ಧಾರವಾಡ ಕೃಷಿಮೇಳ: ಗಮನ ಸೆಳೆದ ಫಲಪುಷ್ಪ ಪ್ರದರ್ಶನ
ಧಾರವಾಡ: ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ನಿಂತು ಹೋಗಿದ್ದ ಧಾರವಾಡದ ಕೃಷಿಮೇಳ ಪ್ರಸಕ್ತ ವರ್ಷದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಮೇಳದಲ್ಲಿ ಫಲ, ಪುಷ್ಪ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ವಿವಿಧ ತಳಿಯ ಹೂ ಹಣ್ಣುಗಳ ಕಲಾಕೃತಿಗಳು, ಕುಬ್ಜ ಗಿಡಗಳು ಜನಮನ ಸೆಳೆದವು. ಧಾರವಾಡ ಅಷ್ಟೇ ಅಲ್ಲದೇ ಹಾವೇರಿ, ಗದಗ, ಬೆಳಗಾವಿ, ರಾಯಚೂರು ಸೇರಿದಂತೆ ಅನೇಕ ಕಡೆಗಳಿಂದ ರೈತರು ಆಗಮಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಕೃಷಿಮೇಳ ಆಯೋಜಿಸಲಾಗಿದೆ.