ಗುಡ್​ ಲಕ್​ ಟೀಮ್​ ಭಾರತ್: ಸೆಮಿಫೈನಲ್​ ಪಂದ್ಯಕ್ಕೆ ಶುಭ ಕೋರಿದ ಮರಳು ಕಲಾವಿದ ಸುದರ್ಶನ್

By ETV Bharat Karnataka Team

Published : Nov 15, 2023, 2:13 PM IST

Updated : Nov 15, 2023, 3:24 PM IST

thumbnail

ಪುರಿ(ಒಡಿಶಾ): ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. ಎರಡೂ ತಂಡಗಳು ಗೆಲ್ಲುವ ತವಕದಲ್ಲಿವೆ. ಭಾರತ ಈಗಾಗಲೇ ಲೀಗ್ ಹಂತದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ನಾಳೆ ಕೊಲ್ಕತ್ತಾದ ಈಡನ್​ ಗಾರ್ಡನ್ಸ್​​ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಪೈಪೋಟಿ ನಡೆಯಲಿದೆ. ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಾಲ್ಕು ತಂಡಗಳು ವಿಶ್ವಕಪ್​ ಗೆಲ್ಲಲು ಭರ್ಜರಿ ಸಿದ್ಧತೆ ನಡೆಸಿದ್ದು, ಈ ಬಾರಿ ಯಾರು ವಿಶ್ವಕಪ್​ ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲು ದೇಶದೆಲ್ಲೆಡೆ ವಿಶೇಷ ಪ್ರಾರ್ಥನೆ ಮಾಡುತ್ತಿದ್ದಾರೆ. ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿರುವ ಭಾರತಕ್ಕೆ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್​ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ. ಪುರಿಯ ಸಮುದ್ರ ತೀರದಲ್ಲಿ ಬ್ಯಾಟ್​ ಮಾದರಿ ಮರಳು ಕಲಾಕೃತಿಯನ್ನು ಮಾಡಿರುವ ಅವರು, ಗುಡ್​ ಲಕ್​ ಟೀಮ್​ ಭಾರತ್​ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಮರಳಲ್ಲರಳಿದ ವಿರಾಟ್ ಕೊಹ್ಲಿ: ಇದು ಕಲಾವಿದ ಸುದರ್ಶನ್ ಪಟ್ನಾಯಕ್ ಕೈಚಳಕ- ವಿಡಿಯೋ

Last Updated : Nov 15, 2023, 3:24 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.