ರುದ್ರಪ್ರಯಾಗದಲ್ಲಿ ಭಾರಿ ಮಳೆ: ಬದರಿನಾಥ, ಕೇದಾರನಾಥಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಬಂದ್​​

By

Published : Jul 6, 2022, 5:05 PM IST

thumbnail

ರುದ್ರಪ್ರಯಾಗ(ಉತ್ತರಾಖಂಡ): ಜಿಲ್ಲೆಯಲ್ಲಿ ತಡರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಜನ - ಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದಾಗಿ ಋಷಿಕೇಶ - ಬದರಿನಾಥ್, ಸಿರೋಬ್‌ಗಡ ಮತ್ತು ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯನ್ನು ಭತ್ವಾರಿಸೈನ್‌ನಲ್ಲಿ ಮುಚ್ಚಲಾಗಿದೆ. ಸಿರೋಬ್‌ಗಡದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಎರಡೂ ಹೆದ್ದಾರಿಗಳು ಬಂದ್ ಆಗಿರುವುದರಿಂದ ಚಾರ್ಧಾಮ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಸಮಸ್ಯೆಯಾಗಿದೆ. ಇದಲ್ಲದೇ ತಿಲವಾರ-ಮಾಯಾಲಿ-ಘನ್ಸಾಲಿ ಮೋಟಾರು ಮಾರ್ಗದ ಪಾಲಕುರಳಿಯಲ್ಲಿ ಮರಗಳು ಉರುಳಿಬಿದ್ದಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.