ಕ್ರೈಸ್ತ ಸಮುದಾಯದಿಂದ ಆಯುಧ ಪೂಜೆ-ಸಂತ ಕ್ರಿಸ್ಟೋಫರ್​ಗೆ ಪ್ರಾರ್ಥನೆ

By

Published : Oct 25, 2020, 7:26 PM IST

thumbnail

ಹಿಂದೂಗಳ ಪವಿತ್ರ ಹಬ್ಬವಾದ ಆಯುಧ ಪೂಜೆಯನ್ನು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಕ್ರೈಸ್ಥ ಸಮುದಾಯದವರು ಸಂತ ಲೂರ್ದುಮಾತೆ ಚರ್ಚ್​ನಲ್ಲಿ ಆಚರಿಸಿದರು. ಪಾದ್ರಿ ಕ್ರಿಸ್ಟೋಫರ್ ಸಗಾಯರಾಜ್ ಪ್ರಾರ್ಥನೆ ಮಾಡಿ ಪವಿತ್ರ ಜಲವನ್ನು ವಾಹನಗಳಿಗೆ ಪ್ರೋಕ್ಷಿಸಿ ಶುಭ ಹಾರೈಸಿದರು. ಈ ವೇಳೆ, ಅಪಘಾತಗಳಿಂದ ಪಾರು ಮಾಡುವ ರಕ್ಷಕ ಎಂದೇ ಕರೆಯುವ  ಸಂತ ಕ್ರಿಸ್ಟೋಫರ್​ಗೆ ವಾಹನಗಳ ಮಾಲೀಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಸಮುದಾಯದ ಕೆಲವರು ಇದರಲ್ಲಿ ಭಾಗಿಯಾಗಿದ್ದು ವಿಶೇಷ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.