ETV Bharat / bharat

ಉರಿ ಪ್ರದೇಶದಲ್ಲಿ ಸೇನೆ ಉಗ್ರರ ನಡುವೆ ಕಾಳಗ: ಮೂವರು ಭಯೋತ್ಪಾದಕ ಮಟ್ಯಾಷ್​.. ಮುಂದುವರಿದ ಕಾರ್ಯಾಚರಣೆ

author img

By ETV Bharat Karnataka Team

Published : Sep 16, 2023, 10:37 AM IST

Updated : Sep 16, 2023, 1:36 PM IST

Encounter in Uri area
ಉರಿ ಪ್ರದೇಶದಲ್ಲಿ ಎನ್​ಕೌಂಟರ್

ನಾಪತ್ತೆಯಾಗಿದ್ದ ಭಾರತೀಯ ಯೋಧ ಎನ್​ಕೌಂಟರ್​ನಲ್ಲಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಎನ್​​ಕೌಂಟರ್​ನಲ್ಲಿ ಮೂವರನ್ನ ಹತ್ಯೆ ಮಾಡುವಲ್ಲಿ ಸೇನೆ ಯಶಸ್ವಿಯಾಗಿದೆ.

ಬಾರಾಮುಲ್ಲಾ( ಜಮ್ಮು ಮತ್ತು ಕಾಶ್ಮೀರ): ಭಾರತೀಯ ಸೇನೆ, ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಾರಾಮುಲ್ಲಾದ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಬಳ ನುಸುಳಲು ಯತ್ನಿಸಿದ ಮೂವರನ್ನು ಹೊಡೆದುರುಳಿಸಲಾಗಿದೆ.

ಈ ಮೂಲಕ ಒಳನುಸುಳುವಿಕೆಯನ್ನು ಯಶಸ್ವಿಯಾಗಿ ತಡೆಯಲಾಯಿತು. ಮೂವರು ಒಮ್ಮೆಲೆ ಗಡಿ ದಾಟಲು ಮುಂದಾಗಿದ್ದರು. ಈ ವೇಳೆ ಸೇನೆ ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾದರು, ಆ ಬಳಿಕ ಒಬ್ಬ ಪರಾರಿ ಆಗಲು ಯತ್ನಿಸಿದ್ದ ಆತನನ್ನೂ ಬಳಿಕ ಸೇನೆ ಎನ್​ಕೌಂಟರ್ ಮಾಡಿ ಹಾಕಿದೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಭಾರತೀಯ ಸೇನೆ ಹೇಳಿದೆ

ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಪಟ್ಟಣದ ಹತ್ಲಂಗಾ ಫಾರ್ವರ್ಡ್​ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಎನ್​ಕೌಂಟರ್​ ಮುಂದುವರೆದಿದೆ. ಮೂವರು ಉಗ್ರನನ್ನು ಸೇನಾಪಡೆಗಳು ಹೊಡೆದುರುಳಿಸಿವೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಎಕ್ಸ್​(ಹಿಂದಿನ ಟ್ವಿಟರ್​) ನಲ್ಲಿ ಕಾಶ್ಮೀರ ವಲಯ ಪೊಲೀಸರು ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, "ಬಾರಾಮುಲ್ಲಾ ಜಿಲ್ಲೆಯ ಉರಿ, ಹತ್ಲಂಗಾದ ಫಾರ್ವರ್ಡ್​ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭಾರತೀಯ ಸೇನೆ ನಡುವೆ ಎನ್​ಕೌಂಟರ್​ ಪ್ರಾರಂಭವಾಗಿದೆ. ಹೆಚ್ಚಿನ ವಿವರಗಳನ್ನು ಬಳಿಕ ನೀಡಲಾಗುವುದು ಎಂದು ಟ್ವೀಟ್​ ಮಾಡಿದ್ದರು. ಆ ಬಳಿಕ ಸೇನಾ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದು ಬಂದಿದೆ.
ಏತನ್ಮಧ್ಯೆ ಅನಂತ್​ನಾಗ್​ ಜಿಲ್ಲೆಯ ಕೋಕರ್​ನಾಗ್​ ಪ್ರದೇಶದ ಗಡೋಲ್​ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಾಲ್ಕನೇ ದಿನವೂ ಮುಂದುವರಿದಿದೆ. ತೀವ್ರ ಭಯೋತ್ಪಾದನೆ ವಿರೋಧಿ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಭದ್ರತಾ ಪಡೆ, ಗಡೋಲ್​ ಗುಡ್ಡಗಾಡು ಪ್ರದೇಶದಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಸುತ್ತುವರಿದಿದ್ದಾರೆ.

