ಕರ್ನಾಟಕ

karnataka

Extreme weather: ಹವಾಮಾನ ವೈಪರೀತ್ಯದಿಂದಾಗಿ ಹೆಚ್ಚುತ್ತಿದೆ ಬಾಲ್ಯ ವಿವಾಹ!

By ETV Bharat Karnataka Team

Published : Aug 31, 2023, 3:18 PM IST

ಹವಾಮಾನ ವೈಪರೀತ್ಯ ಸಮಸ್ಯೆಗಳು ಬಡತನ ಜೊತೆಗೆ ಲಿಂಗ ಅಸಮಾನತೆಯನ್ನು ಹೆಚ್ಚಿಸುತ್ತದೆ. ಇದು ಕೂಡ ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

http://10.10.50.85:6060/reg-lowres/31-August-2023/weather_3108newsroom_1693469249_685.jpg
http://10.10.50.85:6060/reg-lowres/31-August-2023/weather_3108newsroom_1693469249_685.jpg

ಓಹಿಯೋ: ಹವಾಮಾನ ದುರಂತದಿಂದ ಜಗತ್ತಿನಾದ್ಯಂತ ಆಗುತ್ತಿರುವ ಕೆಟ್ಟ ಪರಿಣಾಮಗಳಲ್ಲಿ ಒಂದು ಬಾಲ್ಯವಿವಾಹದ ಏರಿಕೆಯೂ ಆಗಿದ್ದು, ಈ ಬಗ್ಗೆ ಜನರು ಹೆಚ್ಚಿನ ಗಮನ ಹರಿಸಿಲ್ಲ ಎಂದು ಸಂಶೋಧನೆ ತಿಳಿಸಿದೆ.

ಓಹಿಯೋ ಸ್ಟೇಟ್​ ಯುನಿವರ್ಸಿಟಿ, ಈ ಸಂಬಂಧ ಬರ, ಪ್ರವಾಹ ಮತ್ತಿತರ ವಿಪರೀತ ಹವಾಮಾನ ಸಂಬಂಧಿತ 20 ಅಧ್ಯಯನಗಳ ವ್ಯವಸ್ಥಿತ ವಿಶ್ಲೇಷಣೆ ನಡೆಸಿದೆ. ಈ ವೇಳೆ ತೀವ್ರ ಹವಾಮಾನ ಘಟನೆಗಳು ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಮಕ್ಕಳಿಗೆ ಬೇಗ ಮತ್ತು ಬಲವಂತದ ಮದುವೆ ಹೆಚ್ಚಾಗಿದೆ.

ಒಟ್ಟಾರೆ ಅಧ್ಯಯನವೂ ಸಮಸ್ಯೆಯ ಬಲವಾದ ಪುರಾವೆಗಳನ್ನು ನೀಡಿದೆ ಎಂದು ಓಹಿಯೋ ಸ್ಟೇಟ್​ನ ಸೋಶಿಯಲ್​ ವರ್ಕ್​ನ ಡಾಕ್ಟರಲ್​​​​ ಅಭ್ಯರ್ಥಿ ಹಾಗೂ ಅಧ್ಯಯನದ ಪ್ರಮುಖ ಲೇಖಕರಾದ ಫಿಯೋನಾ ಡೊಹರ್ಟಿ ತಿಳಿಸಿದ್ದಾರೆ.

ತೀವ್ರ ಹವಾಮಾನ ಪರಿಣಾಮಗಳು ಬಾಲ್ಯ ವಿವಾಹದ ನೇರ ಪರಿಣಾಮವನ್ನು ಹೊಂದಿದೆ ಎಂದು ಡೊಹರ್ಟಿ ತಿಳಿಸಿದ್ದಾರೆ. ಹವಾಮಾನ ದುರಂತಗಳು ಪ್ರಸ್ತುತ ಇರುವ ಸಮಸ್ಯೆಯನ್ನು ಹೆಚ್ಚಿಸುವ ಜೊತೆಗೆ ಲಿಂಗ ಅಸಮಾನತೆ ಮತ್ತು ಬಡತನವನ್ನು ಹೆಚ್ಚಿಸಿ, ಕುಟುಂಬವೂ ಇದರ ನಿರ್ವಹಣೆಗೆ ಬಾಲ್ಯ ವಿವಾಹಕ್ಕೆ ಮುಂದಾಗುವಂತೆ ಮಾಡುತ್ತದೆ ಎಂದಿದ್ದಾರೆ.

ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಹೆಚ್ಚಿನ ಪರಿಣಾಮ: ಈ ಅಧ್ಯಯನವನ್ನು ಇಂಟರ್​ನ್ಯಾಷನಲ್​ ಸೋಷಿಯಲ್​ ವರ್ಕ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಜಾಗತಿಕವಾಗಿ, ಐವರಲ್ಲಿ ಓರ್ವ ಹುಡುಗಿಗೆ 18 ವರ್ಷ ವಯಸ್ಸು ತುಂಬುವ ಮೊದಲೇ ಮದುವೆಯಾಗುತ್ತಿದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಈ ಸಂಖ್ಯೆ ಶೇ 40ರಷ್ಟು ಹೆಚ್ಚಿದೆ. ಈ ಸಂಖ್ಯೆಗಳು ಪರಿಸರ ಬದಲಾವಣೆಗಳೊಂದಿಗೆ ಹೆಚ್ಚುತ್ತದೆ. ಅಲ್ಲದೇ, ಬಾಲ್ಯ ವಿವಾಹದ ಸುತ್ತಲಿನ ಸಂಕೀರ್ಣತೆಯನ್ನು ಈ ತೀವ್ರ ಹವಾಮಾನ ಬದಲಾವಣೆ ಮತ್ತಷ್ಟು ಕೆಟ್ಟದಾಗಿಸುತ್ತದೆ ಎಂದು ಅಧ್ಯಯನದ ಸಹ ಲೇಖಕರಾದ ಓಹಿಯಾ ಸ್ಟೇಟ್​ನ​ ಸೋಷಿಯಲ್​ ವರ್ಕ್​ ವಿಭಾಗದ ಅಸಿಸ್ಟೆಂಟ್​ ಪ್ರೊ ಸ್ಮಿತಾ ರಾವ್​ ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಸಂಶೋಧಕರು 1990ರಿಂದ 2022ರ ವರೆಗೆ ಪ್ರಕಟವಾದ 20 ಅಧ್ಯಯನಗಳನ್ನು ಪರಿಶೀಲನೆ ನಡೆಸಿದ್ದಾರೆ. ತೀವ್ರ ಹವಾಮಾನಗಳು ಬಾಲ್ಯವಿವಾಹದೊಂದಿಗೆ ಸಂಬಂಧ ಹೊಂದಿದೆ. ಅದರಲ್ಲೂ 18 ವರ್ಷಕ್ಕಿಂತ ಕಡಿಮೆ ಯುವತಿಯರಲ್ಲಿ ಎಂದಿದ್ದಾರೆ. ಬಹುತೇಕ ಅಧ್ಯಯನಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶವಾದ ಏಷ್ಯಾ, ಆಫ್ರಿಕಾ ಸೇರಿದಂತೆ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಕೀನ್ಯಾ, ನೇಪಾಳ್​ ಮತ್ತು ವಿಯೆಟ್ನಾಂನಲ್ಲಿ ನಡೆಸಲಾಗಿದೆ.

ಬರ ಮತ್ತು ಪ್ರವಾಹ ಸಾಮಾನ್ಯ ದುರಂತಗಳಾಗಿದೆ. ಆದರೆ ಇತರೆ ಅಧ್ಯಯನಗಳು ಸೈಕ್ಲೋನ್​ ಮತ್ತು ಅಧಿಕ ತಾಪಮಾನದ ಆಘಾತ ಸೆರಿದಂತೆ ಇತರೆ ಹವಾಮಾನ ಘಟನೆ ಹೊಂದಿದೆ.

