ಕರ್ನಾಟಕ

karnataka

ಪತ್ನಿಯನ್ನು ತುಂಡರಿಸಿ ಮುಂಡವನ್ನು ಸುಡಲು ಯತ್ನಿಸಿದ ಪತಿ.. ರುಂಡ, ಕೈಗಳನ್ನು ಪತ್ತೆ ಹಚ್ಚಿದ ಪೊಲೀಸರು!

By

Published : Apr 28, 2023, 11:04 AM IST

ಗುರುಗ್ರಾಮದಲ್ಲಿ ಪತ್ನಿಯ ದೇಹವನ್ನು ತುಂಡರಿಸಿ ಕೊಂದ ಪತಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Gurugram Husband arrested  Gurugram Husband arrested for killing wife  wife chopping her body into pieces  ಪತ್ನಿಯ ದೇಹವನ್ನು ತುಂಡರಿಸಿ ಕೊಂದ ಪತಿ  ಪತಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ  ಪತ್ನಿಯನ್ನು ತುಂಡರಿಸಿ ಮುಂಡವನ್ನು ಸುಡಲು ಯತ್ನಿಸಿದ ಪತಿ  ಕೈಗಳನ್ನು ಪತ್ತೆ ಹಚ್ಚಿದ ಪೊಲೀಸರು  ಹರಿಯಾಣದ ಗಡಿ ಪ್ರದೇಶ ಗುರುಗ್ರಾಮ  ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಲ್ಕರ್​ ಹತ್ಯೆ  ಮಹಿಳೆಯ ಅರ್ಧ ಸುಟ್ಟ ಮುಂಡ ಪತ್ತೆ  ಗುರುಗ್ರಾಮ್ ಪೊಲೀಸ್ ಆಯುಕ್ತ ಕಲಾ ರಾಮಚಂದ್ರನ್  ಜಿತೇಂದರ್ ಗಾಂಧಿನಗರದ ನಿವಾಸಿ
ರುಂಡ, ಕೈಗಳನ್ನು ಪತ್ತೆ ಹಚ್ಚಿದ ಪೊಲೀಸರು!

ಗುರುಗ್ರಾಮ, ಹರಿಯಾಣ:ದೆಹಲಿಯ ಹೊರವಲಯ, ಹರಿಯಾಣದ ಗಡಿ ಪ್ರದೇಶ ಗುರುಗ್ರಾಮದಲ್ಲಿ ಜನರನ್ನು ಭಯಗೊಳಿಸುವ ಕೊಲೆಯೊಂದು ಬೆಳಕಿಗೆ ಬಂದಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಲ್ಕರ್​ ಹತ್ಯೆ ರೀತಿಯಲ್ಲೇ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪತ್ನಿಯನ್ನು ಕೊಂದು ಶವವನ್ನು ಕತ್ತರಿಸಿ ಮತ್ತು ದೇಹದ ಭಾಗಗಳನ್ನು ಬೇರೆಡೆ ಎಸೆದ ಆರೋಪದ ಮೇಲೆ 34 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 21 ರಂದು ಮಾನೇಸರ್‌ನ ಹಳ್ಳಿಯೊಂದರಲ್ಲಿ ಮಹಿಳೆಯ ಅರ್ಧ ಸುಟ್ಟ ಮುಂಡ ಪತ್ತೆಯಾಗಿದ್ದು, ಆಕೆಯನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ಸುಡಲು ಯತ್ನಿಸಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಆದ್ರೆ ಮಹಿಳೆಯ ತಲೆ ಮತ್ತು ಕೈಗಳು ಕಾಣೆಯಾಗಿರುವುದನ್ನು ಪೊಲೀಸರು ಗಮನಿಸಿದ್ದರು. ನಂತರ ಪೊಲೀಸರು ಆಕೆಯ ಕೈ ಮತ್ತು ತಲೆಯನ್ನು ಸಹ ಪತ್ತೆ ಮಾಡಿದ್ದರು.

