ಯುವಗಲಂ ಪಾದಯಾತ್ರೆ ಮತ್ತೆ ಪ್ರಾರಂಭ: ಮೊದಲ ದಿನವೇ ನಾರಾ ಲೋಕೇಶ್​ ಬೆಂಬಲಕ್ಕೆ ನಿಂತ 20,000 ಜನ

By ETV Bharat Karnataka Team

Published : Nov 27, 2023, 5:05 PM IST

Updated : Nov 27, 2023, 5:43 PM IST

thumbnail

ರಾಜೋಲೆ (ಪೂರ್ವ ಗೋದಾವರಿ): 79 ದಿನಗಳ ಸುದೀರ್ಘ ಅಂತರದ ನಂತರ ತೆಲುಗು ದೇಶಂ ಪಕ್ಷದ (ಟಿಡಿಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್​  ಕೈಗೊಂಡಿರುವ ಯುವಗಲಂ ಪಾದಯಾತ್ರೆ ಮತ್ತೆ ಪ್ರಾರಂಭಗೊಂಡಿದೆ. ಪಾದಯಾತ್ರೆ ಪ್ರಾರಂಭಗೊಳ್ಳುತ್ತಿದ್ದಂತೆ ಬಹುಸಂಖ್ಯೆಯ ಬೆಂಬಲಿಗರಿಂದ ನಾರಾ ಲೋಕೇಶ್​ ಅವರಿಗೆ ಅಭೂತಪೂರ್ವ ಸ್ವಾಗತ ಕೂಡಾ ಸಿಕ್ಕಿದೆ. ಪಾದಯಾತ್ರೆಯಲ್ಲಿ ಸುಮಾರು 20,000 ಜನರು ಪಾಲ್ಗೊಳ್ಳುವ ಮೂಲಕ ಬೆಂಬಲ ಸೂಚಿಸಿದ್ದಾರೆ.

ಸೆ. 9 ರಂದು ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಬಂಧನ ಬಳಿಕ ಕೋನಸೀಮಾ ಜಿಲ್ಲೆಯ ರಾಜೋಲು ಕ್ಷೇತ್ರದ ಪೊದಲದ ಎಂಬಲ್ಲಿ ಅಂಬೇಡ್ಕರ್​ ಅವರು ಪಾದಯಾತ್ರೆಗೆ ವಿರಾಮ ಘೋಷಿಸಿದ್ದರು. ಇದೀಗ ವಿರಾಮ ಘೋಷಿಸಿದ್ದ ಅದೇ ಸ್ಥಳದಿಂದ ಇಂದು ಮತ್ತೆ ಪಾದಯಾತ್ರೆ ಪ್ರಾರಂಭಗೊಂಡಿದೆ. ಪ್ರಸ್ತುತ ಜಗನ್​ ಮೋಹನ್​ ರೆಡ್ಡಿ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ವಿವಿಧ ವರ್ಗದ ಜನರೊಂದಿಗೆ ಲೋಕೇಶ್​ ಸಂವಾದ ನಡೆಸಲಿದ್ದಾರೆ. ರಾಜೋಲೆ​ ವಿಧಾನಸಭಾ ಕ್ಷೇತ್ರದಿಂದ ನಾರಾ ಲೋಕೇಶ್​ ಪ್ರಯಾಣ ಪ್ರಾರಂಭಿಸಿದ್ದು, ತಾಟಿಪಾಕ ಕೇಂದ್ರದಲ್ಲಿ ಈ ದಿನದ ಭಾಷಣ ಮಾಡಲಿದ್ದಾರೆ. ಮಾಮಿಡಿ ಕುದೂರಿನಲ್ಲಿ ಸ್ಥಳೀಯರೊಂದಿಗೆ ಸಂವಾದ ನಡೆಸಲಿದ್ದು, ಅಂತಿಮವಾಗಿ ಪೆರೂರು ಪಂಚಾಯತ್​ನಲ್ಲಿ ಮೊದಲ ದಿನದ ಪ್ರಯಾಣ ಮುಕ್ತಾಯಗೊಳಿಸಲಿದ್ದಾರೆ.

ಇದನ್ನೂ ಓದಿ: ಕೌಶಲಾಭಿವೃದ್ಧಿ ಹಗರಣ: ಚಂದ್ರಬಾಬುಗೆ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಆಂಧ್ರ ಸರ್ಕಾರದ ಅರ್ಜಿ

Last Updated : Nov 27, 2023, 5:43 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.