ಯುಬಿಟಿ ನಾಯಕಿ ಸುಷ್ಮಾ ಅಂಧಾರೆಯನ್ನು ಕರೆದುಕೊಂಡು ಹೋಗಲು ಬಂದಿದ್ದ ಹೆಲಿಕಾಪ್ಟರ್​ ಪತನ - WATCH - Helicopter Crash

By ETV Bharat Karnataka Team

Published : May 3, 2024, 1:30 PM IST

Updated : May 3, 2024, 2:10 PM IST

thumbnail
ಹೆಲಿಕಾಪ್ಟರ್​ ಪತನ(ETV Bharat Maharashtra)

ರಾಯಗಢ(ಮಹಾರಾಷ್ಟ್ರ): ಯುಬಿಟಿ(ಶಿವಸೇನಾ) ನಾಯಕಿ ಸುಷ್ಮಾ ಅಂಧಾರೆಯನ್ನು ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಬಂದಿದ್ದ ಹೆಲಿಕಾಪ್ಟರ್ ಮಹಾದ್‌ನಲ್ಲಿ ಲ್ಯಾಂಡ್​ ಆಗುವ ವೇಳೆ ಪತನಗೊಂಡಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ಎದೆ ಝಲ್​ ಎನಿಸುವಂತಿದೆ. ಘಟನೆಯಲ್ಲಿ ಪೈಲಟ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ​ ಸುರಕ್ಷಿತನಾಗಿದ್ದಾನೆ. ಅದೃಷ್ಟವಶಾತ್​ ಸುಶಾಮಾ ಅಂಧಾರೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಹೆಲಿಕಾಪ್ಟರ್ ರೋಟರ್ ಬ್ಲೇಡ್‌ಗಳು ಹಾನಿಗೊಳಗಾಗಿವೆ. 

ಇಂದು ಬೆಳಗ್ಗೆ 9:30 ರ ಹೊತ್ತಿಗೆ ಮಹಾದ್​ ಪ್ರದೇಶದಲ್ಲಿ ಲ್ಯಾಂಡಿಂಗ್ ಮಾಡುವಾಗ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆ ಕಂಡಿದೆ. ಇದರಿಂದ ಹೆಲಿಕಾಪ್ಟರ್​ ನಿಯಂತ್ರಣ ತಪ್ಪಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. 

ಶಿವಸೇನಾ ಉದ್ಧವ್ ಠಾಕ್ರೆ ಗುಂಪಿನ ನಾಯಕಿ ಸುಷ್ಮಾ ಅಂಧಾರೆ ಅವರು ಗುರುವಾರ ಮಹಾದ್‌ನಲ್ಲಿ ರ‍್ಯಾಲಿ ನಡೆಸಿದರು. ಬಳಿಕ ಮುಂದಿನ ರ‍್ಯಾಲಿಗೆ ಬಾರಾಮತಿಗೆ ಹೋಗಬೇಕಿತ್ತು. ಇವರನ್ನು ಪಿಕ್​ಪ್​ ಮಾಡಲು ಹೆಲಿಕಾಪ್ಟರ್​ ಬರಬೇಕಿತ್ತು. ಸರಿಯಾದ ಸಮಯಕ್ಕೆ ಹೆಲಿಕಾಪ್ಟರ್ ಬರದ ಕಾರಣ ಕಾರ್ಡಿನೇಟರ್​ಗೆ ಕರೆ ಮಾಡಿದಾಗ ಹೆಲಿಕಾಪ್ಟರ್ ಬಗ್ಗೆ ಮಾಹಿತಿ ನೀಡಿ ಶೀಘ್ರದಲ್ಲೇ ಬರಲಿದೆ ಎಂದಿದ್ದಾರೆ. ಆದರೆ ನಂತರ ಬಂದ ಹೆಲಿಕಾಪ್ಟರ್ ಎರಡು ಸುತ್ತುಗಳನ್ನು ಹಾಕಿ ಭೂಸ್ಪರ್ಶಿಸುವಾಗ ಒಂದೇ ಸಲಕ್ಕೆ ಧೂಳು ಎದ್ದಿದ್ದು ದೊಡ್ಡ ಶಬ್ದವಾಗಿದೆ. ಒಮ್ಮೆಗೆ ಏನಾಯಿತು ಎಂಬುದೇ ತಿಳಿಯಲಿಲ್ಲ. ಈ ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ ಎಂದು ಸುಷ್ಮಾ ಅಂಧಾರೆ ಹೇಳಿದ್ದಾರೆ.

ಇದನ್ನೂ ಓದಿ: ಕಂದಕಕ್ಕೆ ಬಸ್​ ಉರುಳಿ 20 ಪ್ರಯಾಣಿಕರ ಸಾವು: 15 ಮಂದಿಗೆ ಗಂಭೀರ ಗಾಯ - 20 people died

Last Updated : May 3, 2024, 2:10 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.