ETV Bharat / bharat

ಮಹಾರಾಷ್ಟ್ರದಲ್ಲಿ ಎನ್​ಸಿಪಿ ಶಾಸಕನಿಂದ 'ತಲೆಕೆಳಗಾದ' ಪ್ರತಿಭಟನೆ

author img

By

Published : Mar 3, 2022, 2:29 PM IST

sheershasan
ತಲೆಕೆಳಗಾದ

ಕರ್ನಾಟಕದಲ್ಲಿ ಹೋರಾಟಗಾರ ವಾಟಾಳ್​ ನಾಗರಾಜ್​ರ ಕತ್ತೆ, ಕೋಣ ಮೆರವಣಿಗೆ, ರಸ್ತೆ ಅಡ್ಡಲಾಗಿ ಮಲಗುವುದು ಈ ರೀತಿಯ ಗಮನ ಸೆಳೆಯುವ ಪ್ರತಿಭಟನೆಗಳನ್ನು ನೋಡಿದ್ದೀರಿ. ಅದೇ ರೀತಿ ಮುಂಬೈನ ಶಾಸಕರೊಬ್ಬರು ಶೀರ್ಶಾಸನ ಹಾಕಿ ಪ್ರತಿಭಟಿಸಿ ಗಮನ ಸೆಳೆದಿದ್ದಾರೆ.

ಮುಂಬೈ: ಕರ್ನಾಟಕದಲ್ಲಿ ಹೋರಾಟಗಾರ ವಾಟಾಳ್​ ನಾಗರಾಜ್​ರ ಕತ್ತೆ, ಕೋಣ ಮೆರವಣಿಗೆ, ರಸ್ತೆ ಅಡ್ಡಲಾಗಿ ಮಲಗುವುದು ಈ ರೀತಿಯ ಗಮನ ಸೆಳೆಯುವ ಪ್ರತಿಭಟನೆಗಳನ್ನು ನೋಡಿದ್ದೀರಿ. ಅದೇ ರೀತಿ ಮುಂಬೈನ ಶಾಸಕರೊಬ್ಬರು ಶೀರ್ಶಾಸನ ಹಾಕಿ ಪ್ರತಿಭಟಿಸಿ ಗಮನ ಸೆಳೆದಿದ್ದಾರೆ.

ಹಿಂದುತ್ವ ಹೋರಾಟದ ಪ್ರತೀಕ ಶಿವಾಜಿ ಮಹಾರಾಜರ ಬಗ್ಗೆ ರಾಜ್ಯಪಾಲ ಭಗತ್​ ಸಿಂಗ್​ ಕೊಶ್ಯಾರಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಎನ್​ಸಿಪಿ, ಶಿವಸೇನೆ ನಾಯಕರು ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.

ಮಹಾರಾಷ್ಟ್ರದಲ್ಲಿ ಎನ್​ಸಿಪಿ ಶಾಸಕನಿಂದ 'ತಲೆಕೆಳಗಾದ' ಪ್ರತಿಭಟನೆ

ಈ ವೇಳೆ ಎನ್​ಸಿಪಿ ಶಾಸಕ ಸಂಜಯ್​ ದೌಂಡ್​​ ಎಂಬುವವರು ರಾಜ್ಯಪಾಲರ ಹೇಳಿಕೆಯನ್ನು ವಿರೋಧಿಸಿ ತಲೆಕೆಳಗೆ ಮಾಡಿ(ಶೀರ್ಶಾಸನ) ನಿಂತು ವಿಚಿತ್ರವಾಗಿ ಪ್ರತಿಭಟಿಸಿದರು. ಅಲ್ಲದೇ, ರಾಜ್ಯಪಾಲ ಭಗತ್​ ಸಿಂಗ್​ ಕೊಶ್ಯಾರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಎನ್​ಸಿಪಿ ಶಾಸಕರ ಈ ವಿಚಿತ್ರ ಪ್ರತಿಭಟನೆ ಅಲ್ಲಿದ್ದವರ ಗಮನ ಸೆಳೆಯಿತು.

ಓದಿ: ಉಕ್ರೇನ್​ನಲ್ಲಿ ಸಿಲುಕಿದ 693 ಕನ್ನಡಿಗರು: 149 ಮಂದಿ ಈವರೆಗೆ ತಾಯ್ನಾಡಿಗೆ ವಾಪಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.