ಪೊಲೀಸರು ಮೃತ ಮಹಿಳೆಯ ಪತಿ ಮೇಲೆ ಅನುಮಾನ ವ್ಯಕ್ತಪಡಿಸಿ ವಶಕ್ಕೆ ಪಡೆಯಲಾಗಿದ್ದು, ಆರೋಪಿ ಪತಿ ಜಿತೇಂದರ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯ ವಿಚಾರಣೆ ಬಳಿಕ ಶುಕ್ರವಾರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಗುರುಗ್ರಾಮ್ ಪೊಲೀಸ್ ಆಯುಕ್ತ ಕಲಾ ರಾಮಚಂದ್ರನ್ ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಪ್ರಕಾರ, ಜಿತೇಂದರ್ ಗಾಂಧಿನಗರದ ನಿವಾಸಿಯಾಗಿದ್ದು, ಮನೇಸರ್ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಕುಕ್ಡೋಲಾ ಗ್ರಾಮದ ಉಮೇದ್ ಸಿಂಗ್ ಎಂಬುವರು ಗುತ್ತಿಗೆ ಪಡೆದ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಎರಡು ಕೊಠಡಿಗಳಲ್ಲಿ ಒಂದರಿಂದ ಮಹಿಳೆಯ ಶವ ಪತ್ತೆಯಾಗಿದೆ. ಉಮೇದ್ ಸಿಂಗ್ ಅವರು ಪಚಗಾಂವ್ ಚೌಕ್‌ನಿಂದ ಕಸನ್ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಎಂಟು ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದರು.

ನನ್ನ ನೆರೆಹೊರೆಯವರು ನನಗೆ ಕರೆ ಮಾಡಿ, ನನ್ನ ಜಮೀನಿನ ಕೊಠಡಿಯೊಂದರಿಂದ ಸ್ವಲ್ಪ ಹೊಗೆ ಬರುತ್ತಿರುವುದನ್ನು ಗಮನಿಸಿ ಮಾಹಿತಿ ತಿಳಿಸಿದ್ದರು. ನಾನು ಜಮೀನಿಗೆ ಹೋದಾಗ, ಕೋಣೆಯಲ್ಲಿ ಅರ್ಧ ಸುಟ್ಟ ಮುಂಡವನ್ನು ಕಂಡು ಬೆಚ್ಚಿಬಿದ್ದೇನು. ಆ ಕೂಡಲೇ ನಾನು ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ದೂರಿನಲ್ಲಿ ಉಮೇದ್ ಸಿಂಗ್ ಉಲ್ಲೇಖಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಈ ದೇಹವು 30 ವರ್ಷದ ಮಹಿಳೆಗೆ ಸೇರಿದ್ದು ಎಂದು ತೀರ್ಮಾನಿಸಿದರು. ಅವರು ಭಾನುವಾರ ಮಹಿಳೆಯ ಕತ್ತರಿಸಿದ ಎರಡೂ ಕೈಗಳನ್ನು ಮತ್ತು ಬುಧವಾರ ಸಂಜೆ ಮಹಿಳೆಯ ತಲೆಯನ್ನು ಖೇರ್ಕಿ ದೌಲಾ ಪ್ರದೇಶದಿಂದ ಪತ್ತೆ ಮಾಡಿದ್ದರು.

ಉಮೇದ್ ಸಿಂಗ್ ಅವರ ದೂರಿನ ಮೇರೆಗೆ ಮಾನೇಸರ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯಗಳನ್ನು ನಾಶಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ತನ್ನ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆ ಕುರಿತು ಮಾನೇಸರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

ಓದಿ:ಶ್ರದ್ಧಾ ರೀತಿಯ ಮತ್ತೊಂದು ಕೇಸ್​ ಬಯಲು.. ಪತಿಯ ದೇಹವನ್ನು 22 ತುಂಡುಗಳಾಗಿ ಕತ್ತರಿಸಿದ ಪತ್ನಿ: ಇಬ್ಬರ ಬಂಧನ

ABOUT THE AUTHOR

...view details