ETV Bharat / bharat

ಚುನಾವಣೆ ಹೊತ್ತಲ್ಲಿ ಸಿಎಂ ಜಗನ್​ಗಾಗಿ ಎರಡು ಹೊಸ ಹೆಲಿಕಾಪ್ಟರ್​; ವಿಪಕ್ಷಗಳ ಟೀಕೆ

author img

By ETV Bharat Karnataka Team

Published : Feb 23, 2024, 11:52 AM IST

andra-pradesh-government-approved-two-new-helicopter-for-cm-jagan
andra-pradesh-government-approved-two-new-helicopter-for-cm-jagan

ಸಾರ್ವತ್ರಿಕ ಚುನಾವಣೆ ಹೊತ್ತಿನಲ್ಲಿ ಭದ್ರತೆ ನೆಪ ಹೇಳಿ ಸಿಎಂಗಾಗಿ ಎರಡು ಹೊಸ ಹೆಲಿಕಾಪ್ಟರ್​ ಬಾಡಿಗೆ ಸೇವೆಗೆ ಪಡೆಯಲು ಸರ್ಕಾರ ಮುಂದಾಗಿದೆ. ಇದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಅಮರಾವತಿ: ಸಾರ್ವತ್ರಿಕ ಚುನಾವಣಾ ಹೊತ್ತಿನಲ್ಲಿ ರಾಜ್ಯ ಸರ್ಕಾರ ಮುಖ್ಯಮಂತ್ರಿ ಜಗನ್ಮೋಹನ್​​ ರೆಡ್ಡಿ ಬಳಕೆಗಾಗಿ ಎರಡು ಹೊಸ ಬ್ರಾಂಡ್​​​ ಹೆಲಿಕಾಪ್ಟರ್​​ಗಳನ್ನು ಬಾಡಿಗೆ ಪಡೆಯಲು ಮುಂದಾಗಿದೆ. ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದಲ್ಲಿ ಮತ್ತು ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಸಿಎಂ ಓಡಾಟಕ್ಕೆ ಈ ಹೆಲಿಕಾಪ್ಟರ್​​ಗಳು ಲಭ್ಯವಿರಲಿವೆ. ಗ್ಲೋಬಲ್ ವೆಕ್ಟ್ರಾ ಕಂಪನಿಯಿಂದ ಈ ಎರಡು ಹೆಲಿಕಾಪ್ಟರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಖರೀದಿಸಲಾಗುತ್ತಿದೆ. ಈ ವಿಮಾನಕ್ಕೆ ತಿಂಗಳ ಬಾಡಿಗೆ ಕ್ರಮವಾಗಿ 1,91,75,000 ಮತ್ತು 3,83,50,000 ರೂ ಆಗಿದೆ.

ಇದೇ ಮೇ ತಿಂಗಳಲ್ಲಿ ಜಗನ್​ ಸರ್ಕಾರದ ಅವಧಿ ಮುಗಿಯಲಿದೆ. ಈ ಹೊತ್ತಿನಲ್ಲಿ ಮೂರು ತಿಂಗಳ ಬಾಡಿಗೆಗಾಗಿ ಈ ಹೆಲಿಕಾಪ್ಟರ್​​ಗೆ ಸರ್ಕಾರ 11.50 ಕೋಟಿ ಪಾವತಿ ಮಾಡಬೇಕಿದೆ. ಇದರ ಹೊರತಾಗಿ ಇದರ ನಿರ್ವಹಣೆ ವೆಚ್ಚ, ಪೈಲಟ್​​ಗಳಿಗೆ ಸ್ಟಾರ್​ ಹೋಟೆಲ್​ ವಾಸ್ತವ್ಯ, ಪೈಲಟ್​​ಗಳ ಸಾರಿಗೆ ವೆಚ್ಚ ಮತ್ತು ತಾಂತ್ರಿಕ ಸಿಬ್ಬಂದಿಗಳ ವೆಚ್ಚ, ಇಂಧನ ಸಾರಿಗೆ ವೆಚ್ಚ, ಹೆಲಿಕಾಪ್ಟರ್​ ಸಿಬ್ಬಂದಿಗಳ ವೈದ್ಯಕೀಯ ಖರ್ಚು ಮತ್ತು ಎಟಿಸಿ ವೆಚ್ಚವನ್ನು ಹೆಚ್ಚುವರಿಯಾಗಿ ವಿಧಿಸಲಾಗುವುದು. ಹೆಲಿಕಾಪ್ಟರ್ ಖರೀದಿಗೆ ಅನುಮತಿ ನೀಡಿ ಗುರುವಾರ ಹೂಡಿಕೆ ಮತ್ತು ಮೂಲಸೌಕರ್ಯ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಎನ್. ಯುವರಾಜ್ ಆದೇಶಿಸಿದ್ದಾರೆ.

