ಅವರ ಪುತ್ರ ಭರಮನಗೌಡ
ಕುಟುಂಬ ‌ಸದಸ್ಯರೊಂದಿಗೆ‌ ಮಾತನಾಡಿ ಹೊರ ಹೋಗುತ್ತಿದ್ದಂತೆಯೇ ಮೊಬೈಲ್‌ ನಲ್ಲಿ ಮಾತ ನಾಡುತ್ತಲೇ ಮುನ್ನಡೆದ ಆನಂದಸಿಂಗ್ ಅವರು, ಪ್ರವೇಶದ್ವಾರ ಬಳಿಯಿದ್ದ ಬಿಎಸ್ ವೈ ಕಪ್ಪನೆಯ ಬೂಟ್ ಎರಡು ಬೆರಳಿನಿಂದ ಹಿಡಿದು ಬಿಎಸ್ ವೈ ಕಾಲಿನತ್ತ ಹಾಕುತ್ತಾರೆ.‌ ಆಗ ಸಿಎಂ ಬಿಎಸ್ ವೈ ಮೂಖ ಪ್ರೇಕ್ಷಕರಂತೆ ವೀಕ್ಷಿಸಿ, ತಮ್ಮ ಎರಡು ಕಾಲುಗಳನ್ನು ಬೂಟಿನೊಳಗೆ ತೂರಿಸಿ ಹಾಕಿಕೊಂಡು ಹೋದ್ರು.


Body:ಈ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಎಸ್ ವೈ ಪರ - ವಿರುದ್ಧದ ಟೀಕೆಗಳು ಎಲ್ಲೆಡೆ ವ್ಯಾಪಕವಾಗಿ ಹರಡಿಕೊಂಡಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.Conclusion:KN_BLY_4_CM_BSY_SHOOS_WEAR_ANADASINGH_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.