ರಾಜಕೀಯ ಚಟುವಟಿಕೆಗಳ ನಡುವೆಯೂ 'ಬ್ಯಾಟ್' ಬೀಸಿದ ರಾಘವೇಂದ್ರ ಹಿಟ್ನಾಳ್!
ರಾಜಕೀಯ ಹಾಗೂ ಕಾರ್ಯಕ್ರಮಗಳ ನಡುವೆಯೂ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಬ್ಯಾಟ್ ಹಿಡಿದು ಇಂದು ಕೆಲಕಾಲ ಕ್ರಿಕೆಟ್ ಆಡಿ ಮಿಂಚಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಗವಿಶ್ರೀ ಕಪ್ನ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಾಮೆಂಟ್ ಆರಂಭದಲ್ಲಿ ಶಾಸಕರು ಪಾಲ್ಗೊಂಡು ಒಂದು ಓವರ್ ಬಾಲ್ಗೆ ಬ್ಯಾಟ್ ಬೀಸಿದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ ಹಾಗೂ ಮುಖಂಡ ಕೆ.ಎಂ. ಸಯ್ಯದ್ ಬೌಲಿಂಗ್ ಮಾಡುವ ಮೂಲಕ ಶಾಸಕರ ಬ್ಯಾಟಿಂಗ್ಗೆ ಎದುರಾದರು. ಈ ಇಬ್ಬರ ಬಾಲ್ಗಳನ್ನು ಹಿಟ್ನಾಳ್ ಸಮರ್ಥವಾಗಿ ಎದುರಿಸಿದರು.