ETV Bharat / bharat

ಎಸ್‌ಟಿ ಬಸ್​ - ಟ್ರಕ್‌ ಮಧ್ಯೆ ಭೀಕರ ಅಪಘಾತ; 8 ಪ್ರಯಾಣಿಕರು ಸ್ಥಳದಲ್ಲೇ ಸಾವು, 22 ಮಂದಿಗೆ ಗಾಯ - ROAD ACCIDENT

author img

By ETV Bharat Karnataka Team

Published : Apr 30, 2024, 12:12 PM IST

MUMBAI AGRA HIGHWAY  ST BUS TRUCK ACCIDENT  RAHUD GHAT  CHANDWAD ACCIDENT
ಎಸ್‌ಟಿ ಟ್ರಕ್‌ ಅಪಘಾತ; 8 ಪ್ರಯಾಣಿಕರು ಸ್ಥಳದಲ್ಲೇ ಸಾವು, 22 ಮಂದಿಗೆ ಗಾಯ

ಮುಂಬೈ-ಆಗ್ರಾ ಹೆದ್ದಾರಿಯ ಚಂದವಾಡದ ರಾಹುದ್ ಬಳಿ ಎಸ್‌ಟಿ-ಟ್ರಕ್‌ನ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 8 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

ನಾಸಿಕ್ (ಮಹಾರಾಷ್ಟ್ರ): ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಚಂದವಾಡದ ರಾಹುದ್ ಘಾಟ್‌ನಲ್ಲಿ ಎಸ್‌ಟಿ ಬಸ್​ ಮತ್ತು ಟ್ರಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸುಮಾರು 8 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಹೊರಬಿದ್ದಿದೆ.

ಗಾಯಾಳುಗಳನ್ನು ಚಂದವಾಡದ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತದಿಂದಾಗಿ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಅಪಘಾತದ ರಭಸಕ್ಕೆ ಎಸ್​ಟಿ ಬಸ್​ ಟ್ರಕ್​ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಅಪಘಾತ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ರಾಹುದ್ ಘಾಟ್​ನಲ್ಲಿ ನಿತ್ಯ ಅಪಘಾತ: ಮುಂಬೈ-ಆಗ್ರಾ ಹೆದ್ದಾರಿಯ ಚಂದವಾಡ ಬಳಿಯ ರಾಹುದ್ ಘಾಟ್ ತುಂಬಾ ಅಪಾಯಕಾರಿಯಾಗಿದೆ. ಈ ಘಾಟ್‌ನಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಈ ಹಿಂದೆ ಇಲ್ಲಿ ಎಸ್‌ಟಿ ಬಸ್ ಅಪಘಾತವಾಗಿತ್ತು. ಆಗ ಕೆಲವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಸ್ಥಳವನ್ನು ಆರ್‌ಟಿಒ 'ಅಪಘಾತ ವಲಯ' (Accident zone) ಎಂದು ಘೋಷಿಸಿದೆ. ಈ ಸ್ಥಳದಲ್ಲಿ ಅಪಘಾತಗಳನ್ನು ತಪ್ಪಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ನಾಗರಿಕರ ಒತ್ತಾಯವಾಗಿದೆ.

ಓದಿ: ಬಿಹಾರದಲ್ಲಿ ಮದುವೆಗೆ ಹೊರಟ ಆರು ಮಂದಿ ದುರ್ಮರಣ: ಕೇರಳದಲ್ಲಿ ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ಐವರು ಬಲಿ - 11 people died

ETV Bharat Logo

Copyright © 2024 Ushodaya Enterprises Pvt. Ltd., All Rights Reserved.