ETV Bharat / bharat

ಡ್ರಗ್ಸ್​ ಕೇಸಲ್ಲಿ ಇಬ್ಬರ ಬಂಧನ; ಗುಲ್ಶನ್ ಕುಮಾರ್ ಕೊಲೆ, ಮುಂಬೈ ಸ್ಫೋಟ ಪ್ರಕರಣದ ಆರೋಪಿಗಳೂ ಹೌದು

author img

By

Published : Jan 24, 2021, 11:01 PM IST

gulshan-kumar-murder-1993-blasts-case-accused-arrested-for-drug-smuggling
ಗುಲ್ಶನ್ ಕುಮಾರ್ ಕೊಲೆ- 1993 ರ ಮುಂಬೈ ಸ್ಫೋಟ ಪ್ರಕರಣದ ಆರೋಪಿಗಳ ಬಂಧನ!

ಗುಲ್ಶನ್ ಕುಮಾರ್ ಕೊಲೆ ಮತ್ತು 1993 ರ ಮುಂಬೈ ಸ್ಫೋಟ ಪ್ರಕರಣಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಇಬ್ಬರು ಆರೋಪಿಗಳನ್ನು ಅಂತೋರ್​ ಪೊಲೀಸರು ಬಂಧಿಸಿದ್ದಾರೆ.

ಭೂಪಾಲ್​: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 70 ಕೋಟಿ ರೂ. ಬೆಲೆಬಾಳುವ 70 ಕಿಲೋ ಗ್ರಾಂ ಗಳಷ್ಟು ಎಂಡಿಎಂಎ ಡ್ರಗ್​ ಔಷಧಿಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅಂತೋರ್ ಪೊಲೀಸರು ಬಂಧಿಸಿದ್ದಾರೆ. ಕಾಕತಾಳೀಯವಾಗಿ, ಬಂಧಿತ ಆರೋಪಿಗಳಾದ ವಾಸಿಮ್ ಖಾನ್ ಮತ್ತು ಆಯುಬ್ ಖುರೇಷಿ ಟಿ-ಸಿರೀಸ್​ ಮಾಲೀಕ ಗುಲ್ಶನ್ ಕುಮಾರ್ ಕೊಲೆ ಹಾಗೂ 1993 ರ ಮುಂಬೈ ಸ್ಫೋಟ ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳೆಂಬುದು ತಿಳಿದುಬಂದಿದೆ.

70 ಕೆಜಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಖಾನ್ ಮತ್ತು ಖುರೇಷಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದ ನಂತರ ಅವರಿಬ್ಬರನ್ನು ಬಂಧಿಸಲಾಗಿದೆ ಎಂದು ಇಂದೋರ್ ಎಡಿಜಿ ಯೋಗೇಶ್ ದೇಶಮುಖ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ಈ ಹಿಂದೆ ವೇದಪ್ರಕಾಶ್ ವ್ಯಾಸ್, ದಿನೇಶ್ ಅಗರ್ವಾಲ್ ಮತ್ತು ಸರ್ದಾರ್ ಖಾನ್ ಅವರನ್ನು ಬಂಧಿಸಿದ್ದರು. ಇವರಿಂದ ದೇಶದ ಅತಿ ದೊಡ್ಡ ಮನೋವಿಕೃತ ಡ್ರಗ್​​ ಔಷಧವನ್ನು ವಶಪಡಿಸಿಕೊಂಡಿದ್ದಾರೆ.

ಯೋಗೇಶ್ ದೇಶ್​ಮುಖ್ ಮಾತನಾಡಿದರು

ಗುಲ್ಶನ್ ಕುಮಾರ್ ಕೊಲೆ ಪ್ರಕರಣದಲ್ಲಿ ವಾಸಿಮ್ ಖಾನ್ ಖುಲಾಸೆಗೊಂಡಿದ್ದು, ನಂತರ ಮಾದಕ ದ್ರವ್ಯ ಕಳ್ಳಸಾಗಣೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, 1993ರ ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಖುರೇಷಿ ಕೂಡ ಮಾದಕ ದ್ರವ್ಯ ದಂಧೆಗೆ ಸೇರಿಕೊಂಡಿದ್ದಾನೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಖಾನ್ ಭೂಗತ ದರೋಡೆಕೋರ ಅಬು ಸೇಲಂ ಅವರ ಆಪ್ತ ಸಹಾಯಕನಾಗಿದ್ದು, ಆತನ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇನ್ನೊಬ್ಬ ಆರೋಪಿ ಖುರೇಷಿ, ದಿನೇಶ್ ಅಗರ್ವಾಲ್ ಮತ್ತು ಸರ್ದಾರ್ ಖಾನ್ ಅವರೊಂದಿಗೆ ಸಂಪರ್ಕ ಹೊಂದಿದ್ದರು. ಅವರು ಟೆಂಟ್ ಮನೆಯ ವಸ್ತ್ರ ಮತ್ತು ಅಡುಗೆ ಕೆಲಸ ಮಾಡುತ್ತಾ, ಡ್ರಗ್ ದಂಧೆ ನಡೆಸುತ್ತಿದ್ದ ಎಂಬುದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.