ಮಂಗಳೂರು: ವಿದ್ಯಾರ್ಥಿ ಮೇಲೆ ಹರಿದ ಶಾಲಾ ಬಸ್, ಬಾಲಕ ಪವಾಡಸದೃಶ ಪಾರು - VIDEO

By ETV Bharat Karnataka Team

Published : Feb 24, 2024, 6:29 PM IST

thumbnail

ಮಂಗಳೂರು: ಸ್ಕೂಲ್ ಬಸ್​ ಡಿಕ್ಕಿ ಹೊಡೆದು, ಮೇಲೆ ಹರಿದರೂ ಶಾಲಾ ವಿದ್ಯಾರ್ಥಿಯೋರ್ವ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿದ್ಯಾರ್ಥಿಗೆ ಸಣ್ಣ ಪುಟ್ಟ ಗಾಯವಾಗಿದೆ. ಮಂಗಳೂರಿನ ಹೊರವಲಯದ ಕುಳಾಯಿಯಲ್ಲಿ ಈ ಘಟನೆ ನಡೆದಿದೆ.

ಚಾಲನೆಯಲ್ಲಿದ್ದ ಸ್ಕೂಲ್ ಬಸ್ ಅಡಿಗೆ ವಿದ್ಯಾರ್ಥಿಯೊಬ್ಬನು ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶವೆಂಬಂತೆ ಪಾರಾಗಿರುವ ಘಟನೆ ಮಂಗಳೂರಿನ ಹೊರವಲಯದ ಕುಳಾಯಿಯಲ್ಲಿ ನಡೆದಿದೆ.

ಸುರತ್ಕಲ್​​ನ‌ ಆಂಗ್ಲ‌ ಮಾಧ್ಯಮ ಶಾಲೆಯ ಈ ವಿದ್ಯಾರ್ಥಿ ಸ್ಕೂಲ್ ಬಸ್ಸಿನಲ್ಲಿ ಆಗಮಿಸಿ ಮನೆ ಸಮೀಪದಲ್ಲಿ ಇಳಿದಿದ್ದಾನೆ. ಬಳಿಕ ಬಸ್ ಹೊರಡುತ್ತಿದ್ದಾಗಲೇ ಅದೇ ಬಸ್ ಮುಂಭಾಗದಲ್ಲೇ ಏಕಾಏಕಿ ದಾಟಿ ಮನೆಯತ್ತ ಹೋಗಲು ಯತ್ನಿಸಿದ್ದಾನೆ. ಈ ವೇಳೆ ವಿದ್ಯಾರ್ಥಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ಬಸ್​ನಡಿ ಬಿದ್ದಿದ್ದಾನೆ. 

ಇದನ್ನು ಗಮನಿಸಿದ ಅಲ್ಲೇ ಇದ್ದ ಮತ್ತೋರ್ವ ವಿದ್ಯಾರ್ಥಿ ಹಾಗೂ ಮಹಿಳೆ ಚೀರಾಡಿದ್ದಾರೆ. ಆಗ ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದಾನೆ. ಪರಿಣಾಮ ಬಾಲಕ ಬಸ್ ನಡಿಗೆ ಬಿದ್ದರೂ ಪವಾಡ ಸದೃಶವೆಂಬಂತೆ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಸ್ಕೂಲ್ ಬಸ್​​ನಲ್ಲಿ ನಿರ್ವಾಹಕ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಚಾಲಕನ ವಿರುದ್ಧ ಸುರತ್ಕಲ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಣ ಭೀಕರ ದುರಂತ: ಗಂಗಾ ಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ, 7 ಮಕ್ಕಳು ಸೇರಿ 15 ಜನರ ಸಾವು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.