ಬೈಕ್ ಸವಾರನ ಮೇಲೆ ಹರಿದ ಬಸ್... ಹೆಲ್ಮೆಟ್ ಹಾಕಿದರೂ ಉಳಿಯಲಿಲ್ಲ ಪ್ರಾಣ
ಮಂಡ್ಯ: ಬೈಕ್ ಸವಾರನ ಮೇಲೆ ಸಾರಿಗೆ ಸಂಸ್ಥೆಯ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಗರದ ಮಹಿಳಾ ಕಾಲೇಜು ಮುಂಭಾಗ ನಡೆದಿದೆ. ರಾಜ್ಕುಮಾರ್ ಬಡಾವಣೆ ನಿವಾಸಿ ಎ.ಬಿ.ರಾಮಣ್ಣ (50) ಮೃತರು. ಬಸ್ ಚಾಲಕನ ಅಜಾಗರೂಕತೆಯಿಂದ ಚಾಲಕನ ತಲೆ ಜಜ್ಜಿಹೋಗಿದೆ. ರಾಮಣ್ಣ ಹೆಲ್ಮೆಟ್ ಹಾಕಿದ್ದರೂ ಬಸ್ ಚಕ್ರ ತಲೆಯ ಮೇಲೆ ಹರಿದಿದೆ. ಮಂಡ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.