ಹಾಸನಾಂಬೆ ದರ್ಶನ ಪಡೆದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ..
ಹಾಸನ:ಶ್ರೀ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಅವರು ಹಾಸನಾಂಬೆ ದರ್ಶನ ಪಡೆದರು. ಮೊದಲು ಹಾಸನಾಂಬೆ ದೇವಿ ಗರ್ಭಗುಡಿಗೆ ತೆರಳಿ ವಿಶೇಷ ಪೂಜೆ ಮಾಡುವುದರ ಮೂಲಕ ಪ್ರಾರ್ಥಿಸಿದರು. ನಂತರ ದರ್ಬಾರ್ ಗಣಪತಿ, ಶ್ರೀ ಸಿದ್ದೇಶ್ವರ ದೇವಾಲಯಕ್ಕೂ ತೆರಳಿ ಪೂಜೆ ನೆರವೇರಿಸಿದರು.