ETV Bharat / state

ನನ್ನ ವಿರುದ್ಧ ವ್ಯವಸ್ಥಿತವಾಗಿ ಗೋಬ್ಯಾಕ್​ ಅಭಿಯಾನ ಮಾಡಿಸುತ್ತಿದ್ದಾರೆ: ಶೋಭಾ ಕರಂದ್ಲಾಜೆ

author img

By ETV Bharat Karnataka Team

Published : Feb 26, 2024, 6:10 PM IST

shobha-karandlaje
ಶೋಭಾ ಕರಂದ್ಲಾಜೆ

ತಮ್ಮ ವಿರುದ್ಧದ 'ಗೋಬ್ಯಾಕ್'​ ಅಭಿಯಾನದ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

ಚಿಕ್ಕಮಗಳೂರು: ಯಾರೋ ಬೇಕಂತಲೇ ವ್ಯವಸ್ಥಿತವಾಗಿ ದುಡ್ಡಿನ ಮದ, ಅಹಂಕಾರದಿಂದ ಗೋಬ್ಯಾಕ್ ಅಭಿಯಾನ ಮಾಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 'ಗೋಬ್ಯಾಕ್ ಶೋಭಕ್ಕ' ಪತ್ರ ಅಭಿಯಾನಕ್ಕೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ಕಳೆದ ಚುನಾವಣೆಯಲ್ಲಿಯೂ ಕೂಡ ಇದೇ ರೀತಿಯ​ ಅಭಿಯಾನ ಮಾಡಿದ್ದರು. ಇದೀಗ ಈ ಬಾರಿಯ ಚುನಾವಣೆಯಲ್ಲೂ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ನಾಯಕರು ಉತ್ತರ ನೀಡುತ್ತಾರೆ. ಹೈಕಮಾಂಡ್​ ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು.

ಗೋಬ್ಯಾಕ್​ ಪತ್ರ ಯಾರು ಬರೆದರು, ಎಲ್ಲೆಲ್ಲಿ ಇದನ್ನು ಪೋಸ್ಟ್​ ಮಾಡಿದ್ದಾರೆ ಎಂಬುದರ ಬಗ್ಗೆ ಹೈಕಮಾಂಡ್​ ವರದಿ ತರಿಸಿಕೊಂಡಿದೆ. ಚುನಾವಣೆಯ ಸಮಯದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿರುವವರ ವಿರುದ್ಧ ಈ ರೀತಿ ಆರೋಪ ಕೇಳಿ ಬಂದಾಗ ಸಹಜವಾಗಿಯೇ ಹೈಕಮಾಂಡ್​ ವರದಿ ತರಿಸಿ ಪರಿಶೀಲನೆ ನಡೆಸುತ್ತದೆ. ಈ ವರದಿಯಲ್ಲಿ ಸತ್ಯ ಏನೆಂಬುದು ಅವರಿಗೆ ತಿಳಿಯುತ್ತದೆ ಎಂದರು.

ಆಪರೇಷನ್​ ಕಮಲ ಕುರಿತು ಸಚಿವ ಎಂ.ಬಿ.ಪಾಟೀಲ್​ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯ ಕಾಂಗ್ರೆಸ್​ನಲ್ಲಿ ಏನಾಗುತ್ತಿದೆ ಎಂದು ಅವರಿಗೆ ಗೊತ್ತಿದೆ. ಅಲ್ಲದೇ ತಮ್ಮ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರೇ ಬಿಜೆಪಿ ಶಾಸಕರಿಗೆ ಕೈ ಹಾಕಿದ್ದಾರೆ. ಮತ್ತೊಂದೆಡೆ ಸಿಎಂ ಮತ್ತು ಡಿಸಿಎಂ ಮಧ್ಯೆ ಏನು ನಡೆಯುತ್ತಿದೆ ಎಂಬುದೂ ತಿಳಿದಿದೆ. ಲೋಕಸಭೆ ಚುನಾವಣೆಯ ಬಳಿಕ ಈ ಎಲ್ಲಾ ಸಂಗತಿ ಹೊರಬರಲಿವೆ ಎಂದು ತಿಳಿಸಿದರು.

ಇದನ್ನೂ ಓದಿ: ನಮಗೆ ನಿರೀಕ್ಷೆಗಿಂತ ಜಾಸ್ತಿ ಮತಗಳು ಬರುತ್ತವೆ, ಯಾವುದೇ ಭಯ ಇಲ್ಲ: ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.