ಕರ್ನಾಟಕ

karnataka

ಒಳಚರಂಡಿ ಅವ್ಯವಸ್ಥೆ ವಿರುದ್ಧ ಜನತೆಗೆ ಕೊನೆಯ ಎಚ್ಚರಿಕೆ ನೀಡಿದ ಪಾಲಿಕೆ ಪೌರಾಯುಕ್ತೆ

By

Published : Jul 24, 2020, 7:19 PM IST

ತಾಲೂಕಿನ ಹಲವೆಡೆ ಒಳಚರಂಡಿ ಪಾಯಿಂಟ್​​ಗಳು ಓವರ್ ಫ್ಲೋ ಆಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆ ಮನೆಯ ತ್ಯಾಜ್ಯ ಹಾಗೂ ಹಳೆಯ ಬಟ್ಟೆ, ನ್ಯಾಪ್​​ಕಿನ್​​​​ಗಳನ್ನು ಪೈಪ್​​​ ಮೂಲಕ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತೆ ಎಚ್ಚರಿಸಿದ್ದಾರೆ.

The last warning to the people against the drainage mess from the mayor of Hospete
ಒಳಚರಂಡಿ ಅವ್ಯವಸ್ಥೆ ವಿರುದ್ಧ ಜನತೆಗೆ ಕೊನೆಯ ಎಚ್ಚರಿಕೆ ನೀಡಿದ ಪಾಲಿಕೆ ಪೌರಾಯುಕ್ತೆ

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದ ಮುಖ್ಯರಸ್ತೆ ಹಾಗೂ ಉಪರಸ್ತೆಗಳ ಒಳಚರಂಡಿ (ಯುಜಿಡಿ)‌ ಓವರ್ ಪ್ಲೋ ಆಗಲು ಸ್ಯಾನಿಟರಿ ನ್ಯಾಪ್​ಕಿನ್, ನಿರುಪಯುಕ್ತ ಬಟ್ಟೆಗಳನ್ನು ಶೌಚಗೃಹ ಮತ್ತು ಸ್ನಾನಗೃಹದ ಪೈಪ್ ಮೂಲಕ ಬಿಸಾಡುವುದೇ ಬಹುಮುಖ್ಯ ಕಾರಣವಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ‌ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಹೊಸಪೇಟೆ ನಗರಸಭೆ ಪೌರಾಯುಕ್ತೆ ಜಯಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಳಚರಂಡಿ ಅವ್ಯವಸ್ಥೆ ವಿರುದ್ಧ ಜನತೆಗೆ ಕೊನೆಯ ಎಚ್ಚರಿಕೆ ನೀಡಿದ ಪಾಲಿಕೆ ಪೌರಾಯುಕ್ತೆ

ಇನ್ಮುಂದೆ ಮುಖ್ಯರಸ್ತೆ ಹಾಗೂ ಉಪರಸ್ತೆಗಳಲ್ಲಿನ ಯುಜಿಡಿ ಪಾಯಿಂಟ್​​​​ಗಳು ಓವರ್ ಫ್ಲೋ ಆಗಿದ್ದು ಕಂಡುಬಂದರೆ ಯಾವ ಮನೆಯಿಂದ ಈ ನಿರುಪಯುಕ್ತ ಬಟ್ಟೆ ಹಾಗೂ ಸ್ಯಾನಿಟರಿ‌ ನ್ಯಾಪ್​ಕಿನ್​​ಗಳು ಬಂದಿವೆ ಎಂಬುದನ್ನು ಪತ್ತೆಹಚ್ಚಿ ಅದನ್ನು ವಿಡಿಯೋ ಮಾಡಿ ಅಂಥಹ ಮನೆಗಳ ಮಾಲೀಕರ ವಿರುದ್ಧ ಕಾನೂನು ‌ರಿತ್ಯಾ ಕ್ರಮ ಜರುಗಿಸಲಾಗುವುದು ಎಂದರು.‌

ಇದಲ್ಲದೆ ಅಂತಹ ಮನೆ ಮಾಲೀಕರಿಂದ ನಿಗದಿತ ದಂಡ ಶುಲ್ಕ ವಸೂಲಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ಹೊಸಪೇಟೆ ನಗರದ ನೆಹರು ಕಾಲೊನಿ, ಎಂ.ಜಿ. ನಗರ, ಜೆಪಿ ನಗರ, ಕೌಲ್ ಪೇಟೆ, ಚಿತ್ತವಾಡ್ಗಿ, ವಿಜಯನಗರ ಕಾಲೇಜಿನ ಬಾಲಕಿಯರ ವಸತಿ ನಿಲಯ ಭಾಗದಲ್ಲಿಯೇ ಇಂತಹ ಘಟನೆಗಳು ಹೆಚ್ಚಾಗಿವೆ ಎಂದು ಎಚ್ಚರಿಸಿದ್ದಾರೆ.

ಯುಜಿಡಿ ಪಾಯಿಂಟ್ ಓವರ್ ಫ್ಲೋನಿಂದಾಗಿ ಹೊಸಪೇಟೆ ನಗರದ ಪರಿಸರ ಹಾಳಾಗುತ್ತಿದೆ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ.‌ ಇದು ನನ್ನ ಕೊನೆಯ ಮನವಿಯಾಗಿದೆ. ಸಾರ್ವಜನಿಕರು ಹೊಸಪೇಟೆ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಪೌರಾಯುಕ್ತೆ ‌ಜಯಲಕ್ಷ್ಮಿ ಕೋರಿದ್ದಾರೆ.

ABOUT THE AUTHOR

...view details