ರಾಜಕೀಯದಲ್ಲಿ ಮಠಾಧೀಶರ ಹಸ್ತಕ್ಷೇಪ ಸರಿಯಲ್ಲ, ಯಡಿಯೂರಪ್ಪ ಸಮರ್ಥ ನಾಯಕ: ಸುಬುಧೇಂದ್ರ ಶ್ರೀಗಳು

By

Published : Jul 26, 2021, 11:48 AM IST

Updated : Jul 26, 2021, 11:57 AM IST

thumbnail

ಹೊಸಪೇಟೆ (ವಿಜಯನಗರ) : ರಾಜಕೀಯ ಕ್ಷೇತ್ರದಲ್ಲಿ ಮಠಾಧೀಶರು ಹಾಗೂ ಧಾರ್ಮಿಕ‌ ಮುಖಂಡರು ಹಸ್ತಕ್ಷೇಪ ಮಾಡಿ ಮಾತನಾಡುವುದು ಯೋಗ್ಯವಲ್ಲ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಅಭಿಪ್ರಾಯ ವ್ಯಕ್ತಡಿಸಿದ್ದಾರೆ. ಕರ್ನಾಟಕ ಶಾಂತಿ ಪ್ರಿಯ ರಾಜ್ಯವಾಗಿದೆ. ರಾಜ್ಯದ ಅಭಿವೃದ್ಧಿ ಹಾಗೂ ಸಮರ್ಥ ನೇತೃತ್ವದ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಲಿ. ಯಡಿಯೂರಪ್ಪ ಅವರು ಸಮರ್ಥ ನಾಯಕರಾಗಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಸ್ವಾಮೀಜಿ ಹೇಳಿದರು. ರಾಜ್ಯ ರಾಜಕಾರಣದ ಕುರಿತು ಈಟಿವಿ ಭಾರತದ ಜೊತೆ ಅವರು ಅಭಿಪ್ರಾಯ ಹಂಚಿಕೊಂಡರು.

Last Updated : Jul 26, 2021, 11:57 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.