ಆರ್ಥಿಕತೆ ಪ್ರಮುಖ ಕಾರಣ..ಕುಟುಂಬಗಳು ಎದುರಿಸುವ ಆರ್ಥಿಕ ದುರ್ಬಲತೆ ಮತ್ತು ಆಹಾರ ಅಸುರಕ್ಷತೆ ತಗ್ಗಿಸಲು ಬಾಲ್ಯ ವಿವಾಹ ತಂತ್ರವಾಗಿದೆ. ಅನೇಕ ಬಾರಿ ಬಾಲ್ಯ ವಿವಾಹಗಳು ಕುಟುಂಬಕ್ಕೆ ಕೆಲಸಗಾರರ ಅಗತ್ಯತೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಡೊಹರ್ಟಿ ವಿವರಿಸಿದ್ದಾರೆ.

ಪ್ರವಾಹ, ಸೈಕ್ಲೋನ್​ ಮತ್ತು ಇತರೆ ವಿಪತ್ತುಗಳಿಂದ ನಿರಾಶ್ರಿತರ ತಾಣದಲ್ಲಿ ಚಿಕ್ಕ ಹೆಣ್ಣುಮಕ್ಕಳು ಲೈಂಗಿಕ ಕಿರುಕುಳ ಮತ್ತು ಹಿಂಸೆಗೆ ಗುರಿಯಾಗುತ್ತಾರೆ. ಕುಟುಂಬಗಳು ಕೆಲವೊಮ್ಮ ತಮ್ಮ ಹೆಣ್ಣುಮಕ್ಕಳನ್ನು ಇಂತಹ ಪರಿಸ್ಥಿತಿಗಳಿಂದ ರಕ್ಷಿಸಲು ಬಾಲ್ಯ ವಿವಾಹದ ಮೊರೆ ಹೋಗುತ್ತಾರೆ. ತಮ್ಮ ಮಕ್ಕಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಬಲವಂತದ ಮದುವೆ ಮಾಡಲಾಗುವುದು ಎಂದು ಸ್ಮೀತಾ ರಾವ್​ ತಿಳಿಸಿದರು.

ಬಾಲ್ಯ ವಿವಾಹದಿಂದ ಹುಡುಗಿಯರನ್ನು ರಕ್ಷಣೆ ಮಾಡುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಮತ್ತೊಂದು ಆಯ್ಕೆ ಎಂದರೆ ಬಾಲ್ಯ ವಿವಾಹದ ವಿರುದ್ಧ ಕಾನೂನು ಆಗಿದೆ ಎಂದು ಡೊಹರ್ಟಿ ತಿಳಿಸಿದ್ದಾರೆ. ಶಿಕ್ಷಣ ಮತ್ತು ಆರ್ಥಿಕ ನಿಯಂತ್ರಣದೊಂದಿಗೆ ಸಬಲೀಕರಣಗೊಳಿಸುವ ಮೂಲಕ ಇದರ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಈ ಎಲ್ಲಾ ಅಧ್ಯಯನಗಳನ್ನು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಹೆಚ್ಚು ನಡೆಸಲಾಗಿದೆ. ಹೆಚ್ಚಿನ ಆದಾಯದ ದೇಶದಲ್ಲಿ ಯಾವುದೇ ಅಧ್ಯಯನ ವರದಿ ಪತ್ತೆಯಾಗಿಲ್ಲ. ವಿಪರೀತ ಹವಾಮಾನ ಘಟನೆಗಳು ಹೆಚ್ಚಿ ಆದಾಯ ಸೇರಿದಂತೆ ಪ್ರಪಂಚದ ಇತರೆ ಭಾಗದಲ್ಲಿ ಸಂಬಂಧವನ್ನು ಹೊಂದಿದೆ. ಅಲ್ಲದೇ, ಈ ಹವಾಮಾನದಲ್ಲಿನ ಪರಿಣಾಮಗಳ ವ್ಯತ್ಯಾಸ ಮತ್ತು ಹೆಚ್ಚುವರಿ ಅಂಶವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಅಧ್ಯಯನ ವರದಿ ತಿಳಿಸಿದೆ. (ಎಎನ್​ಐ)

ಇದನ್ನೂ ಓದಿ: Air pollution: ಭಾರತೀಯರ ಜೀವಿತಾವಧಿಯನ್ನು 5 ವರ್ಷ ಕಡಿಮೆ ಮಾಡಿದೆ ವಾಯುಮಾಲಿನ್ಯ; ಅಧ್ಯಯನ

ABOUT THE AUTHOR

...view details