VIDEO: ಫ್ಲೈಓವರ್ ತಡೆಗೋಡೆ ಏರಿದ ಕೆಎಸ್​ಆರ್​ಟಿಸಿ ಬಸ್, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ - KSRTC Bus Accident

By ETV Bharat Karnataka Team

Published : May 18, 2024, 6:02 PM IST

thumbnail
ಫ್ಲೈಓವರ್ ತಡೆಗೋಡೆ ಏರಿದ ಕೆಎಸ್​ಆರ್​ಟಿಸಿ ಬಸ್ (ETV Bharat)

ನೆಲಮಂಗಲ: ಇಲ್ಲಿನ ನೆಲಮಂಗಲ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್​​ಆರ್​​‌ಟಿಸಿ ಬಸ್​ ಕೂದಲೆಳೆ ಅಂತರದಲ್ಲಿ ಭಾರೀ ಅವಘಡದಿಂದ ಪಾರಾಗಿದೆ. ತಾಲೂಕಿನ ಅಡಕರಮಾರನಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿವೈಡರ್​ಗೆ ಡಿಕ್ಕಿ ಹೊಡೆದು ಫ್ಲೈ ಓವರ್ ತಡೆಗೋಡೆ ಏರಿದ ಘಟನೆ ನಡೆದಿದೆ. ಬಸ್​​ನಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಫ್ಲೈ ಓವರ್ ತಡೆಗೋಡೆ ಮೇಲೆ ನಿಂತ ಬಸ್: ಕೆಎಸ್ಆರ್​ಟಿಸಿ ಬಸ್ ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಸಂಚರಿಸುತ್ತಿತ್ತು. ಈ ವೇಳೆ ಹೆದ್ದಾರಿಯಲ್ಲಿರುವ ಬಸ್ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಬಳಿಕ 40 ಅಡಿ ಎತ್ತರದ ಜೋಡಿ ಫ್ಲೈ ಓವರ್ ತಡೆಗೋಡೆ ಏರಿ ಬಸ್ ನಿಂತಿದೆ. ಘಟನೆಯಲ್ಲಿ ಚಾಲಕ-ನಿರ್ವಾಹಕ‌ ಸೇರಿ ಆರು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಸ್​ನ ಮುಂಭಾಗ ನಜ್ಜುಗುಜ್ಜಾಗಿದೆ.  

ಅಪಘಾತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಬಂದ ನೆಲಮಂಗಲ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ, ಟ್ರಾಫಿಕ್ ಜಾಮ್ ನಿಯಂತ್ರಿಸಿದರು. ಜೊತೆಗೆ ಅಪಾಯಕಾರಿ ರೀತಿಯಲ್ಲಿ ನಿಂತಿದ್ದ ಬಸ್​ಅನ್ನು ಕ್ರೇನ್ ಮೂಲಕ ಕೆಳಗಿಳಿಸಿದರು. ಈ ವೇಳೆ ಸ್ಥಳದಲ್ಲಿ ಹಲವು ಸಾರ್ವಜನಿಕರು ಸೇರಿದ್ದರು.  

ಇದನ್ನೂ ಓದಿ: ಸ್ಟೇರಿಂಗ್ ರಾಡ್ ತುಂಡಾಗಿ ಕೆಎಸ್​​ಆರ್​ಟಿಸಿ ಬಸ್​​ ಅಪಘಾತ; ಚಾಲಕ ಸೇರಿ ಹಲವರಿಗೆ ಗಾಯ - KSRTC Bus Accident

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.