ರೋಗಕ್ಕೆ ತುತ್ತಾದ ದ್ರಾಕ್ಷಿ ಬೆಳೆ: ಆತಂಕದಲ್ಲಿ ಗುಮ್ಮಟ ನಗರಿ ರೈತರು
ರಾಜ್ಯದಲ್ಲಿ ಹೆಚ್ಚು ದ್ರಾಕ್ಷಿ ಬೆಳೆಯುವ ಪ್ರದೇಶಗಳಲ್ಲಿ ಗುಮ್ಮಟ ನಗರಿ ವಿಜಯಪುರವೂ ಒಂದು. ಈ ಬಾರಿ ಉತ್ತಮ ಮಳೆಯಾದ ಪರಿಣಾಮ ದ್ರಾಕ್ಷಿ ಬೆಳೆ ಒಳ್ಳೆಯ ಲಾಭ ತಂದುಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ಸಂಕಷ್ಟ ಎದುರಾಗಿದೆ. ದ್ರಾಕ್ಷಿ ಬೆಳೆಗೆ ರೋಗ ತಗುಲಿದ್ದರಿಂದ ಕೃಷಿಕರು ಆತಂಕದಲ್ಲಿದ್ದಾರೆ.