ETV Bharat / bharat

'ನಂಗೆ ಉಸಿರಾಡಲು ಆಗ್ತಿಲ್ಲ, ನನ್ನ ಹೆಂಡತಿಯನ್ನ ಹುಷಾರಾಗಿ ನೋಡಿಕೊಳ್ಳಿ'... ಕೊರೊನಾಗೆ ಬಲಿಯಾದವನ ಕೊನೆಯ ಮಾತು!

author img

By

Published : May 8, 2021, 12:26 PM IST

Updated : May 8, 2021, 12:42 PM IST

newly married groom died with corona at hyderabad
ಕೊರೊನಾಗೆ ಬಲಿಯಾದ ನವವಿವಾಹಿತ

ಕೋವಿಡ್​ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತ ಸಾಯುವ ಮುನ್ನ ಪೋಷಕರಿಗೆ ಕರೆ ಮಾಡಿ ನನಗೆ ಉಸಿರಾಡಲು ತುಂಬಾ ಕಷ್ಟವಾಗುತ್ತಿದೆ. ನನ್ನ ಹೆಂಡತಿಯನ್ನು ಹುಷಾರಾಗಿ ನೋಡಿಕೊಳ್ಳುವಂತೆ ಹೇಳಿ ಕೊನೆಯುಸಿರೆಳೆದಿದ್ದಾರೆ.

ಹೈದರಾಬಾದ್‌: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದು ತಿಂಗಳಲ್ಲೇ ತೆಲಂಗಾಣದ 28 ವರ್ಷದ ವ್ಯಕ್ತಿಯನ್ನು ಮಹಾಮಾರಿ ಕೊರೊನಾ ಬಲಿ ತೆಗೆದುಕೊಂಡಿದೆ.

ಹೈದರಾಬಾದ್​ನ ಮಲ್ಲಾಪುರದಲ್ಲಿ ವಾಸವಾಗಿರುವ ದಿನಕರ್​ ಯಾದವ್​ ಎಂಬುವರು ತನ್ನ ಪತ್ನಿಯೊಂದಿಗೆ ಎಲ್​​ಬಿ ನಗರದಲ್ಲಿರುವ ಅತ್ತೆ ಮನೆಗೆ ಹೋಗಿ ಬಂದ ಮರುದಿನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಬಳಿಕ ಅವರ ಕೋವಿಡ್​ ವರದಿ ಪಾಸಿಟಿವ್​ ಬಂದಿದ್ದು, ಮನೆಯಲ್ಲಿಯೇ ಕ್ವಾರಂಟೈನ್​ ಆಗಿದ್ದರು.

ಇದನ್ನೂ ಓದಿ: ಆಮ್ಲಜನಕ ಇಲ್ಲವೆಂದು ರಾತ್ರಿ ವಿಡಿಯೋ ಕಾಲ್, ಮುಂಜಾನೆ ಸಾವು: ನವವಿವಾಹಿತನ ದುರಂತ ಅಂತ್ಯ

ಆದರೆ ಅವರ ಆರೋಗ್ಯ ಹದಗೆಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೇ 4ರಂದು ಪೋಷಕರಿಗೆ ಆಸ್ಪತ್ರೆಯಿಂದ ಕರೆ ಮಾಡಿದ್ದ ದಿನಕರ್, ನನಗೆ ಉಸಿರಾಡಲು ತುಂಬಾ ಕಷ್ಟವಾಗುತ್ತಿದೆ. ನನ್ನ ಹೆಂಡತಿಯನ್ನು ಹುಷಾರಾಗಿ ನೋಡಿಕೊಳ್ಳಿ ಎಂದು ಹೇಳಿ ಕೊನೆಯುಸಿರೆಳೆದಿದ್ದಾರೆ.

Last Updated :May 8, 2021, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.