ETV Bharat / bharat

ಪ್ರತಿಪಕ್ಷವನ್ನು ಎಷ್ಟು ದಿನ ದೂರ ಇಡ್ತೀರಿ?... ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

author img

By

Published : Dec 6, 2021, 7:50 PM IST

Updated : Dec 6, 2021, 9:03 PM IST

ರಾಜ್ಯಸಭೆಯ 12 ಸಂಸದರನ್ನು ಅಮಾನತು ಮಾಡಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, 'ಎಷ್ಟು ದಿನಗಳವರೆಗೆ ನೀವು ವಿರೋಧ ಪಕ್ಷಗಳನ್ನು ದೂರ ಇಡುತ್ತೀರಿ' ಎಂದು ಪ್ರಶ್ನಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ರಾಜ್ಯಸಭೆಯ 12 ಸಂಸದರನ್ನು ಅಮಾನತು ಮಾಡಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ​ ಖರ್ಗೆ, 'ಎಷ್ಟು ದಿನಗಳವರೆಗೆ ನೀವು ವಿರೋಧ ಪಕ್ಷಗಳನ್ನು ದೂರ ಇಡುತ್ತೀರಿ' ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸದಸ್ಯರ ಅಮಾನತನ್ನು ಸಭಾಪತಿಗಳು ವಾಪಸ್​ ಪಡೆಯಲು ಸಿದ್ಧರಿಲ್ಲ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವನ್ನು ಎಷ್ಟು ದಿನಗಳವರೆಗೆ ಹೀಗೆ ದೂರ ಇಡುತ್ತೀರಿ. ಸುಗಮ ಕಲಾಪಕ್ಕೆ ನಾವು ಸಹಕರಿಸಲು ಸಿದ್ಧ. ಆದರೆ, ವಿಪಕ್ಷಗಳ ಕೆಲ ಷರತ್ತುಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಖರ್ಗೆ ಸಭಾಧ್ಯಕ್ಷರನ್ನು ಒತ್ತಾಯಿಸಿದ್ದಾರೆ.

ಪ್ರತಿಪಕ್ಷದ ಸಂಸದರನ್ನು ಅಮಾನತು ಮಾಡಿದ್ದರ ಬಗ್ಗೆ ಸಭಾಪತಿಗಳು ತಮ್ಮ ನಿರ್ಣಯವನ್ನು ಮರುಪರಿಶೀಲಿಸಬೇಕು. ಸದಸ್ಯರ ಅಮಾನತು ಆದೇಶ ಹಿಂಪಡೆದು ಸದನ ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.

ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ

ಅಮಾನತಾದ ಸದಸ್ಯರ ಅಮಾನತು ಆದೇಶ ವಾಪಸ್​ ಪಡೆಯಬೇಕು ಎಂದು ಸಭಾಪತಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಯಿತು. ಎಲ್ಲ ಸದಸ್ಯರು ಕ್ಷಮೆ ಕೇಳಬೇಕು. ಇಲ್ಲವಾದರೆ, ವಿಪಕ್ಷ ನಾಯಕರು ಈ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಸಭಾಪತಿಗಳು ಹೇಳಿದರು. ಕಾನೂನುಬಾಹಿರವಾಗಿ ಸದಸ್ಯರನ್ನು ಅಮಾನತು ಮಾಡಲಾಗಿದೆ. ಇದರಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದನ್ನೂ ಓದಿ: ಭಾರತ ಮಹಾನ್​​ ಶಕ್ತಿ, ಸ್ನೇಹಪರ ರಾಷ್ಟ್ರ: ಹಿಂದೂಸ್ತಾನದ ಗುಣಗಾನ ಮಾಡಿದ ಪುಟಿನ್​

ನಾವು ಎಲ್ಲಾ ವಿಷಯಗಳ ಮೇಲೆ ಚರ್ಚೆ ಮಾಡಲು ಸಿದ್ಧರಿದ್ದೇವೆ. ಇದಕ್ಕೂ ಮುನ್ನ ಸದಸ್ಯರ ಅಮಾನತು ಆದೇಶ ಶೀಘ್ರವೇ ಹಿಂಪಡೆಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

Last Updated :Dec 6, 2021, 9:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.