ETV Bharat / bharat

ಆದಾರ್ ಪೂನಾವಾಲಾ ಮೊಬೈಲ್ ಸಂಖ್ಯೆಯಿಂದ ನಕಲಿ ವಾಟ್ಸ್​ಆ್ಯಪ್​ ಸಂದೇಶ: ಸೀರಮ್​​ ಸಂಸ್ಥೆಗೆ 1 ಕೋಟಿ ವಂಚನೆ

author img

By

Published : Sep 10, 2022, 6:23 PM IST

1-crore-extortion-to-serum-institute-through-cyber-fraud-fake-message-from-aadhar-punawala-whatsapp-number
ಆದಾರ್ ಪೂನಾವಾಲಾ ಮೊಬೈಲ್ ಸಂಖ್ಯೆಯಿಂದ ನಕಲಿ ವಾಟ್ಸ್​ಆ್ಯಪ್​ ಸಂದೇಶ: ಸೀರಮ್​​ ಸಂಸ್ಥೆಗೆ 1 ಕೋಟಿ ವಂಚನೆ

ಆದಾರ್ ಪೂನಾವಾಲಾ ಅವರ ಮೊಬೈಲ್ ಸಂಖ್ಯೆಯಿಂದ ನಕಲಿ ವಾಟ್ಸ್​ಆ್ಯಪ್​ ಸಂದೇಶ ಕಳುಹಿಸಿರುವಂತೆ ಮಾಡಿ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಲಾಗಿದೆ.

ಪುಣೆ (ಮಹಾರಾಷ್ಟ್ರ): ಕೊರೊನಾದ ಕೋವಿಶೀಲ್ಡ್ ಲಸಿಕೆ ಪೂರೈಸುವ ಪುಣೆಯ ಸೀರಮ್ ಸಂಸ್ಥೆಯ ಮುಖ್ಯಸ್ಥ ಆದಾರ್ ಪೂನಾವಾಲಾ ಅವರಿಗೆ ಆನ್​ಲೈನ್​ ಮೂಲಕ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೂನಾವಾಲಾ ಅವರು ಮೊಬೈಲ್ ಸಂಖ್ಯೆಯಿಂದ ನಕಲಿ ಸಂದೇಶ ಕಳುಹಿಸಿ ಇಷ್ಟೊಂದು ಮೊತ್ತದ ಹಣ ವಸೂಲಿ ಮಾಡಲಾಗಿದೆ. ಈ ಕುರಿತು ಬಂಡಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದಾರ್ ಪೂನಾವಾಲಾ ಸೀರಮ್ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸತೀಶ್ ದೇಶಪಾಂಡೆ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ದೇಶಪಾಂಡೆ ಅವರ ಮೊಬೈಲ್‌ಗೆ ಕಂಪನಿ ಸಿಇಒ ಪೂನಾವಾಲಾ ಅವರ ಮೊಬೈಲ್ ಸಂಖ್ಯೆಯಿಂದ ವಾಟ್ಸ್​ಆ್ಯಪ್​ ಸಂದೇಶ ಬಂದಿದೆ. ಆ ಸಂದೇಶದಲ್ಲಿ ಕೆಲವು ಬ್ಯಾಂಕ್ ಖಾತೆ ಸಂಖ್ಯೆಗಳನ್ನು ನೀಡಲಾಗಿತ್ತು. ಕೂಡಲೇ ಈ ನಂಬರ್‌ಗೆ ಹಣ ಕಳುಹಿಸುವಂತೆ ತಿಳಿಸಲಾಗಿತ್ತು.

ಅಂತೆಯೇ, ಕಂಪನಿಯ ಮಾಲೀಕರಾದ ಪೂನಾವಾಲಾ ಅವರಿಂದಲೇ ಈ ಸಂದೇಶ ಬಂದಿದೆ ಎಂದು ದೇಶಪಾಂಡೆ ತಿಳಿದುಕೊಂಡಿದ್ದಾರೆ. ಅಲ್ಲದೇ, ಈ ಬಗ್ಗೆ ಸಾಗರ ಕಿತ್ತೂರ ಎಂಬುವವರಿಗೆ ಮಾಹಿತಿ ನೀಡಿ ವಾಟ್ಸ್​ಆ್ಯಪ್​ ಸಂದೇಶದಲ್ಲಿದ್ದ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವಂತೆ ಸೂಚಿಸಿದ್ದಾರೆ. ಆಗ ಸಾಗರ ಕಿತ್ತೂರು ಸಂದೇಶದಲ್ಲಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟಾರೆ 1,01,01,554 ರೂಪಾಯಿಗಳನ್ನು ಪಾವತಿಸಿದ್ದಾರೆ. ಇದೆಲ್ಲವೂ ಸೆಪ್ಟೆಂಬರ್ 7ರಿಂದ 8ರ ನಡುವೆ ಆನ್‌ಲೈನ್‌ನಲ್ಲಿ ನಡೆದಿದೆ.

ಇದಾದ ನಂತರ ಸಾಗರ ಕಿತ್ತೂರ ಅವರು ಹಣ ತುಂಬಿರುವ ಕಂಪನಿಯಲ್ಲಿ ಚರ್ಚಿಸಿದ್ದಾರೆ. ಈ ವೇಳೆ, ಆದಾರ್ ಪುನಾವಾಲಾ ಅವರು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸಲು ಯಾವುದೇ ಸಂದೇಶ ಕಳುಹಿಸಿಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ ಆನ್​ಲೈನ್​ ವಂಚನೆ ಬಗ್ಗೆ ದೂರು ನೀಡಲಾಗಿದೆ.

ಇದನ್ನೂ ಓದಿ: 200 ಕೋಟಿ ರೂ. ಸುಲಿಗೆ ಪ್ರಕರಣ: ನೋರಾ ಫತೇಹಿ ಮೇಲೆ 50 ಪ್ರಶ್ನೆಗಳ ಸುರಿಮಳೆ ಹರಿಸಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.