ಭದ್ರತಾ ಬೆದರಿಕೆ ಹಿನ್ನೆಲೆ ಹೆಲಿಕಾಪ್ಟರ್​​: ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿಗೆ ಜೆಡ್​​​ ಪ್ಲಸ್​​ ಕ್ಯಾಟಗರಿ ಭದ್ರತೆ ನೀಡಲಾಗಿದೆ. ಎಡಪಂಥೀಯ ತೀವ್ರವಾದಿಗಳಿಂದ, ಉಗ್ರರು, ಅಪರಾಧಿ ಗ್ಯಾಂಗ್​​ ಸಂಘಟನೆ ಮತ್ತು ಸಾಮಾಜಿಕ ವಿರೋಧಿ ಗುಂಪಿನಿಂದ ಸಿಎಂ ಬೆದರಿಕೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಅವರ ಭದ್ರತಾ ವ್ಯವಸ್ಥೆಯಲ್ಲಿ ಹೆಚ್ಚಿನ ಜಾಗೃತಿವಹಿಸಲಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಭೇಟಿಗಾಗಿ ನಾಗರಿಕ ವಿಮಾನಯಾನ ನಿಗಮವು 2010 ರಿಂದ ಬೆಲ್ 412 ವಿಟಿ ಎಂಆರ್​ವಿ ವಿಮಾನವನ್ನು ಬಳಕೆ ಮಾಡುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಹೆಲಿಕಾಪ್ಟರ್​ ಬಳಕೆ ಹೆಚ್ಚುತ್ತಿದ್ದು, ದೂರದ ಪ್ರಯಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಹೆಲಿಕಾಪ್ಟರ್​ ಅನ್ನು ಬದಲಾಯಿಸಿ ಹೊಸದರ ಅವಶ್ಯಕತೆ ಹೆಚ್ಚಿದೆ ಎಂದು ಗುಪ್ತಚರ ವಿಭಾಗದ ಡಿಜಿಪಿ ಪಿಎಸ್​ಆರ್​ ಆಂಜನೇಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಹಿನ್ನೆಲೆ ಹೂಡಿಕೆ ಮತ್ತು ಮೂಲ ಸೌಕರ್ಯ ಇಲಾಲೆ ಈ ಬಾಡಿಗೆ ಆಧಾರದ ಮೇಲೆ ಈ ಹೆಲಿಕಾಪ್ಟರ್​ ಅನ್ನು ಪಡೆದಿದೆ. ಈ ಹೆಲಿಕಾಪ್ಟರ್​ ಅನ್ನು ಸಿಎಂ ಮತ್ತು ಇತರ ವಿವಿಐಪಿಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಚುನಾವಣಾ ಪ್ರಚಾರ: ಮುಂದಿನ 10-15 ದಿನದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆ ಆಗಲಿದೆ. ಎರಡು ತಿಂಗಳೊಳಗೆ ಚುನಾವಣೆ ನಡೆಯಲಿದೆ. ಈ ಸಮಯದಲ್ಲಿ ಸಿಎಂ ಜಗನ್​ ಭದ್ರತೆಯ ನೆಪ ಹೇಳಿ ಚುನಾವಣಾ ಪ್ರಚಾರಕ್ಕಾಗಿ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಹಾಕಿ ಹೆಲಿಕಾಪ್ಟರ್​ ಬಳಕೆಗೆ ಮುಂದಾಗಿದ್ದಾರೆ ಎಂದು ವಿಪಕ್ಷಗಳು ಟೀಕಿಸಿವೆ.

ಭದ್ರತೆ ನೆಪದಲ್ಲಿ ಅನಗತ್ಯ ಉತ್ಸಾಹ: ಸಿಎಂ ಅವರ ಭದ್ರತೆ ವ್ಯವಸ್ಥೆಯಲ್ಲಿ ಯಾರು ಕೂಡ ಲೋಪವೆಸಗಲು ಸಾಧ್ಯವಿಲ್ಲ. ಆದರೆ, ಆಂಧ್ರ ಪ್ರದೇಶ ಪೊಲೀಸರು ಸಿಎಂ ಭದ್ರತೆ ಹೆಸರಿನಲ್ಲಿ ಅನಗತ್ಯ ಉತ್ಸಾಹ ತೋರಲಾಗುತ್ತಿದೆ ಎಂದು ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಭೀಕರ ಅಪಘಾತದಲ್ಲಿ ಯುವ ಶಾಸಕಿ ಲಾಸ್ಯ ನಂದಿತಾ ಸಾವು: ಸಿಎಂ, ಬಿಆರ್‌ಎಸ್ ನಾಯಕರು ಸೇರಿ ಹಲವರಿಂದ ಸಂತಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.