ಕರ್ನಾಟಕ

karnataka

ಭ್ರಷ್ಟಾಚಾರ ಆರೋಪ ಹೂತ್ತ ಅಶ್ವತ್ಥ ನಾರಾಯಣ್, ಆರಗ ಜ್ಞಾನೇಂದ್ರ ತಕ್ಷಣ ರಾಜೀನಾಮೆ ನೀಡಬೇಕು: ಧ್ರುವ ನಾರಾಯಣ್

By

Published : May 6, 2022, 4:34 PM IST

ಭ್ರಷ್ಟಚಾರದ ಆರೋಪ ಹೂತ್ತ ಅಶ್ವತ್ಥ​ ನಾರಾಯಣ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ತಕ್ಷಣ ರಾಜೀನಾಮೆ ನೀಡಬೇಕು ಎಂದು ಧ್ರುವ ನಾರಾಯಣ್ ಆಗ್ರಹಿಸಿದ್ದಾರೆ.

Araga Jnanendra should resign immediately, Ashwath Narayan should resign immediately, Congress working president Dhruva Narayan news, Shivamogga news, ಆರಗ ಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡಬೇಕು, ಅಶ್ವಥ್ ನಾರಾಯಣ ಕೂಡಲೇ ರಾಜೀನಾಮೆ ನೀಡಬೇಕು, ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಸುದ್ದಿ, ಶಿವಮೊಗ್ಗ ಸುದ್ದಿ,
ಧ್ರುವ ನಾರಾಯಣ್ ಹೇಳಿಕೆ

ಶಿವಮೊಗ್ಗ:ಪಿಎಸ್ಐ ನೇಮಕಾತಿ ಪರೀಕ್ಷೆ ಹಾಗೂ ಸಹಾಯಕ ಪ್ರಾಧ್ಯಾಪಕಕರ ಹುದ್ದೆ ನೇಮಕದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ​ ನಾರಾಯಣ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಶಿವಮೊಗ್ಗದಲ್ಲಿ ಆಗ್ರಹಿಸಿದ್ದಾರೆ.

ಧ್ರುವ ನಾರಾಯಣ್ ಹೇಳಿಕೆ

ಪಿಎಸ್ಐ ನೇಮಕಾತಿ ಅಕ್ರಮದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಇದು ಸರ್ಕಾರ ಕೆಳಗೆ ಇರುವ ಅಧೀನ ಸಂಸ್ಥೆಯಾಗಿದೆ. ಇವರು ತಳಮಟ್ಟದ ಅಧಿಕಾರಿಗಳನ್ನು ಬಂಧಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರೆತು ಹಗರಣದ ಹಿಂದಿರುವ ದೊಡ್ಡವರನ್ನು ವಿಚಾರಣೆಗೆ ಒಳಪಡಿಸುತ್ತಿಲ್ಲ. ಇದರಿಂದ ರಾಜ್ಯ ಕಾಂಗ್ರೆಸ್ ಪಕ್ಷ ಪಿಎಸ್ಐ ಹಗರಣವನ್ನು ಹೈಕೋರ್ಟ್​ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ರಾಜ್ಯ ಸರ್ಕಾರ ತಕ್ಷಣ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.

ಓದಿ:ಪಿಎಸ್​ಐ ನೇಮಕಾತಿ ಹಗರಣ: ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿಗಳು

ಈ ಪ್ರಕರಣದಲ್ಲಿ ಡಿವೈಎಸ್ಪಿ, ಸರ್ಕಲ್ ಇನ್ಸ್​​​​ಪೆಕ್ಟರ್​ಗಳ ಬಂಧನವಾಗಿದೆ. ಇಲ್ಲಿ ದೊಡ್ಡಮಟ್ಟದ ನಾಯಕರುಗಳು ಶಾಮೀಲಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದಲೇ 73 ಜನ ಪಿಎಸ್ಐಗಳಾಗಿ ನೇಮಕವಾಗಿದ್ದಾರೆ. ಅದೇ ರೀತಿ, ಅಫಜಲ್​ಪುರದಲ್ಲಿ 23 ಜನ ನೇಮಕವಾಗಿದ್ದಾರೆ.‌ ಪಿಎಸ್ಐ ಪರೀಕ್ಷೆ ನಡೆಯುವಾಗ ಯಾರು ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಅವರ ಪೋನ್ ಮಾತುಕತೆಯನ್ನು ಸಮಗ್ರವಾಗಿ ತನಿಖೆ ನಡೆಸಿದರೆ ಸತ್ಯ ಹೊರ ಬರುತ್ತದೆ ಎಂದರು.

ಪಿಎಸ್ಐ ಹಗರಣದಲ್ಲಿ ಶಿವಮೊಗ್ಗದವರು ಭಾಗಿಯಾಗಿದ್ದಾರೆ. ಫೋನ್​​ ಸಂಭಾಷಣೆ ಆಲಿಸಿದರೆ ಮಾತ್ರ ಸತ್ಯ ಹೊರಬರುತ್ತದೆ. ಈಗಾಗಲೇ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಅಕ್ರಮದಲ್ಲಿ ಧಾರವಾಡ ವಿವಿಯ ನಾಗರಾಜ್ ಅವ​ರನ್ನು ಬಂಧಿಸಲಾಗಿದೆ. ಇದರಿಂದ ಇದನ್ನು ಸಹ ತನಿಖೆ ನಡೆಸಬೇಕು. ಗೃಹ ಸಚಿವ ಆರಗ ಜ್ಞಾನೇಂದ್ರ ಒಳ್ಳೆಯವರು ಇರಬಹುದು. ಆದರೆ ಇಲಾಖೆ ನಿರ್ವಹಣೆಯಲ್ಲಿ ಅಸಮರ್ಥಯಾಗಿದ್ದಾರೆ ಎಂದರು.

ABOUT THE AUTHOR

...view details