ಡ್ರೋನ್​ಗಳ ಮೂಲಕ ಉಗ್ರರ ಮೇಲೆ ನಿಗಾ ಇರಿಸಿರುವ ಸೇನಾ ಪಡೆ, ಭಯೋತ್ಪಾದಕರು ಸಂಚರಿಸುತ್ತಿರುವುದು ಕಂಡ ಬಂದರೆ ಆಧುನಿಕ ಶಸ್ತ್ರಾಸ್ತ್ರಗಳ ಮೂಲಕ ದಾಳಿ ಮಾಡುವುದರ ಜೊತೆಗೆ, ಮೋರ್ಟಾರ್​ ಶೆಲ್​ಗಳನ್ನು ಹಾರಿಸುತ್ತಿದ್ದಾರೆ. ಕಾಡಿನೊಳಗೆ 2-3 ಜನ ಭಯೋತ್ಪಾದಕರು ಅಡಗಿ ಕುಳಿತಿರುವ ಮಾಹಿತಿ ಇದ್ದು, ಅವರನ್ನು ಕೊಲ್ಲಲಾಗುವುದು. ಯಾವುದೇ ಕಾರಣಕ್ಕೂ ಒಬ್ಬ ಭಯೋತ್ಪಾದಕನೂ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ ವಿಜಯ್​ ಕುಮಾರ್​ ತಿಳಿಸಿದ್ದಾರೆ.

ಈಗಾಗಲೇ ಭದ್ರತಾ ಪಡೆಗಳು ಗುಡ್ಡದ ಸುತ್ತ ಬಿಗಿ ಬಂದೋಬಸ್ತ್​ ಮಾಡಿದ್ದಾರೆ. ಬೆಟ್ಟದ ಹಿಂಭಾಗದಲ್ಲಿ ಚರಂಡಿ, ನದಿಗಳಿವೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉಗ್ರರು ತಪ್ಪಿಸಿಕೊಳ್ಳುವುದು ಕಷ್ಟ. ಏತನ್ಮಧ್ಯೆ ಗುರುವಾರ ನಾಪತ್ತೆಯಾಗಿದ್ದ ಭಾರತೀಯ ಯೋಧನೊಬ್ಬ ಎನ್​ಕೌಂಟರ್​ನಲ್ಲಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದಾಳಿಯಲ್ಲಿ ಮೂವರು ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು. ಒಬ್ಬ ಮೇಜರ್​, ಒಬ್ಬ ಕರ್ನಲ್​ ಹಾಗೂ ಡಿಎಸ್​​ಪಿ ಪ್ರಾಣ ಕಳೆದುಕೊಂಡಿದ್ದರು. ಯೋಧರ ಸಾವಿಗೆ ದೇಶಕ್ಕೆ ದೇಶವೇ ಕಂಬನಿ ಮಿಡಿದಿತ್ತು. ಮೂವರು ಯೋಧರ ಪಾರ್ಥಿವ ಶರೀರಗಳಿಗೆ ಗೌರವ ವಂದನೆ ಸಲ್ಲಿಸಿ ಅವರವರ ತವರುಗಳಿಗೆ ಸೇನೆ ರವಾನಿಸಿತ್ತು. ಈ ಬಗ್ಗೆ ದೇಶಾದ್ಯಂತ ಆಕ್ರೋಶವೂ ವ್ಯಕ್ತವಾಗಿತ್ತು.

ಇದನ್ನೂ ಓದಿ: ಅನಂತ್‌ನಾಗ್‌ನಲ್ಲಿ 3ನೇ ದಿನವೂ ಮುಂದುವರಿದ ಎನ್​ಕೌಂಟರ್​: ಯೋಧ ನಾಪತ್ತೆ, ಇಬ್ಬರಿಗೆ ಗಾಯ

Last Updated :Sep 16, 2023, 1:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.