ETV Bharat / bharat

ಬೇಡಿಕೆ ಈಡೇರುವವರೆಗೆ ರೈತ ಚಳವಳಿ ಮುಂದುವರೆಯುತ್ತದೆ: ಟಿಕಾಯತ್

author img

By

Published : Jul 15, 2021, 2:58 PM IST

Farmers' movement to continue until Govt fulfils demands says Tikait
ಬೇಡಿಕೆ ಈಡೇರುವವರೆಗೆ ರೈತ ಚಳವಳಿ ಮುಂದುವರೆಯುತ್ತದೆ: ಟಿಕಾಯತ್ ಟ್ವೀಟ್​

ಜುಲೈ 19ರಿಂದ ಆಗಸ್ಟ್ 13ರವರೆಗೆ ಸಂಸತ್​​ನ ಮಾನ್ಸೂನ್ ಅಧಿವೇಶನ ನಡೆಯಲಿದೆ. ಜುಲೈ 22ರಂದು ಸಂಸತ್​ನ ಹೊರಗೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಕೇಶ್ ಟಿಕಾಯತ್ ಹೇಳಿದರು.

ನವದೆಹಲಿ: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ ರೈತರ ಬೇಡಿಕೆಗಳಿಗೆ ಒಪ್ಪದೇ ಇದ್ದರೆ, ಬೇಡಿಕೆ ಈಡೇರುವವರೆಗೆ ಚಳವಳಿ ಮುಂದುವರೆಯುತ್ತದೆ ಎಂದು ಭಾರತ್ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸರ್ಕಾರ ಕೃಷಿ ಕಾಯ್ದೆಗಳ ವಿಚಾರದಲ್ಲಿ ರೈತರ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಮಾಡಿದ್ದಾರೆ.

  • लोकतांत्रिक देश में सरकार किसानों की बात नहीं मान रही है, लेकिन जब तक सरकार मांगे पूरी नहीं करेगी तब तक आन्दोलन जारी रहेगा .। #FarmersProtest

    — Rakesh Tikait (@RakeshTikaitBKU) July 15, 2021 " class="align-text-top noRightClick twitterSection" data=" ">

ಬುಧವಾರ ರೈತ ಪ್ರತಿಭಟನೆ ಬಗ್ಗೆ ಮಾತನಾಡುತ್ತಾ, ಜುಲೈ 22ರಂದು ಪಾರ್ಲಿಮೆಂಟ್ ಹೊರಗೆ ಶಾಂತಿಯುತ ಪ್ರತಿಭಟನೆ ನಡೆಯಲಿದೆ. ರೈತರು ಬಸ್​ ಮೂಲಕ ಪಾರ್ಲಿಮೆಂಟ್​ಗೆ ತೆರಳಲಿದ್ದು, ಸುಮಾರು ಇನ್ನೂರು ಮಂದಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಾವೇ ಬಸ್ ಪ್ರಯಾಣ ದರ ನೀಡುವುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​ಗೆ ವಂಚನೆ, ಕೇಸ್​ನ ಸಂಪೂರ್ಣ ತನಿಖೆಗೆ ಸೂಚನೆ: ಗೃಹ ಸಚಿವ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.